ಜನೆವರಿ 22ರಂದು ನಾಲ್ವರಿಗೆ ಗಲ್ಲು ಶಿಕ್ಷೆ

 ಪ್ರಗತಿವಾಹಿನಿ ಸುದ್ದಿ, ನವದೆಹಲಿ – ನಿರ್ಭಯಾ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಜನೆವರಿ 22ರಂದು ಗಲ್ಲಿಗೇರಲಿದ್ದಾರೆ.

ಪಟಿಯಾಲಾ ಹೌಸ್ ನ್ಯಾಯಾಲಯ ಅಪರಾಧಿಗಳಿಗೆ ಡೆತ್ ವಾರೆಂಟ್ ಜಾರಿಗೊಳಿಸಿದೆ.

Related Articles

2012ರ ಡಿಸೆಂಬರ್ 16ರಂದು ದಕ್ಷಿಣ ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿ ಜ್ಯೋತಿ ಸಿಂಗ್ ಅವರನ್ನು 6 ಜನ ಸೇರಿಕೊಂಡು ಚಲಿಸುತ್ತಿದ್ದ ಬಸ್ಸಿನೊಳಗೇ ಅತ್ಯಾಚಾರ ಮಾಡಿದ್ದರು. ಅಲ್ಲದೆ ಆಕೆ ಮತ್ತು ಆಕೆಯ ಜೊತೆಗಿದ್ದ ಗೆಳೆಯನನ್ನು ಬಸ್ಸಿನಿಂದ ಕೆಳಗೆ ಎಸೆಯಲಾಗಿತ್ತು.

ಈ ಪ್ರಕರಣ ನಿರ್ಭಯಾ ಪ್ರಕರಣ ಎಂದು ಭಾರಿ ಸುದ್ದಿಯಾಗಿತ್ತು.

Home add -Advt

ರಾಮ್ ಸಿಂಗ್, ಅಕ್ಷಯ್, ವಿನಯ್, ಮುಕೇಶ್, ಪವನ್ ಕುಮಾರ್ ಹಾಗೂ ಮತ್ತೋರ್ವ ಅಪ್ರಾಪ್ತ ಹುಡುಗನನ್ನು ಪೊಲೀಸರು ಬಂಧಿಸಿದರು. ಪ್ರಮುಖ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲೇ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದ.

ಮರಣ ದಂಡನೆಯಿಂದ ತಪ್ಪಿಸಿಕೊಳ್ಳಲು ಇವರೆಲ್ಲ ಮಾಡಿದ ಪ್ರಯತ್ನ ವಿಫಲವಾಗಿದೆ.

Related Articles

Back to top button