Belagavi NewsBelgaum NewsKannada NewsKarnataka NewsLatest

ಘಟಪ್ರಭ ನದಿ ತೀರದ 567 ಸಂತ್ರಸ್ತ ಕುಟುಂಬಗಳಿಗೆ ಅವಶ್ಯಕ ವಸ್ತುಗಳ ವಿತರಣೆ

ಪಾವಗಡ ರಾಮಕೃಷ್ಣ ಸೇವಾ ಆಶ್ರವದಿಂದ ಆಹಾರ ಪಧಾರ್ಥ, ಬಟ್ಟೆಗಳ ಕಿಟ್ಟ ವಿತರಣೆ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಬೆಳಗಾವಿ ಸುತ್ತಮುತ್ತ ಮತ್ತು ಪಶ್ಚಿಮಘಟದಲ್ಲಿ ಸುರಿದ ಮಳೆಯಿಂದ ಘಟಪ್ರಭಾ ನದಿ ದಡದಲ್ಲಿನ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಪ್ರವಾಹಕ್ಕೀಡಾಗಿರುವ ಸುಮಾರು ೫೬೭ ಸಂತ್ರಸ್ತ ಕುಟುಂಬಗಳಿಗೆ ದಿನ ನಿತ್ಯ ಬಳಕೆಯ ಆಹಾರ ಪದಾರ್ಥ, ಬಟ್ಟೆಗಳ ಕಿಟ್ ನ್ನು ತುಮಕೂರ ಜಿಲ್ಲೆಯ ಪಾವಗಡ ರಾಮಕೃಷ್ಣ ಸೇವಾ ಆಶ್ರಮದ ಅಧ್ಯಕ್ಷರಾದ ಶ್ರೀ ಜಪಾನದಂದ ಜೀ ಮಹಾರಾಜರು ವಿತರಿಸಿ ಮಾನವೀಯತೆ ಮೆರೆದರು.
ಮಸಗುಪ್ಪಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ತಂಗಿದ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಿದ ಶ್ರೀ ಜಪಾನದಂದ ಜೀ ಮಹಾರಾಜರು ಮಾತನಾಡಿ, ಬೆಳಗಾವಿ, ಬಾಗಲಕೋಟ ಸೇರಿದಂತೆ ನಾಡಿನಲ್ಲಿ ಸಂಕಷ್ಟಕ್ಕೆ ಹೊಳಗಾದ ಜನರಿಗೆ ನಮ್ಮ ರಾಮಕೃಷ್ಣ ಸೇವಾ ಆಶ್ರಮ ಇನ್ಪೋಸಿಸ್ ಫೌಂಡೇಶನ್ ಅವರ ಸಹೋಗದಲ್ಲಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಕಾರದೊಂದಿಗೆ ಕಳೆದ ಮೂವತ್ತು ವರ್ಷಗಳಿಂದ ಸಹಾಯ ಮಾಡುತ್ತಾ ಬಂದಿದ್ದು. ಈ ಪ್ರವಾಹ ಸಂತ್ರಸ್ತರಿಗೆ ಮೊದಲನೇಯದಾಗಿ ಸುಮಾರು ಐದು ಸಾವಿರ ಕುಂಬಗಳಿಗೆ ಸಹಾಯ ಮಾಡುತ್ತಿದ್ದೇವೆ. ಘಟಪ್ರಭ ನದಿ ತೀರದ ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಿಸುವ ಕಾರ್ಯಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮೂಡಲಗಿ ತಾಲೂಕಾಡಳಿತದ ಸಹಾಯ ಕಾರ್ಯ ಶ್ಲಾಘನಿಯವಾದದ್ದು. ದೇವತಾ ಸ್ವರೂಪಿಗಳು ನೀವು, ನಿಮಗೆ ಏನೇ ಕೊಟ್ಟರೂ ಅದು ಭಗವಂತನಿಗೆ ಸೇರಿದ್ದು ಎಂದರು.

