Latest

*ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನ :ವಿಧಾನ ಸಭೆ, ಪರಿಷತ್ ನಲ್ಲಿ ಸಂತಾಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ, ಸುವರ್ಣ ವಿಧಾನಸೌಧ:
ಡಿ.10 ರಂದು ಮುಂಜಾನೆ ನಿಧನರಾದ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ವಿಧಾನ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಬೆಳಗಾವಿ ಸುವರ್ಣ ಸೌಧದಲ್ಲಿ ಜರುಗುತ್ತಿರುವ ಚಳಿಗಾಲದ ಅಧಿವೇಶನದ ಎರಡನೆ ದಿನವಾದ ಮಂಗಳವಾರ ಸಭಾಧ್ಯಕ್ಷರಾದ ಯು.ಟಿ.ಖಾದರ್ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿ ಚರ್ಚೆಗೆ ಅವಕಾಶ ನೀಡಿದರು.
ಈ ವೇಳೆ ಮಾತನಾಡಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಎಸ್.ಎಂ. ಕೃಷ್ಣ ಅವರು 01.05.1932 ರಂದು ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದ್ದರು. ಬಿ.ಎ. ಬಿ.ಎಲ್. ಪದವಿ ಪಡೆದಿದ್ದ ಅವರು ನಂತರ ಟೆಕ್ಸಾಸ್‌ನಲ್ಲಿ ಎಂ.ಸಿ.ಎಲ್. ಪದವಿ, ವಾಷಿಂಗ್ಟನ್ ವಿಶ್ವವಿದ್ಯಾಲಯದ ಲಾ ಸ್ಕೂಲ್‌ನಿಂದಲೂ ಪದವಿ ಪಡೆದಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಎಸ್.ಎಂ.ಕೃಷ್ಣ ಅವರು ಕಾನೂನು ಕಾಲೇಜಿನಲ್ಲಿ ಪ್ರೊಫೆಸರ್ ಆಗಿಯೂ ಕಾರ್ಯನಿರ್ವಹಿಸಿದ್ದರು. 1962ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು ನಂತರ 1989ರಲ್ಲಿ 9ನೇ ವಿಧಾನಸಭೆಗೆ 1999 ರಲ್ಲಿ 11ನೇ ವಿಧಾನಸಭೆಗೆ ಹಾಗೂ 2004ರಲ್ಲಿ 12ನೇ ವಿಧಾನಸಭೆಗೆ ಪುನರಾಯ್ಕೆಗೊಂಡಿದ್ದರು. 1968ರಲ್ಲಿ 4ನೇ ಲೋಕಸಭೆಗೆ ಚುನಾಯಿತರಾಗಿದ್ದ ಅವರು 1971ರಲ್ಲಿ 5ನೇ ಲೋಕಸಭೆಗೆ, 1980 ರಲ್ಲಿ ಏಳನೇ ಲೋಕಸಭೆಗೆ ಪುನರಾಯ್ಕೆಗೊಂಡಿದ್ದರು. ನಂತರ ಅವರು 1972ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಗೊಂಡಿದ್ದು, 1996 ರಿಂದ 1999 ಮತ್ತು 2008 ರಿಂದ 2014ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಸದನಕ್ಕೆ ತಿಳಿಸಿದರು.
ಉಪ ಮುಖ್ಯಮಂತ್ರಿಯಾಗಿ ಹಾಗೂ ನಂತರ ರಾಜ್ಯದ 10ನೇ ಮುಖ್ಯಮಂತ್ರಿಯಾಗಿ ಎಸ್.ಎಂ.ಕೃಷ್ಣ ಸೇವೆ ಸಲ್ಲಿಸಿದ್ದರು. ಕೇಂದ್ರ ಕೈಗಾರಿಕೆ ರಾಜ್ಯ ಸಚಿವರಾಗಿ, ಹಣಕಾಸು ಖಾತೆಯ ರಾಜ್ಯ ಸಚಿವರಾಗಿ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿಯೂ ಸಹ ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಮಹಾರಾಷ್ಟ್ರ ರಾಜ್ಯದ 18ನೇ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.
ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡಿದ್ದ ಅವರು ಭೂ ದಾಖಲೆಗಳನ್ನು ಡಿಜಿಲೀಕರಣಗೊಳಿಸುವ ಭೂಮಿ ಯೋಜನೆ, ಸರ್ಕಾರಿ ಮಕ್ಕಳಿಗೆ ಬಿಸಿಯೂಟ ಯೋಜನೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು- ಮೈಸೂರು ಹೆದ್ದಾರಿ ಯೋಜನೆ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತುಕೊಟ್ಟಿದ್ದ ಅವರು ರಾಜ್ಯದಲ್ಲಿ ಐಟಿ-ಬಿಟಿ ಕ್ರಾಂತಿಯನ್ನೇ ಮಾಡಿದ್ದರು. ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿಸಿ, ಸಿಂಗಾಪೂರ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಎಸ್.ಎಂ.ಕೃಷ್ಣ ರವರು ಅತ್ಯುತ್ತಮ ಆಡಳಿತಗಾರರಾಗಿದ್ದರು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ರಾಜ್ಯದಲ್ಲಿ ಅಧಿಕಾರ ನಡೆಸಿದರು. ಡಾ.ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅಪ್ರತಿಮವಾದದ್ದು. ತೀವ್ರತರವಾದ ಬರಗಾಲದ ಸಂದರ್ಭದಲ್ಲಿ ರಾಜ್ಯದ ಜನರ ಹಿತಾಸಕ್ತಿಗಾಗಿ ಮೋಡಬಿತ್ತನೆ ಮಾಡಿ ಮಳೆ ಭರಿಸಲು ಮುಂದಾಗಿದ್ದರು. ಸದಾಕಾಲ ಅಭಿವೃದ್ಧಿಯ ಚಿಂತಕರಾಗಿದ್ದ ಶ್ರೀಯುತರು ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಬಹುಮುಖ ಪ್ರತಿಭೆಯಾಗಿದ್ದ ಅವರಿಗೆ 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗಿತ್ತು ಎಂದು ಸ್ಮರಿಸಿ, ಎಸ್.ಎಂ. ಕೃಷ್ಣ ಅವರು ನಿಧನರಾದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಎಸ್.ಎಂ.ಕೃಷ್ಣ ಅವರು ಎಂದಿಗೂ ದ್ವೇಷದ ರಾಜಕಾರಣ ಮಾಡಲಿಲ್ಲ. ಅವರು ಅಲಂಕರಿಸಿದ ಎಲ್ಲ ಉನ್ನತ ಸ್ಥಾನಗಳಿಗೂ ಗೌರವ ತಂದರು. ಗ್ರಾಮೀಣ ಭಾಗದ ಯುವಜನರಿಗೆ ಕಿಯೋನಿಕ್ಸ್ ಮೂಲಕ ಕಂಪ್ಯೂಟರ್ ಶಿಕ್ಷಣ ನೀಡಿದರು. ನಾವು ಹುಟ್ಟಿದಾಗ ಹೆಸರು ಇರುವುದಿಲ್ಲ. ಆದರೆ ಉಸಿರು ಇರುತ್ತದೆ. ಸತ್ತ ನಂತರ ಉಸಿರು ಇರುವುದಿಲ್ಲ, ಹೆಸರು ಮಾತ್ರ ಇರುತ್ತದೆ. ಈ ಹೆಸರು ಶಾಶ್ವತವಾಗಿ ಉಳಿಯುವಂತೆ ಬದುಕು ನಡೆಸಬೇಕು. ಈ ರೀತಿಯಾಗಿ ಬದುಕಿ ತಮ್ಮ ಹೆಸರನ್ನು ಶಾಶ್ವತವಾಗಿಸಿದವರು ಎಸ್.ಎಂ.ಕೃಷ್ಣ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್.ಎಂ.ಕೃಷ್ಣ ಅವರ ಅಭಿಮಾನಿ ನಾನು-ಮುಖ್ಯಮಂತ್ರಿ ಸಿದ್ದರಾಮಯ್ಯ :
ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರ ಅಭಿಮಾನಿಯಾಗಿದ್ದೆ ಎಂದರು.
1968ರಲ್ಲಿ ಲೋಕಸಭಾ ಸ್ಥಾನಕ್ಕೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಎಸ್.ಎಂ.ಕೃಷ್ಣ ಅವರು ಸ್ಪರ್ಧಿಸಿದ್ದರು. ಇವರನ್ನು ಬೆಂಬಲಿಸಿ ಮಂಡ್ಯ ವಿದ್ಯಾರ್ಥಿ ಬಳಗದಿಂದ ಮೈಸೂರಿನ ಟೌನ್ ಹಾಲ್ ನಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅವರನ್ನು ಬೆಂಬಲಿಸಿದ್ದೆ. ನಂತರ ಲೋಹಿಯಾ ಅವರ ಸಮಾಜವಾದಿ ಪಕ್ಷ ಸೇರ್ಪಡೆಯಾದೆ. ಎಸ್.ಎಂ.ಕೃಷ್ಣ ಅವರು, 1962 ರಲ್ಲೇ ಸ್ವತಂತ್ರವಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರೂ ಆಗಿದ್ದು, ರಾಜ್ಯದ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವರು ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿಯಾಗಿದ್ದರು. 2005 ರಲ್ಲಿ ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದಾಗ ಮುಂಬೈನಲ್ಲಿ ಭೇಟಿಯಾಗಿ ಕಾಂಗ್ರೆಸ್ ಸೇರುವ ತೀರ್ಮಾನವನ್ನು ಅವರಿಗೆ ತಿಳಿಸಿದೆ. ಅವರು ನನ್ನ ತೀರ್ಮಾನವನ್ನು ಸ್ವಾಗತಿಸಿದ್ದರು. ಒಳ್ಳೆ ಸಂಸದೀಯ ಪಟು, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಸಿಂಗಾಪುರದAತೆ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಕನಸು ಹೊಂದಿದ್ದರು. ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎನ್ನುವ ಹೆಗ್ಗಳಿಕೆ ಬರಲು ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರ. ಕಾಂಗ್ರೆಸ್ ಮೂಲಕ ಸುದೀರ್ಘ ರಾಜಕಾರಣ ಮಾಡಿ, ಬಿಜೆಪಿ ಸೇರಿ ಒಂದು ವರ್ಷಕ್ಕೆ ರಾಜಕೀಯ ನಿವೃತ್ತಿ ಘೋಷಿಸಿದ ದಕ್ಷ ಆಡಳಿತಗಾರ, ಸಜ್ಜನ-ಮುತ್ಸದ್ದಿ ರಾಜಕಾರಣಿ ಆಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಮರಿಸಿದರು.

ಬ್ರಾö್ಯಂಡ್ ಬೆಂಗಳೂರಿನ ರುವಾರಿ- ವಿರೋಧ ಪಕ್ಷದ ನಾಯಕ ಆರ್.ಅಶೋಕ್ :
ಇಂದು ನಾವೆಲ್ಲರೂ ಹೆಮ್ಮೆಯಿಂದ ಹೇಳುವ ಬ್ರಾö್ಯಂಡ್ ಬೆಂಗಳೂರು ಎಂಬ ಪರಿಕಲ್ಪನೆಯ ರುವಾರಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಆರ್.ಅಶೋಕ್, ಬೆಂಗಳೂರಿನ ಜನ ಎಂದಿಗೂ ಎಸ್.ಎಂ.ಕೃಷ್ಣ ಅವರ ಅಭಿವೃದ್ಧಿ ಕಾರ್ಯವನ್ನು ಮರೆಯುವುದಿಲ್ಲ. ಇಂದು ಯಾವುದೇ ಅಂತರಾಷ್ಟಿçÃಯ ನಾಯಕರು ಸಹ ರಾಷ್ಟçಕ್ಕೆ ಬಂದರೆ ತಪ್ಪದೇ ಬೆಂಗಳೂರಿಗೆ ಭೇಟಿ ನೀಡುತ್ತಾರೆ. ಇಂತಹ ಘನತೆ ಬೆಂಗಳೂರು ನಗರಕ್ಕೆ ಬರಲು ಎಸ್.ಎಂ.ಕೃಷ್ಣ ಕಾರಣವಾಗಿದ್ದಾರೆ.
