Kannada NewsKarnataka NewsLatest

ಡಾ. ಎನ್. ಎಚ್. ಸಾಬಡೆ ನಿಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕುಡಚಿ ಪಟ್ಟಣದ (ರಾಯಬಾಗ ತಾಲೂಕು) ಹೆಸರಾಂತ ವೈದ್ಯರಾದ ಡಾ. ನಾರಾಯಣರಾವ್ ಸಾಬಡೆ ಇವರು ನಿಧನರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು.

ಮೂಲತಃ ಅಥಣಿ ತಾಲೂಕಿನ ಐನಾಪೂರ ದವರಾದ ಡಾ.ಸಾಬಡೆ, ತಮ್ಮ ಎಂ.ಬಿ.ಬಿ.ಎಸ್. ಪದವಿಯನ್ನು ಮುಂಬೈ ಯಲ್ಲಿ ಪೂರ್ಣಗೊಳಿಸಿ, ೧೯೬೪ ರಿಂದ ಕುಡಚಿಯ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಸಾಮಾಜಿಕ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು.
ದಿವಂಗತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕುಡಚಿಯ ಪ್ರಸಿದ್ಧ ವೈದ್ಯರಾದ ಡಾ. ಸಂಜಯ್ ಸಾಬಡೆಯವರು ಅವರ ಹಿರಿಯ ಪುತ್ರರು.

ಬೆಳಗಾವಿ ಉಪ ತಹಶೀಲ್ದಾರ್ ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button