ರಾಮಕೃಷ್ಣ ಸೇವಾ ಆಶ್ರಮದಿಂದ ಉಚಿತವಾಗಿ ಕುಷ್ಠರೋಗ, ಕ್ಷಯರೋಗ ಆಸ್ಪತ್ರೆ, ಕಣ್ಣು ಇಲ್ಲದವರಿಗೆ ಕಣ್ಣಿನ ಆಸ್ಪತ್ರೆ, ಎಚ್.ಐ.ವಿ/ಏಡ್ಸ್ ಆಸ್ಪತ್ರೆಯನ್ನು ಕಷ್ಟದಲ್ಲಿರುವರಿಗೆ ಸೇವೆಯನ್ನು ಮಾಡಿಕೊಂಡು ಬರುವದಕ್ಕೆ ಇನ್ಪೋಸಿಸ್ ಫೌಂಡೇಶನ್ ಸಹಕಾರ ನೀಡುತ್ತದೆ, ಎಲ್ಲರಿಗೂ ಭಗವಂತನ ಕೃಪೆ ಸದಾ ಆಗಲಿ ಎಂದು ಎಂದು ಶ್ರೀ ಜಪಾನದಂದ ಜೀ ಶ್ರೀಗಳು ಪ್ರಾರ್ಥಿಸಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಬೆಳಗಾವಿ ರಾಮಕೃಷ್ಣ ಸೇವಾ ಆಶ್ರಮದ ಜಿಲ್ಲಾ ಸಂಯೋಜಕ ಮಹಾಂತೇಶ ಲೋಟಿ ಮತ್ತು ಪಾವಗಡ ಆಶ್ರಮದ ಹರ್ಷಾ ಮಾತನಾಡಿದರು.
ಸಂತ್ರಸ್ತರಿಗೆ ಕಿಟ್ಟ್ ವಿತರಣೆಯಲ್ಲಿ ಮೂಡಲಗಿ ಗ್ರೇಡ್-೨ ತಹಶೀಲ್ದಾರ ಶಿವಾನಂದ ಬಬಲಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ದಾಸಪ್ಪ ನಾಯಿಕ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್‌ಐ ರಾಜು ಪೂಜೇರಿ, ಮಸಗುಪ್ಪ ಗ್ರಾ.ಪಂ ಅಧ್ಯಕ್ಷ ಹನಮಂತ ಕುಲಕರ್ಣಿ, ಪಿಡಿಒ ಆರ್.ಎನ್.ಗುಜನಟ್ಟಿ, ಗ್ರಾಮ ಆಡಳಿತಾಧೀಕಾರಿ ಎಸ್.ಕೆ.ತುಪ್ಪದ ಹಾಗೂ ಬೆಳಗಾವಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ರೋಟರಿ ಕ್ಲಬ್‌ದ ಅಶೋಕ ಬದಾಮಿ, ಡಾ.ಡಿ.ಎನ್.ಮಿಸಾಳೆ, ಅಶೋಕ ಮಳಗಲಿ, ಬಸವರಾಜ ಶೆಟ್ಟರ್, ಸೋಮಶೇಖರ ಮಗದುಮ್, ಕೆಂಚಪ್ಪ ಭರಮನ್ನವರ, ಗಿರೀಶ ಜವಾರ, ಬಸವರಾಜ ಹುಲ್ಲೇರ, ಗ್ರಾ.ಪಂ ಸದಸ್ಯರು, ಗ್ರಾಮದ ಮಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
ಮಸಗುಪ್ಪ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಲಕ್ಷ್ಮಣ ಹೊಸಮನಿ ಸ್ವಾಗತಿಸಿ ನಿರೂಪಿಸಿದರು.
ಫೋಟೋ ಕ್ಯಾಪ್ಸನ್> ಮೂಡಲಗಿ: ಮಸಗುಪ್ಪಿ ಗ್ರಾಮದ ಘಟಪ್ರಭ ನದಿ ಪ್ರವಾಹದ ಸಂತ್ರಸ್ತರಿಗೆ ತೂಮಕೂರ ಜಿಲ್ಲೆಯ ಪಾಗಡ ರಾಮಕೃಷ್ಣ ಸೇವಾ ಆಶ್ರಮದ ಅಧ್ಯಕ್ಷರಾದ ಶ್ರೀ ಜಪಾನದಂದ ಜೀ ಮಹಾರಾಜರು ದಿನ ಬಳಕೆಯ ಆಹಾರ ಪಧಾರ್ಥ ಹಾಗೂ ಬಟ್ಟೆ ಕಿಟ್ ವಿತರಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button