ರಾಜ್ಯದ ಅರ್ಥಿಕತೆಗೆ ಶೇ.60 ರಷ್ಟು ಕೊಡುಗೆ ಬೆಂಗಳೂರು ನಗರ ನೀಡುತ್ತದೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು ನಗರ ಅಭಿವೃದ್ಧಿಗಾಗಿ ಪ್ರತ್ಯೇಕ ಟಾಸ್ಕ್ ಪೋರ್ಸ್ ರಚಿಸಿ, ಕಳಪೆ ಕಾಮಗಾರಿ ಆಗದ ರೀತಿ ನೋಡಿಕೊಂಡರು. ಪತ್ರಿಷ್ಠಿತ ಇಂಡಿಯಾ ಟುಡೆ ಪತ್ರಿಕೆ ಎಸ್.ಎಂ.ಕೃಷ್ಣ ಅವರನ್ನು ದೇಶದ ನಂ.1 ಮುಖ್ಯಮಂತ್ರಿ ಎಂದು ಬಣ್ಣಿಸಿತ್ತು. ತಮ್ಮ ಆಡಳಿತದ ಅವಧಿಯಲ್ಲಿ ಯಾವುದೇ ಕಳಂಕ, ಭ್ರಷ್ಟಾಚರದ ಆರೋಪಗಳಿಗೆ ಗುರಿಯಾಗದೆ ಆಡಳಿತ ನಡೆಸಿದರು. ಪಾಂಚಜನ್ಯ ಮೂಲಕ ರಾಜ್ಯದ ಜನರ ಆರ್ಶಿವಾದ ಪಡೆದು ಮುಖ್ಯಮಂತ್ರಿಗಳಾದ ಅವರು, ತಮ್ಮ ಆಡಳಿತ ಅವಧಿಯಲ್ಲಿ ತೀವ್ರ ಬರ ಪರಿಸ್ಥಿತಿ, ಕಂಬಾಲಪಲ್ಲಿ ದಲಿತರ ಹತ್ಯೆ, ಡಾ.ರಾಜಕುಮಾರ್ ಅಪರಹಣ, ಮಾಜಿ ಸಚಿವ ನಾಗಪ್ಪ ಅಪಹರಣ, ಕಾವೇರಿ ನೀರು ಹಂಚಿಕೆ ಹೋರಾಟ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರು. ಇವುಗಳನ್ನು ಶಾಂತ ರೀತಿಯಿಂದ ಪರಿಹರಿಸಿದರು.
ಎಸ್.ಎಂ.ಕೃಷ್ಣ ಅವರ ತಂದೆ ಮಲ್ಲಯ್ಯನವರು ವಿದ್ಯಾರ್ಥಿಗಳಿಗಾಗಿ ಮಂಡ್ಯನಗರದಲ್ಲಿ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಿಸಿದ್ದರು. 1934ರಲ್ಲಿ ಮಹಾತ್ಮ ಗಾಂಧೀಜಿ ಹರಿಜನರ ಉದ್ದಾರಕ್ಕಾಗಿ ನಿಧಿ ಸಂಗ್ರಹ ಉದ್ದೇಶದಿಂದ ಮಲ್ಲಯ್ಯನವರ ಮನೆಗೂ ಭೇಟಿ ನೀಡಿದ್ದರು. ಈ ವೇಳೆ ಎಸ್.ಎಂ.ಕೃಷ್ಣ ಅವರು ತಮ್ಮ ಬಂಗಾರದ ಕಿವಿಯೋಲೆ ಅರ್ಪಿಸಿ ಗಾಂಧೀಜಿ ಅವರ ಆರ್ಶಿವಾದ ಪಡೆದಿದ್ದನ್ನು ಈ ಸಂದರ್ಭದಲ್ಲಿ ಆರ್.ಅಶೋಕ್ ಸ್ಮರಿಸಿದರು.

ಎಸ್.ಎಂ.ಕೃಷ್ಣ ಕ್ರೀಡಾಸ್ಪೂರ್ತಿ ನಮಗೆಲ್ಲ ಮಾದರಿ- ಗೃಹ ಸಚಿವ ಡಾ.ಜಿ.ಪರಮೇಶ್ವರ್ :

Home add -Advt

ತಮ್ಮ ವ್ಯಕ್ತಿತ್ವ ಮೂಲಕವೇ ಎಸ್.ಎಂ.ಕೃಷ್ಣ ಅವರು ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಟೆನಿಸ್ ಕ್ರೀಡಾಪಟು ಆಗಿದ್ದ ಅವರು, ರಾಜಕಾರಣದಲ್ಲೂ ಸಹ ಕ್ರೀಡಾಸ್ಪೂರ್ತಿ ಹೊಂದಿದ್ದರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಅವರು ವಿದ್ಯಾರ್ಥಿ ದೆಸೆಯಿಂದಲೂ ಪ್ರತಿಭಾನ್ವಿತರಾಗಿದ್ದ ಎಸ್.ಎಂ.ಕೃಷ್ಣ ಪ್ರಖ್ಯಾತ ವಾಷಿಂಗ್ಟನ್ ವಿಶ್ವ ವಿದ್ಯಾಲಯದಲ್ಲಿ ಫುಲ್ ಬ್ರೆöÊಟ್ ಸ್ಕಾಲರ್ ಪಡೆದ ಏಕೈಕ ರಾಜಕಾರಣಿಯಾಗಿದ್ದಾರೆ. ಬೆಂಗಳೂರನ್ನು ಐ.ಟಿ. ಕ್ರಾಂತಿ ಮೂಲಕ ಇಡಿ ಜಗತ್ತಿಗೆ ಪರಿಚಯಿಸಿಕೊಟ್ಟರು. ಅವರು ಮುಖ್ಯಮಂತ್ರಿಗಳು ಆಗಿದ್ದ ವೇಳೆ ದಿನ ಒಂದಕ್ಕೆ 200 ರಿಂದ 300 ಸಣ್ಣ ಹಾಗೂ ದೊಡ್ಡ ಐ.ಟಿ. ಕಂಪನಿಗಳು ನೊಂದಣಿಯಾಗಿದ್ದ ಉದಾಹರಣೆ ಇದೆ. ಈ ಕಂಪನಿಗಳೇ ಇಂದು ದೈತ್ಯ ಐ.ಟಿ. ಕಂಪನಿಗಳಾಗಿ ಬೆಳದಿವೆ. ಉತ್ತರ ಕರ್ನಾಟಕದ 7 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಶಾಲೆಗಳಲ್ಲಿ ಜಾರಿಗೆ ತಂದ ಮಧ್ಯಾಹ್ನ ಬಿಸಿಯೂಟ ಯೋಜನೆ ಮುಂದೆ ರಾಷ್ಟಿçÃಯ ನೀತಿಯಾಗಿ ಇಡೀ ದೇಶದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.
