Latest

*ವರದಕ್ಷಿಣೆ ಕಿರುಕುಳ; ಗರ್ಭಿಣಿಯನ್ನೇ ಬಲಿ ಪಡೆದ ಪತಿ*

ಪ್ರಗತಿವಾಹಿನಿ ಸುದ್ದಿ; ಹಾಸನ: ಪತಿ ಹಾಗೂ ಅತ್ತೆಯ ಕಿರುಕುಳ ಮೂರು ತಿಂಗಳ ಗರ್ಭಿಣಿಯನ್ನೇ ಬಲಿ ಪಡೆದಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಮುದ್ರವಳ್ಳಿ ಬಳಿ ನಡೆದಿದೆ.

23 ವರ್ಷದ ರೋಹಿಣಿ ಮೃತ ಗರ್ಭಿಣಿ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ರೋಹಿಣಿ ಪೋಷಕರು ದೂರು ದಾಖಲಿಸಿದ್ದು, ಮಗಳು ರೋಹಿಣಿಯನ್ನು ಅಳಿಯನೆ ಹೊಡೆದು ಕೊಂದಿದ್ದಾನೆ. ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಬಲಿಪಡೆದಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.

ರೋಹಿಣಿಯನ್ನು ಅರಕಲಗೋಡು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು. ಸುಮಂತ್ ತಂದೆ ಮೃತಪಟ್ಟಿದ್ದರಿಂದ ತಾಯಿ ಮೀನಾಕ್ಷಿ ಜೊತೆ ವಾಸವಾಗಿದ್ದ. ಮದುವೆಯ ವೇಳೆ ತಾನು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ. ಆದರೆ ಮದುವೆಯ ಬಳಿಕ ರೋಹಿಣಿಗೆ ಪತಿ ಸುಳ್ಳು ಹೇಳಿ ವಿವಾಹವಾಗಿದ್ದು ಗೊತ್ತಾಗಿದೆ.

ಮದುವೆಯಾದ ಹೊಸದರಲ್ಲಿ 2 ತಿಂಗಳು ಪತಿ ಮಹಾಶಯ ಹೆಂಡತಿ ಜೊತೆ ಚೆನ್ನಾಗಿಯೇ ಇದ್ದ. ಬಳಿಕ ತಾಯಿಯೊಂದಿಗೆ ಸೇರಿ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದ. ಸಾಲದ್ದಕ್ಕೇ ಸುಮಂತ್ ಅಕ್ಕ ಸುಷ್ಮಿತಾ ಹಾಗೂ ಆಕೆಯ ಪತಿ ಕೂಡ ಮನೆಗೆ ಬಂದಾಗಲೆಲ್ಲ ರೋಹಿಣಿಗೆ ಚುಚ್ಚು ಮಾತುಗಳನ್ನಾಡಿ ಕಿರುಕುಳ ಕೊಡುತ್ತಿದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ರೋಹಿಣಿ ಪತಿ ಹಾಗೂ ಮನೆಯವರ ಕಿರುಕುಳ ನೀಡುತ್ತಿದ್ದ ಬಗ್ಗೆ ಸಹೋದರನಿಗೆ ಮೆಸೇಜ್ ಮಾಡಿ ತಿಳಿಸಿದ್ದಳು. ತಂದೆ-ತಾಯಿಗೆ, ಸಹೋದರನಿಗೆ ಫೋನ್ ಮಾಡಿದರೆ ಅನುಮಾನದಿಂದ ಹಲ್ಲೆ ಮಾಡುತ್ತಿರುವುದಾಗಿಯೂ ಹೇಳಿದ್ದಳು. ಅಲ್ಲದೇ ಕೆಲ ವಿಷಗಳನ್ನು ಮಾತನಾಡಬೇಕು ಎಂದು ಸಹೋದರನಿಗೆ ತಿಳಿಸಿದ್ದಳು. ಅಷ್ಟರಲ್ಲಾಗಲೆ ರೋಹಿಣಿ ಶವವಾಗಿ ಪತ್ತೆಯಾಗಿದ್ದಾಳೆ.

Home add -Advt

ಸಂಬಂಧಿಕರ ಸೀಮಂತ ಕಾರ್ಯಕ್ರಮಕ್ಕೆ ಎಂದು ಪತಿಯೊಂದಿಗೆ ರೋಹಿಣಿ ಬೆಂಗಳೂರಿಗೆ ಹೋಗಿ ವಾಪಸ್ ರೈಲಿನಲ್ಲಿ ಬರುವಾಗ ತಂದೆ-ತಾಯಿಗೆ ಫೋನ್ ಮಾಡಿ ಮಾತನಾಡಿದ್ದಳು. ಈಗ ಮನೆಗೆ ತಲುಪುವ ಮೊದಲೇ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪೋಷಕರು ಮತ್ತೆ ಕರೆ ಮಾಡಿದರೆ ಫೋನ್ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ತನಿಖೆ ನಡೆಸಿದಾಗ ಸಮುದ್ರವಳ್ಳಿ ಕರೆ ಬಳಿ ರೋಹಿಣಿಯ ಮೊಬೈಲ್ ,ಚಪ್ಪಲಿ, ಬ್ಯಾಗ್ ಹಾಗೂ 1760 ರೂಪಾಯಿ ಹಣ ಪತ್ತೆಯಾಗಿದೆ. ಅನುಮಾನಗೊಂಡು ಕೆರೆಯಲ್ಲಿ ಶೋಧ ನಡೆಸಿದಾಗ ರೋಹಿಣಿ ಶವ ಪತ್ತೆಯಾಗಿದೆ. ಪತಿ ಸುಮಂತ್ ನೇ ತಮ್ಮ ಮಗಳನ್ನು ಹೊಡೆದು ಸಾಯಿಸಿ ಬಳಿಕ ಕೆರೆಗೆ ತಳ್ಳಿದ್ದಾನೆ. ಆಕೆಯ ಮೈಮೇಲೆ ಇರುವ ಗಾಯಗಳೇ ಕೊಲೆಗೆ ಸಾಕ್ಷಿ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಮಗಳನ್ನು ಕೊಂದ ಪತಿ ಸುಮಂತ್ ಹಾಗೂ ಆತನ ಮನೆಯವರಿಗೆಕಠಿಣ ಶಿಕ್ಷೆ ವಿಧಿಸಬೇಕು ಎಂದು ರೋಹಿಣಿ ಪೋಷಕರು ಒತ್ತಾಯಿಸಿದ್ದಾರೆ.

*Covid Alert: ರಾಜ್ಯದಲ್ಲಿ ಮುಂಜಾಗ್ರತೆ ಕ್ರಮಗಳು ಜಾರಿ*

https://pragati.taskdun.com/karnatakacovid-caseincreaseprecautionary-measuresdr-sudhakar/

Related Articles

Back to top button