ಪ್ರಗತಿವಾಹಿನಿ ಸುದ್ದಿ: ಶೀಘ್ರದಲ್ಲೇ ವಿದ್ಯುತ್ ದರ ಏರಿಕೆಯಾಗುವ ಸುಳಿವನ್ನು ರಾಜ್ಯ ಸರ್ಕಾರ ನೀಡಿದ್ದು, ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ.
ಈ ಕುರಿತು ಕೆಇಆರ್ಸಿ ಚಿಂತನೆ ನಡೆಸಿದ್ದು, ನಾಳೆ ಕೆಇಆರ್ಸಿ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಪರ್ಯಾಯ ಮಾರ್ಗಕ್ಕಾಗಿ ಕೆಇಆರ್ಸಿ, ಮೊರೆ ಹೋಗಿರುವ ಬೆಸ್ಕಾಂ ಸದ್ಯ ಮುಂದಿನ ಎರಡು ಆರ್ಥಿಕ ವರ್ಷಗಳಿಗೂ ವಿದ್ಯುತ್ ದರ ಏರಿಸಿರುವ ಕೆಆರ್ಸಿ, ಇದೀಗ ಮಧ್ಯಂತರ ವಿದ್ಯುತ್ ದರ ಏರಿಗೆ ಮಾಡಲು ಚಿಂತನೆ ನಡೆಸಿದೆ.
ಆದರೆ ದರ ಏರಿಕೆ ಬಗ್ಗೆ ಗ್ರಾಹಕರು ಮತ್ತು ಉದ್ಯಮಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ 2024 ಮತ್ತು 2025ರಲ್ಲಿ 2800 ಕೋಟಿ ನಷ್ಟ ಅನುಭವಿಸಿರುವ ಬೆಸ್ಕಾಂ, ಇದನ್ನು ಸರಿದೂಗಿಸಲು ಬೆಸ್ಕಾಂ ಕೆಇಆರ್ಸಿ ಮೊರೆ ಹೋಗಿದ್ದಾರೆ. ಹಾಗಾಗಿ ನಾಳೆ ಕೆಇಆರ್ಸಿಸ್ ಪಂಗಡದಲ್ಲಿ ಅಧಿಕಾರಿಗಳು ಸಭೆ ಕರೆದಿದ್ದು ಈ ಬಗ್ಗೆ ಗ್ರಾಹಕರ ಆವಾಲುಗಳನ್ನು ಸ್ವೀಕರಿಸಲಿದ್ದಾರೆ.