ಮುಖ್ಯಮಂತ್ರಿಯಾಗಿ ತಮ್ಮ ಸಂಪುಟದ ಸಹದ್ಯೋಗಿಗಳನ್ನು ಗೌರವದಿಂದ ಕಾಣುತ್ತಿದ್ದರು. ಸಚಿವ ಸಂಪುಟ ಒಪ್ಪಿಗೆ ಪಡೆದು ರಾಷ್ಟಾçದ್ಯಂತ ಗಮನಸೆಳದ ತೆಲಗಿ ಛಾಪಾ ಕಾಗದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದನ್ನು ಸ್ಮರಿಸಿದರು.

ಉತ್ತರ ಕರ್ನಾಟಕ ಅಭಿವೃದ್ದಿಗೆ ಎಸ್.ಎಂ.ಕೃಷ್ಣ ಕೊಡುಗೆ ಅಪಾರ- ಸಚಿವ ಹೆಚ್.ಕೆ.ಪಾಟೀಲ್:
ಬಚಾವತ್ ನ್ಯಾಯಾಧೀಕರಣ ಶಿಫಾರಸ್ಸು ಮೇರೆಗೆ ಕೃಷ್ಣಾ ನದಿ ನೀರಿನಲ್ಲಿ ರಾಜ್ಯಕ್ಕೆ 734 ಟಿ.ಎಂ.ಸಿ ನೀರು ಲಭಿಸಿತು. ಅದುವರೆಗೂ ಕೇವಲ 400 ಟಿ.ಎಂ.ಸಿ ನೀರಿಗೆ ಮಾತ್ರ ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತು. ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ ಅವರು ಕೂಡಲೇ 729 ಟಿ.ಎಂ.ಸಿ. ನೀರು ಬಳಕೆಗೆ ಎ ಸ್ಕೀಂ ಯೋಜನೆ ರೂಪಿಸಿ ಅನುದಾನ ನೀಡಿದರು. ಸರ್ಕಾರದ ಒಟ್ಟು ಆಯವ್ಯಯದಲ್ಲಿ ಶೇ.37 ರಷ್ಟು ನೀರಾವರಿ ಯೋಜನಗಳಿಗೆ ಮೀಸಲು ಇರಿಸಿದರು. ಇದರಲ್ಲಿ ಶೇ.75 ರಷ್ಟು ಅನುದಾನ ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ ಒದಗಿಸುವ ಮೂಲಕ ಉತ್ತರ ಕರ್ನಾಟಕ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್ ರಾಜ್ಯದ ಪ್ರಾದೇಶಿಕ ಅಸಮತೋಲನತೆಯನ್ನು ನಿವಾರಿಸಲು ಎಸ್.ಎಂ.ಕೃಷ್ಣ ಅವರು ಡಾ.ಡಿ.ಎಂ.ನAಜುಡಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದರು. ಈ ಸಮಿತಿ ವರದಿಯನ್ನು ಆಧರಿಸಿ ಹಿಂದುಳಿದ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಿದರು. ತಮ್ಮ ಅಧಿಕಾರವದಿಯಲ್ಲಿ ಸಹಕಾರ ಸದಸ್ಯರಿಗೆ ಯಶಸ್ವಿನಿ ಯೋಜನೆ ಜಾರಿ ಮಾಡಿದರು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸ್ತಿçà ಶಕ್ತಿ ಯೋಜನೆ ಜಾರಿ ಮಾಡಿದರು. ಎಸ್.ಎಂ.ಕೃಷ್ಣ ಅವರ ಕೊಡುಗೆ ಸ್ಮರಿಸುವ ದೃಷ್ಟಿಯಿಂದ ವಿಧಾನ ಸೌಧದಲ್ಲಿ ಅವರ ಪ್ರತಿಮೆ ನಿರ್ಮಿಸುವಂತೆ ಸಚಿವ ಹೆಚ್.ಕೆ.ಪಾಟೀಲ್ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಸಂತಾಪ ಸೂಚನೆ ನಿರ್ಣಯದ ಮೇಲೆ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಆರಗ ಜ್ಞಾನೇಂದ್ರ ಸೇರಿದಂತೆ ಇತರೆ ಶಾಸಕರು ಮಾತನಾಡಿ, ಮಾಜಿ ಮುಖ್ಯಮಂತ್ರಿಯವರೊAದಿಗಿನ ಒಡನಾಟ ಹಾಗೂ ಕೊಡಗೆಯನ್ನು ಸ್ಮರಿಸಿದರು.
ಎಸ್.ಎಂ.ಕೃಷ್ಣ ಗೌರವಾರ್ಥ ಸದನದಲ್ಲಿ ಮೌನಾಚರಣೆ ಆಚರಿಸಿ ಗೌರವ ಸಲ್ಲಿಸಲಾಯಿತು.
*****
ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ನಿಧನಕ್ಕೆ ಮೇಲ್ಮನೆಯಲ್ಲಿ ಗೌರವ ಸಂತಾಪ

ಬೆಳಗಾವಿ ಸುವರ್ಣ ವಿಧಾನಸೌಧ ಡಿ.10 (ಕ.ವಾ.):
‘ಪದ್ಮವಿಭೂಷಣ’ ಪುರಸ್ಕೃತ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರದ ಮಾಜಿ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ವಿಧಾನ ಪರಿಷತನಲ್ಲಿ ಸಂತಾಪ ಸೂಚಿಸಲಾಯಿತು.
ಎರಡನೇ ದಿನದ ಕಲಾಪ ಆರಂಭವಾಗುತ್ತಿದ್ದAತೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಎಸ್ ಎಂ ಕೃಷ್ಣ ಅವರ ನಿಧನರಾಗಿರುವ ವಿಷಯವನ್ನು ಸದನಕ್ಕೆ ತಿಳಿಸಲು ವಿಷಾಧಿಸುತ್ತೇನೆ ಎಂದು ಸಂತಾಪ ಸೂಚನೆಯ ವಿಷಯವನ್ನು ಪ್ರಕಟಿಸಿದರು.
