Kannada NewsKarnataka NewsLatest

*ಹಾಡ ಹಗಲೇ ನಡು ರಸ್ತೆಯಲ್ಲಿ ವ್ಯಕ್ತಿಗೆ ಚಾಕು ಚುಚ್ಚಿ ಅಟ್ಟಹಾಸ; ರಕ್ತದ ಮಡುವಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಬಿಡದ ದುಷ್ಕರ್ಮಿ; ಕ್ರೌರ್ಯಕ್ಕೆ ಮೂಕ ಪ್ರೇಕ್ಷಕರಾಗಿ ನಿಂತ ಪೊಲೀಸರು, ಸಾರ್ವಜನಿಕರು*

ಪ್ರಗತಿವಾಹಿನಿ ಸುದ್ದಿ; ಗದಗ: ಮನುಷತ್ವವನ್ನೇ ಮರೆತ ವ್ಯಕ್ತಿಯೊಬ್ಬ ನಡು ರಸ್ತೆಯಲ್ಲಿ ಇನ್ನೋರ್ವ ವ್ಯಕ್ತಿ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿರುವ ಘಟನೆಯಿದು. ಹಾಡ ಹಗಲೇ ದುಷ್ಕರ್ಮಿಯೊಬ್ಬ ವ್ಯಕ್ತಿಯೋರ್ವನಿಗೆ ಮನಬಂದಂತೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಗದಗ ನಗರದ ಹಳೇ ಬಸ್ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.

ಹಣಕಾಸಿನ ವಿಚಾರವಾಗಿ ವ್ಯಕ್ತಿಯೋರ್ವ ಸುನೀಲ್ ಎಂಬಾತನ ಮೇಲೆ ನಡು ರಸ್ತೆಯಲ್ಲೇ ಮನ ಬಂದಂತೆ ಚಾಕು ಇರಿದಿದ್ದಾನೆ. ರಕ್ತದ ಮಡುವಲ್ಲಿ ಆತ ಒದ್ದಾಡುತ್ತಿದ್ದರೂ ಬಿಡದ ವ್ಯಕ್ತಿ ಮತ್ತೆ ಮತ್ತೆ ಹಲ್ಲೆ ನಡೆಸಿದ್ದಾನೆ. ರಸ್ತೆಯಲ್ಲೇ ಬಿದ್ದು ನರಳಾಡುತ್ತಿದ್ದರೂ ಕಾಲಿನಿಂದ ಒದ್ದಿದ್ದಾನೆ. ಘೋರ ಘಟನೆ ಕಣ್ಮುಂದೆ ನಡೆಯುತ್ತಿದ್ದರೂ ಪೊಲೀಸರು ತಪ್ಪಿಸುವ ಕೆಲಸ ಮಾಡಿಲ್ಲ. ಮೃಗದಂತೆ ಅಟ್ಟಹಾಸ ಮೆರೆಯುತ್ತಿದ್ದವನ ಕಂಡು ಕಂಗಾಲಾದ ಸಾರ್ವಜನಿಕರು ಹತ್ತಿರ ಬರುವ ಧೈರ್ಯಮಾಡಿಲ್ಲ. ಈ ಭಯಾನಕ ದೃಶ್ಯ ಕ್ಯಾಮರಾ ಒಂದರಲ್ಲಿ ಸೆರೆಯಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button