Latest

ಬಹಿರ್ದೆಸೆಗೆ ಹೋದಾಗ ದುರಂತ: ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕೆರೆಗೆ ಬಿದ್ದು ಸಾವು

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಅಕ್ಕಿ ಹೆಬ್ಬಾಳು ಬಳಿ ನಡೆದಿದೆ.

ಪಾಂಡಿಚೇರಿಯ ಕ್ರೀಡಾಪಟು ಅಲ್ಹರ್ಶ್ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಬಹಿರ್ದೆಸೆಗೆಂದು ಹೋರಹೋಗಿದ್ದಾಗ ಕೆರೆಗೆ ಜಾರಿಬಿದ್ದು ಕ್ರೀಡಾಪಟು ಮೃತಪಟ್ಟಿದ್ದಾರೆ.

ಅಕ್ಕಿ ಹೆಬ್ಬಾಳು ಬಳಿ ಸೈಕಲ್ ಪೋಲೋ ಕ್ರೀಡಾಕೂಟ ನಡೆಯುತ್ತಿದ್ದು, ಈ ಕ್ರೀಡಾಕೂಟದಲ್ಲಿ ಅಲ್ಹರ್ಶ್ ಪಾಲ್ಗೊಂಡಿದ್ದ. ಆದರೆ ಈಗ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದೇ ದುರಂತಕ್ಕೆ ಕಾರಣ ಎಂದು ಕ್ರೀಡಾ ಆಯೋಜಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ದಿನಗಳ ಕಾಲ ಭಾರಿ ಮಳೆ; ಅಲರ್ಟ್ ಘೋಷಣೆ

Home add -Advt

https://pragati.taskdun.com/latest/karnatakaheavy-rainalert/

Related Articles

Back to top button