Kannada NewsKarnataka News

ಗಂಗಾಧರ ಸ್ವಾಮಿ ತವಗಮಠ ನಿಧನ

ಗಂಗಾಧರ ಸ್ವಾಮಿ ತವಗಮಠ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹುಕ್ಕೇರಿ ತಾಲೂಕು ಕುರಣಿ ಗಂಗಾದೇವಿ ಸುಕ್ಷೇತ್ರದ ಧರ್ಮಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ  ಸದಸ್ಯ ಗಂಗಾಧರ ಸ್ವಾಮಿ ತವಗಮಠ ನಿಧನರಾಗಿದ್ದಾರೆ.

ಅವರಿಗೆ 62 ವರ್ಷ ವಯಸ್ಸಾಗಿತ್ತು. ಓರ್ವ ಮಗ ಹಾಗೂ ಐವರು ಹೆಣ್ಣು ಮಕ್ಕಳಿದ್ದಾರೆ. ಗೋಡಗೇರಿ ಹಾಗೂ ಕುರಣಿಯಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದರು. ಅವುಗಳ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ಮಧ್ಯಾಹ್ನ ನಿಧನರಾದರು. ಸೋಮವಾರ ಬೆಳಗ್ಗೆ ಅವರ ಅಂತ್ಯಕ್ರಿಯೆ ನಡೆಯಲಿದೆ.

Home add -Advt

Related Articles

Back to top button