*ಅವರ ಗೊಡ್ಡು ಬೆದರಿಕೆಗಳಿಗೆ ಬಗ್ಗಲ್ಲ; ಡಿ.ಕೆ.ಶಿವಕುಮಾರ್ ಗೆ HDK ತಿರುಗೇಟು*

ಸರ್ಕಾರ ಪತನವಾಗುವ ಸಮಯ ಬಂದಿದೆ ಎಂದ ಕೇಂದ್ರ ಸಚಿವ
ಪ್ರಗತಿವಾಹಿನಿ ಸುದ್ದಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಬಗ್ಗಲ್ಲ. ಆ ಮಹಾಷಯನ ಅವ್ಯವಹಾರದ ಬಗ್ಗೆ ನನ್ನ ಬಳಿ ಇರುವ ದಾಖಲೆಗಳನ್ನು ತೆರೆದರೆ ಒಂದು ಸಂಪುಟವನ್ನೇ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಪ್ರಾಯಶ್ಚಿತ ಮಾಡಿಕೊಳ್ಳಬೇಕಾಗಿದ್ದು, ಡಿ.ಕೆ.ಶಿವಕುಮಾರ್, ತಪ್ಪು ಮಾಡಿ ಪ್ರಾಯಶ್ಚಿತ್ತ ಮಾಡಿಕೊಳ್ಳಲ್ಲ ಎಂದರೆ ಹೇಗೆ? ಡಿಕೆಶಿ ಮಾತಿಗೆ ಯಾರೂ ಗೌರವ ಕೊಡುತ್ತಿಲ್ಲ. ಅವರ ಈಗಿನ ಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ಡಿಸಿಎಂ ಆಗಿ ರಾಜ್ಯದ ಜನರ ಸಮಸ್ಯೆ ಬಗೆಹರಿಸುವುದು ಬಿಟ್ಟು ನನ್ನನ್ನು ಗುಣಗಾನ ಮಾಡಿಕೊಂಡು ಕೂತಿದ್ದಾರೆ. ಹುಚ್ಚರಂತೆ ಪದಬಳಕೆ ಮಾಡ್ತಿದ್ದಾರೆ. ಅವರ ಅವ್ಯವಹಾರದ ಬಗ್ಗೆ ನನ್ನ ಬಳಿ ಇರುವ ದಾಖಲೆಗಳನ್ನು ತೆರೆದರೆ ಒಂದು ಸಂಪುಟ ಮಾಡಬಹುದು. ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಪತನವಾಗುವ ಸಮಯ ಬಂದಿದೆ. ಅಧಿಕಾರ ಮಾಡುವ ಯೋಗ್ಯತೆ ನಿಮಗಿದೆಯೇ? ಎಂದು ಪ್ರಶ್ನಿಸಿದ್ದಾರೆ.



