Belagavi NewsBelgaum NewsKannada NewsKarnataka News

ಬೆಳಗಾವಿಯಲ್ಲಿ ಭಾರಿ ಮಳೆ: ಅವಾಂತರ ಸೃಷ್ಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದು ಬೆಳಗಾವಿ ಜಿಲ್ಲೆಯಾದ್ಯಂತ ಸತತವಾಗಿ ಎರಡು -ಮೂರು ಗಂಟೆಗಳ ಕಾಲ ಸುರಿದ ಮಳೆ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. 

ಜಿಲ್ಲೆಯಾದ್ಯಂತ ಇಂದು ಸಾಯಂಕಾಲ ಬಿರುಗಾಳಿ ಸಮೇತ ಸುರಿದ ಭಾರಿ ಮೆಳೆಗೆ ಹಲವಾರು ಅವಾಂತರಗಳು ಆಗಿವೆ. ಬೆಳಗಾವಿ ನಗರದಲ್ಲಿ ಅನೇಕ ರಸ್ತೆಗಳ ಮೇಲೆ ನೀರು ತುಂಬಿಕೊಂಡು ಕೆಲ ಕಾಲ ವಾಹನ ಸವಾರರು ಪರದಾಡಿದ್ದಾರೆ. ಸದಾಶಿವ ನಗರದಲ್ಲಿ ರಸ್ತೆ ಮೇಲೆ ಬೃಹತ್‌ ಮರ ಉರುಳಿ, ಆತಂಕ ಸೃಷ್ಟಿಸಿದೆ. ಸವದತ್ತಿ ತಾಲೂಕಿನ ರೈತರೋರ್ವರಿಗೆ ಸೇರಿದ ರಸಗೊಬ್ಬರ ಸಂಗ್ರಹಿಸಿಟ್ಟ ಶೆಡ್ಡು ಗಾಳಿ ರಭಸಕ್ಕೆ ಹಾರಿಹೋಗಿದೆ. ಇದರ ಪರಿಣಾಮ 250 ಚೀಲ ರಸಗೊಬ್ಬರ ಹಾಳಾಗಿದೆ. ಸದ್ಯ ಅಷ್ಟೆಲ್ಲ ಅವಾಂತರಗಳು ಆದರೂ ಯಾರಿಗೂ ಜೀವ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.‌

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button