ಮಿತಭಾಷಿ, ಸೌಮ್ಯ ರಾಜಕಾರಣಿ ಹಾಗೂ ಅಜಾತಶತ್ರುಗಳಾಗಿದ್ದ ಎಸ್ ಎಂ ಕೃಷ್ಣ ಅವರ ನಿಧನದಿಂದಾಗಿ ರಾಷ್ಟ್ರ ಹಾಗೂ ರಾಜ್ಯವು ಒಬ್ಬ ಶ್ರೇಷ್ಟ ರಾಜಕೀಯ ಮುತ್ಸದ್ದಿಯನ್ನು ಕಳೆದುಕೊಂಡAತಾಗಿದೆ ಎಂದು
ಸಂತಾಪ ಸೂಚನೆಯ ನಿರ್ಣಯದ ಪ್ರಸ್ತಾವವನ್ನು ಸದನಕ್ಕೆ ಓದಿ ಹೇಳಿದರು.
ಬಳಿಕ ಸಭಾ ನಾಯಕರು ಮತ್ತು ಸಚಿವರಾದ ಎನ್ ಎಸ್ ಬೋಸರಾಜು ಅವರು ಮಾತನಾಡಿ, ಎಸ್ ಎಂ ಕೃಷ್ಣ ಅವರು ತಮ್ಮ ಆಡಾಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದರು. ನೀರಾವರಿ,
ರೈತರ ಸಮಸ್ಯೆಗಳು ಎದುರಾದಾಗ ಅಂತಹ ಸವಾಲುಗಳನ್ನು ಸಮರ್ಥವಾಗಿ ನಿಬಾಯಿಸಿದರು. ಕೆರೆ ಅಭಿವೃದ್ದಿಗೆ ಸಾಕಷ್ಟು ಒತ್ತು ಕೊಟ್ಟಿದ್ದರು. ಬಡ ಮಕ್ಕಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆರಂಭಿಸಿದರು. ಮಹಿಳೆಯರ ಅನುಕೂಲಕ್ಕಾಗಿ ಸ್ತ್ರೀಶಕ್ತಿ ಗುಂಪುಗಳನ್ನು ಆರಂಭಿಸಿದರು.
ಅವರ ವಿಚಾರ, ದೂರದೃಷ್ಟಿ ರಾಜ್ಯದ ಬೆಳವಣಿಗೆಗೆ ಸಾಕಷ್ಟು ಅನುಕೂಲವಾಯಿತು ಎಂದು ತಿಳಿಸಿದರು.
ಬಳಿಕ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಎಸ್ ಎಂ ಕೃಷ್ಣ ಅವರು ದೂರದೃಷ್ಟಿ ಹೊಂದಿದ ನಾಯಕರಾಗಿದ್ದರು. ಹಿರಿಯರು ಕಿರಿಯರು ಎನ್ನದೇ ಎಲ್ಲರಿಗೂ ಗೌರವ ಕೊಡುತ್ತಿದ್ದರು. ಯುವಕರು ಬೆಳೆಯವೇಕು ಎಂದು ಬಯಸುತ್ತಿದ್ದರು. ಅವರ ಅಗಲಿಕೆ ರಾಜ್ಯ ಹಾಗೂ ರಾಷ್ಟ್ರಕ್ಕೆ ದೊಡ್ಡ ನಷ್ಟ ಎಂದು ತಿಳಿಸಿದರು.
ಸಭಾ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಮತ್ತು ಇನ್ನೀತರ ಸದಸ್ಯರು ಎಸ್ ಎಂ ಕೃಷ್ಣ ಅವರೊಂದಿಗಿನ ಒಡನಾಟವನ್ನು ಹಂಚಿಕೊAಡರು. ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿದ ಸೇವೆಯನ್ನು ಸ್ಮರಿಸಿದರು.
ಎಸ್ ಎಂ ಕೃಷ್ಣ: ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು 1932ರ ಮೇ 01 ರಂದು ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದರು. ಶ್ರೀಯುತರು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ, ಬೆಂಗಳೂರು ಸರ್ಕಾರಿ ಕಾನೂನು ಕಾಲೇಜಿನಿಂದ, ಟೆಕ್ಸಾಸ್‌ನ ಸದರನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಹಾಗೂ ಜಾರ್ಜ್ ವಾಶಿಂಗ್‌ಟನ್‌ನ ಲಾ ಕಾಲೇಜಿನಿಂದ ಕಾನೂನು ಪದವಿ ಪಡೆದರು. ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಅಂತರಾಷ್ಟ್ರೀಯ ನ್ಯಾಯ ಶಾಸ್ತ್ರದ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.
1962ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಶ್ರೀಯುತರು 4, 5 ಮತ್ತು 7ನೇ ಲೋಕಸಭೆಯ ಸದಸ್ಯರಾಗಿ, 1972-77ರವರೆಗೆ ವಿಧಾನ ಪರಿಷತ್ತಿನ ಸದಸ್ಯರಾಗಿ, 1996- 1999ರವರೆಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಶ್ರೀಯುತರು 1989-1993ರ ಅವಧಿಯಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾಗಿ, 1993-1994ರಲ್ಲಿ ಮೊದಲ ಉಪ ಮುಖ್ಯಮಂತ್ರಿಯಾಗಿ, 1999-2004ರವರೆಗೆ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗಿ, 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.
ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ ಕೈಗಾರಿಕೆಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ, ಹಣಕಾಸು ಖಾತೆ ರಾಜ್ಯ ಸಚಿವರಾಗಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ವಿವಿಧ ಹುದ್ದೆಗಳಲ್ಲಿ ಸ್ಮರಣೀಯವಾಗಿ ಜನ ಸೇವೆಯನ್ನು ಸಲ್ಲಿಸಿರುತ್ತಾರೆ. ವಿಶ್ವಭೂಪಟದಲ್ಲಿ ಬೆಂಗಳೂರು ನಗರದ ಚಿತ್ರಣ ಬದಲಿಸಿ ಬೆಂಗಳೂರನ್ನು “ಸಿಲಿಕಾನ್ ಸಿಟಿ”ಯಾಗಿ ಪರಿವರ್ತಿಸಿದ ಹರಿಕಾರರಾಗಿದ್ದ ಶ್ರೀಯುತರು ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರನ್ನು ತಂದವರು. ತಾಲ್ಲೂಕು ಮಟ್ಟದಲ್ಲಿ “ಭೂಮಿ” ತಂತ್ರಜ್ಞಾನವನ್ನು ಜಾರಿ ತರುವ ಮೂಲಕ ಡಿಜಿಟಲೀಕರಣಕ್ಕೆ ನಾಂದಿ ಹಾಡಿದ ಕೀರ್ತಿಗೆ ಭಾಜನರಾಗಿದ್ದಾರೆ.
