Latest

ಲೈಂಗಿನ ದೌರ್ಜನ್ಯ ತಡೆಯುವುದು ಹೇಗೆ?

ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ – ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಲೈಂಗಿನ ದೌರ್ಜನ್ಯ ಹಾಗೂ ಕಿರುಕುಳದ ಅರಿವು ಮತ್ತು ತಡೆಗಟ್ಟುವಿಕೆ ಕುರಿತು ಕಾರ‍್ಯಗಾರ ನಡೆಯಿತು.

ಕಾಲೇಜಿನ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯ ವತಿಯಿಂದ ಒಂದು ದಿನದ ಲೈಂಗಿನ ಕಿರುಕುಳದ ಅರಿವು ಮತ್ತು ತಡೆಗಟ್ಟುವಿಕೆ ಕುರಿತು ಕಾರ‍್ಯಗಾರ ಏರ್ಪಡಿಸಲಾಗಿತ್ತು.

ಕಾರ‍್ಯಗಾರವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ, ಹೆಚ್ಚುವರಿ ಪೋಲಿಸ್ ಸೂಪರಿಂಟೆಂಡೆಂಟ್ ಕುಮಾರಸ್ವಾಮಿ, ಸ್ವಾರ್ಥಕ್ಕಾಗಿ ಬದುಕದೇ ಸಮಾಜಕ್ಕಾಗಿ ಬದುಕಿ, ಸಮಾಜದಲ್ಲಿ ನಿಮ್ಮ ಹೆಸರು ಶಾಶ್ವತವಾಗಿ ಉಳಿಯುವಂತಾಗಲಿ. ಈಗಿನ ಆಧುನಿಕ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಆನ್‌ಲೈನ್ ವಂಚನೆಗಳಿಗೆ ಒಳಗಾಗದೇ ಜಾಗೃತರಾಗಿರಿ ಎಂದರು.

ಅನಾಮದೇಯ ವ್ಯಕ್ತಿಗಳು ಕರೆ ಮಾಡಿ ನಿಮ್ಮ ಬ್ಯಾಂಕಿನ ವಿವರ, ಪಿನ್ ನಂಬರ್, ಒಟಿಪಿ, ಆಧಾರ್ ನಂಬರ್, ಪಾನ್ ನಂಬರ್ ಇತ್ಯಾದಿ ವೈಯಕ್ತಿಕ ವಿಷಯಗಳ ಕುರಿತು ವಿಚಾರಿಸಿದಾಗ ಬುದ್ದಿವಂತಿಕೆಯಿಂದ ವ್ಯವಹರಿಸಿ. ನಿಮ್ಮ ಮೊಬೈಲ್ ಪೋನ್‌ಗಳಿಗೆ ಹೊರಗಡೆ ರಿಚಾರ್ಜ್ ಮಾಡಿಸುವ ಸಂದರ್ಭಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಳ್ಳಬೇಡಿ, ಬದಲಾಗಿ ನೀವುಗಳೆ ಪೋನ್ ಪೇ, ಗೂಗಲ್ ಪೇ ನಂತಹ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಸ್ವತಃ ರೀಚಾರ್ಜ್ ಮಾಡಿಕೊಳ್ಳುವುದರಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು ಎಂದು ನುಡಿದರು.

Home add -Advt

ಪೋಲೀಸ್ ಸಬ್‌ಇನ್‌ಸ್ಪೆಕ್ಟರ್  ಯಶೋಧಾ ಮಾತನಾಡಿ, ಮಹಿಳೆಯರು ಸೋಶಿಯಲ್ ಮೀಡಿಯಾಗಳನ್ನು ಬಳಸುವ ಸಂದರ್ಭಗಳಲ್ಲಿ ಜಾಗೃತರಾಗಿರಬೇಕು.  ಟಿಕ್‌ಟಾಕ್, ಡಬ್‌ಮ್ಯಾಷ್ ಇನ್ನು ಮುಂತಾದ ಅಪ್ಲಿಕೇಶನ್‌ಗಳನ್ನು ಬಳಸಿ ವಿಡೀಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಾಗ ಆಗುವ ಅನಾಹುತಗಳಿಗೆ ನಾವೇ ಹೊಣೆಗಾರರಾಗಬೇಕಾಗುತ್ತದೆ ಎಂದರು.

