Kannada NewsKarnataka News

18 ರಂದು ಬಸಾಪುರದಲ್ಲಿ ಹೊನಲು ಬೆಳಕಿನ ಪಗಡಿ ಪಂದ್ಯಾವಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ‌ ಕಾರ್ತಿಕೋತ್ಸವ ನಿಮಿತ್ತ ಹೊನಲು ಬೆಳಕಿನ ಪಗಡಿ ಪಂದ್ಯಾವಳಿಯನ್ನು ನವೆಂಬರ 18 ರಂದು ರಾತ್ರಿ 8 ಗಂಟೆಗೆ ಆಯೋಜಿಸಲಾಗಿದೆ.

ಬಸಾಪುರದ ಗವಿಸಿದ್ಧೇಶ್ವರ ಮಠದ ಶ್ರೀ ಗವಿಸಿದ್ಧೇಶ್ವರ ಅಪ್ಪಾಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಭಾಗವಹಿಸುವರು. ಕೆಇಬಿ ಅಧ್ಯಕ್ಷ ಕಲಗೌಡ ಬಸನಗೌಡ ಪಾಟೀಲ  ನಿರ್ದೇಶಕ ಈರಪ್ಪ ರುದ್ರಪ್ಪ ಬಂಜಿರಾಮ ಉದ್ಘಾಟಿಸುವರು. ಜಿಪಂ ಮಾಜಿ ಸದಸ್ಯ ಸಿದ್ದಲಿಂಗ ಸಿದಗೌಡರ ಅಧ್ಯಕ್ಷತೆ ವಹಿಸುವರು.
 ರಾಜಕೀಯ ಧುರೀಣ ಬಸವರಾಜ ಹಂದ್ರಿ, ಜಿಪಂ ಸದಸ್ಯ ಮಂಜುನಾಥ ಪಾಟೀಲ, ತಾಪಂ ಮಾಜಿ ಉಪಾಧ್ಯಕ್ಷ ಗಣಪತಿ ಹುಲಕುಂದ ಹಾಗೂ ತಾಪಂ ಸದಸ್ಯ ನಿಂಗಪ್ಪ ಬಂಜಿರಾಮ ಪಾಲ್ಗೊಳ್ಳುವರು.
ಪಂದ್ಯಾವಳಿಯ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಭಾಗವಹಿಸಲು ಇಚ್ಛಿಸುವ ಆಸಕ್ತ ತಂಡಗಳು ಹೆಚ್ಚಿನ ಮಾಹಿತಿಗಾಗಿ – 9845210893 (ಜಯವಂತ) ಅಥವಾ 6360724768 (ಮಾರುತಿ) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button