ಶ್ರೀಯುತರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ, ಅಧ್ಯಯನಶೀಲ ಪ್ರವೃತ್ತಿ ಹಾಗೂ ವ್ಯಕ್ತಿತ್ವವು ಉದಯೋನ್ಮುಖ ರಾಜಕಾರಣಿಗಳಿಗೆ ಸ್ಪೂರ್ತಿದಾಯಕವಾಗಿದೆ. ಶ್ರೀಯುತರು ರಾಷ್ಟ್ರ ಮತ್ತು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
*******
ಚಿಂತಕರ ಚಾವಡಿಯ ಸದಸ್ಯರಿಂದ ನುಡಿನಮನ

“ಎಸ್ ಎಂ ಕೃಷ್ಟ ಅವರು ದೇವರಾಜು ಅರಸು ಸರಿ ಸಮಾನವಾದ ಮೌಲ್ಯಯುತ ಆಡಳಿತ ನಡೆಸಿದ ಧೀಮಂತ.. ಎಲ್ಲರನ್ನೂ ಒಳಗೊಳ್ಳುವ ರಾಜಕಾರಣ ಮಾಡಿದ ಮುತ್ಸದ್ಧಿ”
ಡಿಸೆಂಬರ್ 10ರಂದು ನಡೆದ ಎರಡನೇ ದಿನದ ಅಧಿವೇಶನದಲ್ಲಿ ‘ಚಿಂತಕರ ಚಾವಡಿ’ ಎಂದೇ ಹೆಸರಾದ ಮೇಲ್ಮನೆಯಲ್ಲಿ ಈ ಮೇಲಿನಂತೆ ಎಸ್ ಎಂ ಕೃಷ್ಣ ಅವರ ವ್ಯಕ್ತಿತ್ವವನ್ನು ಬಣ್ಣಿಸಲಾಯಿತು.
ಸಂತಾಪ ಸೂಚನೆಯ ನಿರ್ಣಯದ ಪ್ರಕಟಣೆ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು.
ಸಮಚಿತ್ತ ಹೊಂದಿದ್ದರು:
ವಿಧಾನ ಪರಿಷತ್ ಶಾಸಕರಾದ ಡಾ.ತಿಮ್ಮಯ್ಯ ಅವರು ಮಾತನಾಡಿ, ಡಾ.ರಾಜಕುಮಾರ ಅವರು ಅಪಹರಣವಾದಾಗ ಅವರನ್ನು ರಕ್ಷಣೆ ಮಾಡಿ ನಾಡಿಗೆ ಒಪ್ಪಿಸಿದ ಕೀರ್ತಿ ಎಸ್ ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.
ಶಿಸ್ತುಬದ್ಧ ರಾಜಕಾರಣಿ: ಪರಿಷತ್ ಶಾಸಕರಾದ ಎಸ್ ಎಲ್ ಭೋಜೇಗೌಡ
ಅವರು ಮಾತನಾಡಿ, ಕೃಷ್ಣ ಅವರು ನಾಲ್ಕು ಸದನಗಳಲ್ಲಿ ಕುಳಿತು ಸೇವೆ ಮಾಡಿದರು. ಶಿಸ್ತುಬದ್ಧವಾದ ರಾಜಕಾರಣಿಯಾಗಿದ್ದರು. ಯಾವುದಕ್ಕು ಧೃತಿ ಗೆಡುತ್ತಿರಲಿಲ್ಲ. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.
ನೋಡಿ ಕಲಿಯಬೇಕು: ಪರಿಷತ್ ಶಾಸಕರಾದ ಶಶೀಲ್ ಜಿ ನಮೋಶಿ ಅವರು ಮಾತನಾಡಿ, ದೇವದುರ್ಗದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಕೊಡುವ ಮೂಲಕ ಬಿಸಿ ಊಟ ಯೋಜನೆಯನ್ನು ಆರಂಭಿಸಿದರು. ನೋಡಿ ಕಲಿಯುವಂತಹ ರಾಜಕಾರಣಿ ಎಸ್ ಎಂ ಕೃಷ್ಟ ಆಗಿದ್ದರು ಎಂದರು.
ಮುAದಿನ ಪೀಳಿಗೆಗೆ ಸ್ಪೂರ್ತಿ: ಪರಿಷತ್ ಶಾಸಕರಾದ ಬಿ.ಕೆ.ಹರಿಪ್ರಸಾದ್ ಅವರು ಮಾತನಾಡಿ, ವಿದ್ಯಾರ್ಥಿ ದಿಶೆಯಿಂದಲು ನಾವು ಎಸ್ ಎಂ ಕೃಷ್ಣ ಅವರೊಂದಿಗೆ ಒಡನಾಟ ಹೊಂದಿದ್ದೆವು. ಎಲ್ಲ ಸದನದಲ್ಲೂ ಸದಸ್ಯರಾಗಿ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುವಂತೆ ಆಡಳಿತ ನಡೆಸಿದರು ಎಂದರು.
ಸಮಯೋಚಿತ ರಾಜಕಾರಣಿ: ಪರಿಷತ್ ಶಾಸಕರಾದ ಸಿ.ಟಿ.ರವಿ ಅವರು ಮಾತನಾಡಿ, ಪ್ರತಿಯೊಂದನ್ನು ಸಮಯೋಚಿತವಾಗಿ ಮಾಡುವ, ಉತ್ತಮ ನಿರ್ಣಯ ತೆಗೆದುಕೊಂಡು ಆಡಳಿತ ನಡೆಸಿದ ಕೀರ್ತಿ ಎಸ್ ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.
