Kannada NewsKarnataka NewsLatest

​ಮನೆ ನಿರ್ಮಾಣ ಆದೇಶ ಪತ್ರ ಹಸ್ತಾಂತರ; ಸಂತ್ರಸ್ತರ ಮೊಗದಲ್ಲಿ ನಗು ತರಿಸಿದ ಶಾಸಕಿ​

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 2019ರ ಆಗಸ್ಟ್ ​ತಿಂಗಳಲ್ಲಿ ರಾಜ್ಯದಲ್ಲಿ‌ ಉಂಟಾದ ನೆರೆಹಾವಳಿಯಿಂದ ಹಾನಿಗೀಡಾಗಿರುವ ಮನೆಗಳ ಪುನರ್ ನಿರ್ಮಾಣ​ ಹಾಗೂ ​ದುರಸ್ಥಿ ಕಾಮಗಾರಿಗಳ ಸಲುವಾಗಿ​ ಮಾವಿನಕ​ಟ್ಟೆ​ ಗ್ರಾಮದ ​ 15 ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಹಸ್ತಾಂತರಿಸಲಾಯಿತು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಅನುಪಸ್ಥಿತಿಯಲ್ಲಿ ​ಲಕ್ಷ್ಮಿ ತಾಯಿ ಕೋ ಆಪರೇಟಿವ್ ಸೊಸೈಟಿ ಚೇರಮನ್ ಚನ್ನರಾಜ ಹಟ್ಟಿಹೊಳಿ ಆದೇಶ ಪತ್ರಗಳನ್ನು ವಿತರಿಸಿದರು.​ 2 ವರ್ಷಗಳಾದರೂ ಫಲಾನುಭವಿಗಳಿಗೆ ಪರಿಹಾರ ಸಿಕ್ಕಿರಲಿಲ್ಲ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪಟ್ಟು ಬಿಡದೆ​ ನಿರಂತರ ಪ್ರಯತ್ನ ಮಾಡಿ ಸರ್ಕಾರದಿಂದ ಆದೇಶ ಪತ್ರಗಳನ್ನು ಹೊರಡಿಸುವಲ್ಲಿ ಯಶಸ್ವಿಯಾಗಿ​ದ್ದಾರೆ. ತನ್ಮೂಲಕ ಸಂತ್ರಸ್ತರ ಮುಖದಲ್ಲಿ ನಗುತರಿಸಿದ್ದಾರೆ.
​ ​ಆದೇಶ ಪತ್ರ ಹಸ್ತಾಂತರದ ಸಂದರ್ಭದಲ್ಲಿ ಮಾವಿನಕಟ್ಟಿಯ ಹಿರಿಯರಾದ ಸಿದ್ರಾಮ ಗಡಾದ, ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೊಳಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button