Kannada NewsLatest

ಎಲ್ಲಿದ್ದೀಯಪ್ಪ ಯಡಿಯೂರಪ್ಪ… !

ಎಲ್ಲಿದ್ದೀಯಪ್ಪ ಯಡಿಯೂರಪ್ಪ . . !

ಪ್ರಗತಿವಾಹಿನಿ ಸುದ್ದಿ – ಬೆಂಗಳೂರು : ಬೆಳಗಾವಿ, ರಾಯಚೂರು, ಬಾಗಲಕೋಟೆ ಸೇರಿ ರಾಜ್ಯದ ನಾನಾ ಕಡೆ ಪ್ರವಾಹದಿಂದ ಜನರು ಅಕ್ಷರಶಃ ಕಂಗಾಲಾಗಿದ್ದಾರೆ.. ಸರಿಯಾದ ನೆರವು ಸಿಗದೆ ದಿಕ್ಕುತೋಚದಂತಾಗಿದ್ದಾರೆ, “ಎಲ್ಲಿದ್ದೀಯಪ್ಪ ಯಡಿಯೂರಪ್ಪ” ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.
ಹಿಂದೆಲ್ಲಾ ನಮ್ಮ ಪರವಾಗಿ ” ಎಲ್ಲಿದ್ದೀಯಪ್ಪ ನಿಖಿಲ್ ” ಎಂದು ಗೇಲಿ ಮಾಡಿದ ನೀವು, ಈಗೆಲ್ಲಿದ್ದೀರಿ… ಎಲ್ಲಿದ್ದೀಯಪ್ಪ ಯಡಿಯೂರಪ್ಪ. ಆಗೆಲ್ಲಾ ವಿಡಿಯೋ, ವಾಟ್ಸಾಪ್ ನಲ್ಲಿ ನಮ್ಮನ್ನು ಗೇಲಿ ಮಾಡಿದ ನೀವು ಈಗ ಎಲ್ಲಿ ಕಾಣೆಯಾಗಿದ್ದೀರಿ ಎಂದು ಟೀಕಿಸಿದ್ದಾರೆ.
ಅರಮನೆ ಮೈದಾನದಲ್ಲಿ ಬುಧವಾರ ಸಂಜೆ ನಡೆದ ಜೆಡಿಎಸ್ ಶಿಸ್ತು ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ಮಾತನಾಡಿದರು. ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದರೆ, ಮುಖ್ಯಮಂತ್ರಿ ದೆಹಲಿಗೆ ಹೋಗಿ ಯಾರಿಗೆ ಮಂತ್ರಿ ಹುದ್ದೆಗಳನ್ನು ಕೊಡಬೇಕು ಎಂಬ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಈಗ “ಯಡಿಯೂರಪ್ಪ ಎಲ್ಲಿದ್ದೀಯಪ್ಪ” … ಎಂದು ರಾಜ್ಯದ ಜನತೆ ಕೇಳಲು ಸರಿಯಾದ ಸಮಯ ಎಂದರು.
ತಮ್ಮ ಸರ್ಕಾರ ವರ್ಗಾವಣೆ ಮಾಡುತ್ತಿದೆ ಎಂಬ ಬಗ್ಗೆ ಆಕ್ರೋಶಗೊಂಡಿದ್ದ ಬಿಜೆಪಿ ನಾಯಕರು, ಕೆಲಸ ಮಾಡುವ ಕೆಲವು ವಿಮರ್ಶಕರು ಎಲ್ಲಿಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ಹುದ್ದೆಯನ್ನು ಅಲಂಕರಿಸುವುದು ಎಂದರೆ ಜನರ ಸಮಸ್ಯೆಗಳನ್ನು ಪರಿಹರಿಸಲು ತೆಗೆದುಕೊಳ್ಳುವ ಉಪಕ್ರಮ ಎಂದರ್ಥ ಎಂದರು. ಇನ್ನು ಈ ಬಗ್ಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಿಎಂ ವಿರುದ್ಧ ವಿಭಿನ್ನ ಟ್ವೀಟ್ ಮಾಡಿ, ರೋಮ್ ಸಾಮ್ರಾಜ್ಯ ನಾಶವಾಗುತ್ತಿದ್ದರೆ … ಅದರ ಚಕ್ರವರ್ತಿ ಪಿಟೀಲು ಬಾರಿಸುತ್ತಿದ್ದನಂತೆ, ಅಂತೆಯೇ ಯಡಿಯೂರಪ್ಪ ದೆಹಲಿಯಲ್ಲಿ ಪಿಟೀಲು ಬಾರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ./////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button