ಶಿಕ್ಷಣದಲ್ಲಿ ಕ್ರಾಂತಿ ಮಾಡಿದರು: ಕೃಷ್ಣ ಅವರ ಆತ್ಮೀಯತೆ, ಸಂಸ್ಕಾರ, ನಡವಳಿಕೆ ಎಲ್ಲವೂ ವಿಶೇಷವಾಗಿತ್ತು. ಕೃಷ್ಣ ಅವರು
ಈ ನಾಡಿನ ಸಾಂಸ್ಕೃತಿಕ ನಾಯಕ. ನನ್ನ ಸರ್ಕಾರದ ಮೊದಲ ಆದ್ಯತೆ ಅಕ್ಷರ ಮತ್ತು ಆರೋಗ್ಯ ಎಂದು ಹೇಳುತ್ತಿದ್ಧರು. ತಮ್ಮ ಸಂಪುಟದಲ್ಲಿ ನನಗೆ ಶಾಲಾ ಶಿಕ್ಷಣ ಖಾತೆ ನೀಡಿದರು. ಸರ್ಕಾರಿ ಶಾಲೆಗಳನ್ನು ದೇವಾಲಯದ ರೀತಿ ಮಾಡಿದರು. ಮಕ್ಕಳನ್ನು ದೇವರೆಂದು ಭಾವಿಸಿದ್ದರು ಎಂದು ಪರಿಷತ್ ಶಾಸಕರಾದ ಅಡಗೂರ ಹೆಚ್ ವಿಶ್ವನಾಥ ಅವರು ತಿಳಿಸಿದರು.
ಮಾನವೀಯ ಮೌಲ್ಯ ಹೊಂದಿದ್ದರು: ಪರಿಷತ್ ಶಾಸಕರಾದ ಎಂ.ನಾಗರಾಜ ಅವರು ಮಾತನಾಡಿ, ಕೃಷ್ಟ ಅವರು ಮಾನವೀಯ ಮೌಲ್ಯ ಹೊಂದಿದ ನಾಯಕರಾಗಿದ್ದರು. ಶಿಸ್ತು ಸಂಯಮದ ರಾಜಕಾರಣ ಮಾಡಿದರು ಎಂದರು.
ಬುದ್ಧ, ಬಸವ ಅಂಬೇಡ್ಕರ್ ವಿಚಾರಧಾರೆ: ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ ಅವರು ಮಾತನಾಡಿ, ಬುದ್ದ, ಬಸವ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ವಿಕಾಸಸೌಧವನ್ನು ನಿರ್ಮಿಸಿದ ಕೀರ್ತಿ ಕೃಷ್ಟ ಅವರಿಗೆ ಸಲ್ಲುತ್ತದೆ ಎಂದರು.
ಡ್ರೆಸ್ ಕೋಡ್ ವಿಶೇಷ:
ಪರಿಷತ್ ಶಾಸಕರಾದ ಶರವಣ ಟಿ.ಎ. ಅವರು ಮಾತನಾಡಿ, ವಿದೇಶದ ಜನರು ಕರ್ನಾಟಕದತ್ತ ನೋಡುವಂತೆ ಬೆಂಗಳೂರನ್ನು ಅಭಿವೃದ್ಧಿಪಡಿಸಿದರು. ಅವರು
ವ್ಯಕ್ತಿಯಲ್ಲ; ದೊಡ್ಡ ಶಕ್ತಿಯಾಗಿದ್ದರು. ಅವರ ಡ್ರೆಸ್ ಕೋಡ್, ಸಮಯಕ್ಕೆ ಸರಿಯಾಗಿ ಮಾಡುವ ಕಾರ್ಯವಿಧಾನ ಕೂಡ ವಿಶೇಷ ಎಂದರು.
ಹೃದಯ ವೈಶಾಲ್ಯತೆ:
ಪರಿಷತ್ ಶಾಸಕರಾದ ಪಿ ಎಚ್ ಪೂಜಾರ ಅವರು ಮಾತನಾಡಿ, ಸಿಎಂ ಆಗಿದ್ದಾಗ ಆಲಮಟ್ಟಿ ಜಲಾಶಯದ ಬಗ್ಗೆ ಗಮನ ಹರಿಸಿದ್ದರು. ಬಾಗಲಕೋಟಿ ಆಲಮಟ್ಟಿ ಸಂತ್ರಸ್ತರಿಗಾಗಿ ವಿಶೇಷ ಪ್ಯಾಕೇಜ್ ನೀಡಿ ಸ್ಪಂದನೆ ನೀಡಿದ್ದು ವಿಶೇಷ. ಹೃದಯ ವೈಶಾಲ್ಯ ಹೊಂದಿದ ರಾಜಕಾರಣಿಯಾಗಿದ್ದರು ಎಂದರು.
ಮುತ್ಸದ್ಧಿ ರಾಜಕಾರಣಿ:
ಪರಿಷತ್ ಶಾಸಕರಾದ ಎನ್ ರವಿಕುಮಾರ್ ಅವರು ಮಾತನಾಡಿ, ಎಸ್ ಎಂ ಕೃಷ್ಣ ಅವರು ಸಮದೃಷ್ಟಿ ಹೊಂದಿದ ಮರೆಯಲಾರದ ರಾಜಕಾರಣಿಯಾಗಿದ್ದರು. ಪ್ರತಿಭಟನೆಕಾರರಿಗೆ ಸ್ಪಂದನೆ ನೀಡುತ್ತಿದ್ದರು. ಸಮಾಜವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಉತ್ತಮ ರಾಜಕಾರಣ ಮಾಡಿದರು. ಬೆಂಗಳೂರನ್ನು ಕ್ಲೀನ್ ಸಿಟಿ ಗ್ರೀನ್ ಸಿಟಿ ಮಾಡಿದರು.
ಚಿತ್ರರಂಗದೊAದಿಗೆ ಉತ್ತಮ ಬಾಂಧವ್ಯ:
ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ಅವರು ಮಾತನಾಡಿ, ಯುವ ನಾಯಕರಿಗೆ ಸ್ಪೂರ್ತಿ ತುಂಬುತ್ತಿದ್ದರು. ಚಿತ್ರರಂಗದೊAದಿಗೆ ಸಹ ಉತ್ತಮ ಬಾಂದವ್ಯ ಹೊಂದಿದ್ದರು ಎಂದರು.
