
ಪ್ರಗತಿವಾಹಿನಿ ಸುದ್ದಿ, ಶಿರಸಿ – ಇಲ್ಲಿಯ ಹಾರ್ಡೆ ವೇರ್ ಶಾಪ್ ಮಾಲಿಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಸಿ ನಗರದಲ್ಲಿ ಅಪ್ರಾಪ್ತ ಮಕ್ಕಳಿಗೆ ಫೆವಿಕಲ್ ( SR Gum)ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಪಿ ಬಜಾರ್ ದ ಕಿಮಾನೆಕರ್ ಸ್ಟೋರ್ಸ ಹಾರ್ಡವೇರ್ ಶಾಪ್ ನ ಮಾಲಿಕ ರಾಜೇಂದ್ರ ಅನಂತ ಕಾಮತ್ ನನ್ನು ಮಾರುಕಟ್ಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.