Latest

ಕರೆಂಟ್ ಶಾಕ್ ಹೊಡೆದು ವ್ಯಕ್ತಿ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಹಾಸನ: ಮನೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ವಸ್ತುವನ್ನು ತೆಗೆಯಲು ಹೋಗಿ ವ್ಯಕ್ತಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಹಾಸಾ ಜಿಲ್ಲೆಯ ಉದಯಗಿರಿ ಲೇಔಟ್ ನಲ್ಲಿ ನಡೆದಿದೆ.

ಮಲ್ಲಪ್ಪ ಮೃತ ವ್ಯಕ್ತಿ. ಮನೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯ ಮೇಲೆ ವಸ್ತುವೊಂದು ಸಿಕ್ಕಿಕೊಂಡಿದ್ದು, ಅದನ್ನು ನೆಲ ಒರೆಸುವ ಮಾಪ್ ಮೂಲಕ ತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಏಕಾಏಕಿ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.

ಬಾರ್, ಪಬ್ ಗಳಿಗೆ ದುಬಾರಿ ಬೆಲೆಗೆ ಭುವನೇಶ್ವರಿ ಫೋಟೋ ಮಾರಾಟ; ಅಬಕಾರಿ ಇಲಾಖೆಯಿಂದ ಕನ್ನಡಾಂಬೆಗೆ ಅವಮಾನ

Home add -Advt

https://pragati.taskdun.com/latest/kannadambebhuvaneshwari-imagesalebarabakari-ilakhe/

Related Articles

Back to top button