
ಪ್ರಗತಿವಾಹಿನಿ ಸುದ್ದಿ: ಬಿಹಾರದ ಬಿಜೆಪಿ ನಾಯಕ, ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆ ಪ್ರಕರಣದ ಆರೋಪಿ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.
ಆರೋಪಿ ವಿಕಾಸ್ ಎಂಬಾತನನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಪೊಲೀಸರ ದಾಳಿ ವೇಳೆ ವಿಕಾಸ್ ಅಲಿಯಾಸ್ ರಾಜಾ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದ್ದಾರೆ.
ಗೋಪಾಲ್ ಖೇಮ್ಕಾ ಹತ್ಯೆಯಲ್ಲಿ ವಿಕಾಸ್ ನೇರ ಭಾಗಿಯಾಗಿರುವ ಆರೋಪವಿದೆ. ಐಎಸ್ ಟಿ ಹಾಗೂ ಎಸ್ ಟಿ ಎಫ್ ತಂಡಗಳ ರೇಡ್ ವೇಳೆ ಈ ಎನ್ ಕೌಂಟರ್ ನಡೆದಿದೆ.