Kannada NewsKarnataka NewsLatest

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಹಸ್ತಾಂತರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿವಿಧ ಸಹಕಾರಿ ಸಂಘಗಳಿಂದ ಸಂಗ್ರಹಿಸಿದ ಒಟ್ಟೂ 3.10 ಲಕ್ಷ ರೂ.ಗಳ ಚೆಕ್ ನ್ನು ಕಿತ್ತೂರ ಕ್ಷೇತ್ರದ ಶಾಸಕ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಿದರು.
ಬೈಲಹೊಂಗಲ ಹಾಗೂ ಕಿತ್ತೂರ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ 2,75,000 ರೂ. ಹಾಗೂ ಬೈಲಹೊಂಗಲ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ವತಿಯಿಂದ  25000 ರೂ. ಹಾಗೂ ಕಿತ್ತೂರ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ವತಿಯಿಂದ 10000 ರೂ‌. ಗಳ ಚೆಕ್ ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಿದರು.
ಸಹಾಯಕ ನಿಬಂಧಕರ  ಮುಖಾಂತರ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿ.ಡಿ.ಸಿ.ಸಿ ಬ್ಯಾಂಕ್ ಸಿಬ್ಬಂದಿಗಳಾದ  ಬಿ.ಕೆ ಪಾಟೀಲ, ಎ.ಎಮ್ ಭೇಟಗೇರಿ, ಎ.ಕೆ ಮಾಸ್ತಿ ಸಿ.ಡಿ.ಓ ಬೈಲಹೊಂಗಲ, ಎಸ್.ಎಸ್ ಪಾಟೀಲ, ಪಿಕೆಪಿಎಸ್ ಸಿಬ್ಬಂದಿಗಳಾದ ಎ.ಎಮ್ ರಾಯಣ್ಣವರ  ಉಪಸ್ಥಿತರಿದ್ದರು.

Related Articles

Back to top button