ಜಾತಿರಹಿತ ರಾಜಕಾರಣಿ:
ಪರಿಷತ್ ಶಾಸಕರಾದ ಉಮಾಶ್ರೀ ಅವರು ಮಾತನಾಡಿ, ಕೃಷ್ಣ ಅವರು ತಮ್ಮ ಆಡಳಿತಾವಧಿಯಲ್ಲಿ ಕಾರ್ಯಕರ್ತರನ್ನು ಗುರುತಿಸಿ ಪ್ರೋತ್ಸಾಹ ನೀಡಿದರು. ಸಣ್ಣ ಸಣ್ಣ ಸಮುದಾಯಗಳ ಕಾರ್ಯಕರ್ತರಿಗೆ ವಿಶೇಷ ಆದ್ಯತೆ ಕಲ್ಪಿಸಿದರು ಎಂದರು.
ಕರ್ನಾಟಕ ರಾಜ್ಯದ ಜೆಂಟಲಮನ್:
ಪರಿಷತ್ ಶಾಸಕರಾದ ಕೆ ಎಸ್ ನವೀನ್ ಅವರು ಮಾತನಾಡಿ, ಕೃಷ್ಣ ಅವರು ಅಳಿಸಲಾಗದ ಸೇವೆಯನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿದ್ದಾರೆ ಎಂದರು.
ರೈತರ ಒಡನಾಡಿ:
ಪರಿಷತ್ ಶಾಸಕರಾದ ಮಧು ಜಿ ಮಾದೇಗೌಡ ಅವರು ಮಾತನಾಡಿ, ಕೃಷ್ಣ ಅವರ ಕಾಲದಲ್ಲಿ ಬರ ಪರಿಸ್ಥಿತಿ ತಲೆದೋರಿದಾಗ ರೈತರ ಒಡನಾಡಿಯಾಗಿ ಅದನ್ನು ಸರಿಯಾಗಿ ನಿಬಾಯಿಸಿದರು.ಕಂಪ್ಯೂಟರ್ ಶಿಕ್ಷಣಕ್ಕಾಗಿ ಮಾಹಿತಿ ಸಿಂಧು ಕಾರ್ಯಕ್ರಮ ಜಾರಿ ಮಾಡಿದರು ಎಂದರು.
ಬುದ್ಧಿವಾದ ಹೇಳುತ್ತಿದ್ದರು:
ಪರಿಷತ್ ಶಾಸಕರಾದ ನಸೀರ್ ಅಹ್ಮದ್ ಅವರು ಮಾತನಾಡಿ, ಸದನದಲ್ಲಿ ಹೇಗಿರಬೇಕು. ಹೇಗೆ ಮಾತಾಡಬೇಕು ಎಂದು ಯುವ ರಾಜಕಾರಣಿಗಳಿಗೆ ಸಲಹೆ ಮಾಡುತ್ತಿದ್ದರು. ಐಟಿಬಿಟಿಗೆ ವಿಶೇಷ ಒತ್ತು ನೀಡಿದ್ದರು ಎಂದರು.
ಐಟಿ-ಬಿಟಿಯ ವಾರಸುದಾರ:
ಪರಿಷತ್ ಶಾಸಕರಾದ ಹೆಚ್ ಪಿ ಸುಧಾಮ್ ದಾಸ್ ಅವರು ಮಾತನಾಡಿ, ಕೃಷ್ಣ ಅವರು ರಾಜಕಾರಣದ ವಿಶೇಷ ನೆಲವಾದ ಮಂಡ್ಯದಿAದ ಬಂದು ವಿಶಿಷ್ಟ ರಾಜಕಾರಣ ಮಾಡಿದರು. ಮಾಹಿತಿ ತಂತ್ರಜ್ಞಾನಕ್ಕೆ ಉತ್ತೇಜನ ನೀಡಿ ಐಟಿ ಬಿಟಿಯ ವಾರಸುದಾರ ಎಂದು ಖ್ಯಾತಿ ಪಡೆದರು ಎಂದರು.
ಸಮರ್ಥ ನಿರ್ಹಹಣೆ:
ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಅವರು ಮಾತನಾಡಿ, ವಿಧಾನಸಭೆ, ವಿಧಾನ ಪರಿಷತ್, ರಾಜ್ಯ ಸಭೆ, ಲೋಕಸಭೆ ಎಲ್ಲ ಕಡೆಗೂ ಉತ್ತಮವಾಗಿ ಕಾರ್ಯ ನಿರ್ವಹಿಸಿ ತಮಗೆ ವಹಿಸಿದ ಖಾತೆಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಿದರು ಎಂದರು.
ಕ್ರೀಡಾ ಕ್ಷೇತ್ರದ ಒಲವು:
ಪರಿಷತ್ ಶಾಸಕರಾದ ಗೋವಿಂದರಾಜು ಅವರು ಮಾತನಾಡಿ, ಕ್ರೀಡಾ ಕ್ಷೇತ್ರದ ಬಗ್ಗೆ ಸಹ ಕೃಷ್ಣ ಅವರಿಗೆ ಒಲವಿತ್ತು. ವಿಂಬಲ್ಡನ್ ಕ್ರೀಡಾಕೂಟ ವೀಕ್ಷಣೆಗಾಗಿ ವಿದೇಶಕ್ಕೆ ತೆರಳುತ್ತಿದ್ದರು ಎಂದರು.
ಸ್ಮಾರ್ಟ್ ರಾಜಕಾರಣಿ:
ಪರಿಷತ್ ಶಾಸಕರಾದ ಕೇಶವ ಪ್ರಸಾದ ಎಸ್ ಅವರು ಮಾತನಾಡಿ, ಕೃಷ್ಣ ಅವರು ತಮ್ಮ ಆಡಳಿತಾವಧಿಯಲ್ಲಿ ಗಮನಾರ್ಹ ಕೆಲಸ ಮಾಡಿ ಸ್ಮಾರ್ಟ್ ರಾಜಕಾರಣಿಯಾಗಿ ಗುರುತಿಸಿಕೊಂಡರು ಎಂದು ತಿಳಿಸಿದರು.
ಸಂತಾಪ: ಮೃತರ ಗೌರವಾರ್ಥ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಿದರು.

Related Articles

Back to top button