ಹುಬ್ಬಳ್ಳಿ ನಗರಕ್ಕೆ ನಾಳೆ ರಾಷ್ಟ್ರಪತಿ ; ಸಂಚಾರ ಬದಲಾವಣೆ

  ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ನಾಳೆ ನಗರಕ್ಕೆ ರಾಷ್ಟ್ರಪತಿಗಳ ಆಗಮನ ಹಿನ್ನೆಲೆ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್ ಜಿಮಖಾನ ಕ್ಲಬ್ ಮೈದಾನಲ್ಲಿ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಧಾರವಾಡ ಐಐಐಟಿಗೆ ಹೋಗುವವರಿದ್ದು  ರಾಷ್ಟ್ರಪತಿಗಳು , ಸಂಚರಿಸುವ ಮಾರ್ಗದ ರಸ್ತೆಯ  ಅಕ್ಕ ಪಕ್ಕದಲ್ಲಿ ವಾಹನಗಳ ನಿಲುಗಡೆ ಮಾಡುವುದನ್ನು ನಿರ್ಬಂಧಿಸಲಾಗಿದೆ .
  ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್ ಜಮಖಾನ ಕ್ಲಬ್‌ ನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5-  ಗಂಟೆಯವರೆಗೆ  ರಾಷ್ಟ್ರಪತಿಗಳ ಕಾರ್ಯಕ್ರಮ ಇರುವದರಿಂದ ಭದ್ರತೆಯ ದೃಷ್ಟಿಯಿಂದ ಸವಾಯಿ ಗಂಧರ್ವ ಹಾಲ್‌ದಿಂದ ಕಿಮ್ಸ್ ಹಿಂದಿನ ಗೇಟ್ ಪೈ ಹೊಟೇಲ್ ವರೆಗೆ ವಾಹನಗಳ ಸಂಚಾರ ನಿರ್ಭಂದಿಸಲಾಗಿದೆ .  ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ಕಿಮ್ಸ್ ಹಿಂದಿನ ಗೇಟ್ ಪುಟ್‌ಬಾಲ್ ಮೈದಾನದಲ್ಲಿ  ನಿಲುಗಡೆ ಮಾಡಿ ಕಾರ್ಯಕ್ರಮಕ್ಕೆ ಆಗಮಿಸಲು ಬರುವ ಕೋರಲಾಗಿದೆ .
 ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್ , ಗುಜರಾತ್‌ಭವನ , ಕುಂಬಕೋಣಂ ಪ್ಲಾಟ್ ಗಣಪತಿ ಗುಡಿ ಕ್ರಾಸ್ ವರೆಗೆ ವಾಹನಗಳ ಸಂಚಾರ ನಿರ್ಭಂದಿಸಲಾಗಿದೆ ಎಂದು ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮೀಷನರ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://pragati.taskdun.com/latest/vtu-vc-post-anand-deshpandes-name-in-front/

Related Articles

Back to top button