Belagavi NewsBelgaum NewsKannada NewsKarnataka NewsNationalPolitics

*ಕಾರ್ಖಾನೆಯ ಪುನಶ್ಚೇತನ ನಮ್ಮ ಉದ್ಧೇಶ: ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ (ರಾಣಿ ಶುಗರ್ಸ್) ಸಕ್ಕರೆ ಕಾರ್ಖಾನೆಯ ಚುನಾವಣೆಯ ಹಿನ್ನೆಲೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಇಂದು ಕುಕಡೊಳ್ಳಿ, ಗೆಜಪತಿ ಗ್ರಾಮಗಳಲ್ಲಿ ಪ್ಯಾನಲ್ ನ ಸರ್ವ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು.

 ಶ್ರೀ ಮಲಪ್ರಭಾ ಸಹಕಾರಿ ಕಾರ್ಖಾನೆಯ ಪುನಶ್ಚೇತನ ರೈತರ ಪ್ಯಾನಲ್ ನ್ನು ಬೆಂಬಲಿಸುವಂತೆ ಕಾರ್ಖಾನೆಯ ಷೇರುದಾರರಲ್ಲಿ ವಿನಂತಿಸಿದರು.

ಕಾರ್ಖಾನೆಯ ಪುನಶ್ಚೇತನ ನಮ್ಮ ಮೊದಲ ಆದ್ಯತೆ. ರೈತರು, ಕಾರ್ಮಿಕರ ಹಿತ ಕಾಯುತ್ತೇವೆ ಎಂದು ಅವರು ಭರವಸೆ ನೀಡಿದರು.

ಈ ವೇಳೆ ಪಾಟೀಲ ರಾಮನಗೌಡ ಸಣಗೌಡ, ಪಾಟೀಲ ರಾಘು ಚಂದ್ರಶೇಖರ್, ಭರಮಪ್ಪ ಕಲ್ಲಪ್ಪ ಶೀಗಿಹಳ್ಳಿ, ಅಡಿವೇಶ್ ಇಟಗಿ, ನಿಂಗಪ್ಪ ತಳವಾರ, ರಮೇಶ ಮರಕಟ್ಟಿ, ಮಂಜು ಹುಬ್ಬಳ್ಳಿ, ಪರ್ವತಗೌಡ ಪಾಟೀಲ ಆಯಾ ಗ್ರಾಮಗಳ ಷೇರುದಾರರು, ಮುಖಂಡರು  ಉಪಸ್ಥಿತರಿದ್ದರು.

Home add -Advt

Related Articles

Back to top button