ಇಂದಿನ ಯುವಕರು  ಮೊಬೈಲ್ ಬಳಕೆಯಿಂದ ದೂರವಿದ್ದು ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸದ ಕಡೆ ಹೆಚ್ಚು ಒತ್ತು ಕೊಟ್ಟು ನಾಡಿಗೆ ದೇಶಕ್ಕೆ ಒಳ್ಳೆಯ ಪ್ರಜೆಯಾಗಿ, ತಂದೆತಾಯಿಗಳಿಗೆ ಹೆಮ್ಮೆಯ ಮಕ್ಕಳಾಗಿ ಬದುಕಿ ಎಂದು ನುಡಿದರು. ಇದೇ ಸಂದರ್ಭದಲ್ಲಿ ನಮ್ಮ ದೇಶದ ಕಾನೂನಿನಲ್ಲಿ ಬಳಕೆಯಾಗುವ ವಿವಿಧ ಐ.ಪಿ.ಸಿ ಸೆಕ್ಷನ್‌ಗಳಾದ ೩೫೪ಎ, ೨೯೪, ೩೨೬ಎ, ೩೨೬ಬಿ, ೩೭೫, ೩೭೬, ೩೭೬ಎ ಗಳ ಮಾಹಿತಿಯನ್ನು ಹಂಚಿಕೊಂಡರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ.ಪಿ.ಬಿ.ಭರತ್ ಮಾತನಾಡಿ, ಇಂದಿನ ಯುವಕ-ಯುವತಿಯರು ತಮ್ಮ ತಂದೆತಾಯಿಯಂದಿರು ಕೊಟ್ಟಿರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳದೇ, ತಮ್ಮ ಈ ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಹೆಚ್ಚು ಜವಾಬ್ದಾರಿಯಿಂದ ನಿರ್ವಹಿಸಿ ಯಶಸ್ಸನ್ನು ಕಾಣಬೇಕು. ವಿದ್ಯಾರ್ಥಿಗಳು ಮೊಬೈಲ್   ಪ್ರಪಂಚದಿಂದ ಹೊರಬಂದು ಯೋಗ, ಧ್ಯಾನ ಮುಂತಾದ ಶೈಕ್ಷಣಿಕೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ನಾಗರೀಕರಾಗಿ ಬಾಳಿರಿ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಒನಕೆ ಓಬವ್ವ ಮಹಿಳಾ ಪೋಲಿಸ್ ತಂಡದವರು ವಿದ್ಯಾರ್ಥಿನಿಯರಿಗೆ ಅಪಾಯಗಳನ್ನು ಎದುರಿಸುವುದು ಹಾಗು ಸ್ವಯಂ ರಕ್ಷಣೆಯನ್ನು ಮಾಡಿಕೊಳ್ಳುವಂತಹ ಕೌಶಲ್ಯಗಳನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ತೋರಿಸಿಕೊಟ್ಟರು.

ಕಾರ‍್ಯಕ್ರಮದಲ್ಲಿ ವಿವಿಧ ಇಲಾಖೆಯ ವಿದ್ಯಾರ್ಥಿಗಳು, ಮುಖ್ಯಸ್ಥರುಗಳಾದ  ಪ್ರೊ.ಪೋರಾಳ್ ನಾಗರಾಜ್, ಪ್ರೊ.ಹಾಲಸ್ವಾಮಿ, ಡಾ.ನಿರಂಜನ್, ಬೋಧಕ ಮತ್ತು ಬೋದಕೇತರ ಸಿಬ್ಬಂದಿಯವರು, ಕಾರ‍್ಯಕ್ರಮದ ನಿರ್ವಾಹಕರಾದ  ಪುಷ್ಪಾ ಹಾಗು  ತನುಜಾ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕಾರ್ತಿಕ್ ನಿರೂಪಿಸಿ, ಕವನ ಸ್ವಾಗತಿಸಿ, ಹೇಮಾ ವಂದಿಸಿದರು.

ಅಮಲೇರಿಸುವ ಚಾಕೋಲೇಟ್, ಡ್ರಗ್ಸ್ ಜಾಲದಲ್ಲಿ ಹೊಸ ವರಸೆ, ಜನಸಾಮಾನ್ಯರಿಗೆ ನಡುಕ ಹುಟ್ಟಿಸಿದ ಪ್ರಕರಣ

Related Articles

Back to top button