Karnataka News

*ವರದಕ್ಷಿಣೆ ಕಿರುಕುಳ: ಮದುವೆಯಾದ 6 ತಿಂಗಳಿಗೆ ಮಹಿಳಾ ಟೆಕ್ಕಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಮದುವೆಯಾದ 6 ತಿಗಳಿಗೆ ಮಹಿಳಾ ಟೆಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನ ರಾಯದುರ್ಗಂ ನಲ್ಲಿ ನಡೆದಿದೆ.

ದೇವಿಕಾ (35) ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಸಾಫ್ ವೇರ್ ಇಂಜಿನಿಯರ್ ಆಗಿದ್ದ ದೇವಿಕಾ ಹೈದರಾಬಾದ್ ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತ್ನಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಗಿ ಪತಿ ಸತೀಶ್ ದೇವಿಕಾ ಪೋಷಕರಿಗೆ ಕರೆ ಮಾಡಿದ್ದಾನೆ. ಪತಿ ಹಾಗೂ ಆತನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.

Home add -Advt

6 ತಿಂಗಳ ಹಿಂದೆ ದೇವಿಕಾ ಹಾಗೂ ಸತೀಶ್ ಗೋವಾದಲ್ಲಿ ಅದ್ದೂರಿಆಗಿ ವಿವಾಹವಾಗಿದ್ದರು. ಬಳಿಕ ರಾಯದುರ್ಗದಲ್ಲಿನ ಅಪಾರ್ಟ್ ಮೆಂತ್ ಗೆ ಶಿಫ್ಟ್ ಆಗಿದ್ದರು. ಮದುವೆ ಬಳಿಕ ದೇವಿಕಾಳಿಗೆ ಸತೀಶ್, ವರದಕ್ಷಿಣೆಗಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿತ್ತಿದ್ದನು ಎಂದು ದೇವಿಕಾ ಪೋಷಕರು ದೂರು ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button