Belagavi NewsBelgaum NewsEducationKannada NewsKarnataka News

*ಬೆಳಗಾವಿಯಲ್ಲಿ ನೀಷೇದಾಜ್ಞೆ ಜಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾರ್ಚ್/ಎಪ್ರಿಲ್-2026 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಜರುಗಿದ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳ ಸುತ್ತಲು ಪೋಲಿಸ್ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿರುತ್ತಾರೆ.

2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರಿಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಬೆಳಗಾವಿ ನಗರದ 8 ಕೇಂದ್ರಗಳಲ್ಲಿ ನಡೆಯಲಿರುವ ಕಾರಣ ಏ.4 ರಂದು ಗೌಪ್ಯ ಸಾಮಗ್ರಿಗಳು ಪೂರೈಕರಯಾಗುತ್ತಿರುವುದರಿಂದ ದಿನಾಂಕ: ಏ.5 ರಿಂದ ಮೌಲ್ಯಮಾಪನ ಪ್ರಕ್ರಿಯೆಗಳು ಏಕಕಾಲದಲ್ಲಿ ಪ್ರಾರಂಭವಾಗುತ್ತಿದ್ದು, ಸದರಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗುವವರೆಗೆ ಮೌಲ್ಯಮಾಪನ ಕೇಂದ್ರಗಳ ಸುತ್ತಲೂ ನಿಷೇದಾಜ್ಞೆ ಆದೇಶವನ್ನು ಹೊರಡಿಸಲಾಗಿದೆ.

ಪರೀಕ್ಷಾ ಕೇಂದ್ರದ ಹೆಸರು: ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ, ಪ್ರೌಢ ಶಾಲೆ, ಬೆಳಗಾವಿ, ಸೇಂಟ್ ಪೌಲ್ ಆಂಗ್ಲ ಮಾಧ್ಯಮ, ಪ್ರೌಢ ಶಾಲೆ, ಬೆಳಗಾವಿ,ಶ್ರೀಮತಿ ಉಷಾತಾಯಿ ಗೋಗಟೆ ಆಂಗ್ಲ ಮಾಧ್ಯಮ, ಪ್ರೌಢ ಶಾಲೆ, ಪಾಟೀಲ ಗಲ್ಲಿ, ಬೆಳಗಾವಿ,ಸೇಂಟ್ ಝೇವಿಯರ್ಸ, ಆಂಗ್ಲ ಮಾಧ್ಯಮ, ಪ್ರೌಢ ಶಾಲೆ, ಕ್ಯಾಂಪ, ಬೆಳಗಾವಿ,ಶ್ರೀ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲೆ ವಿಭಾಗ) ಶಿವಬಸವ ನಗರ ಬೆಳಗಾವಿ,ಕನ್ನಡ ಮಾಧ್ಯಮಿಕ ಶಾಲೆ ಪ್ರೌಢ ಶಾಲೆ, ಮಹಾಂತೇಶ ನಗರ, ಬೆಳಗಾವಿ.ಮಹಿಳಾ ವಿದ್ಯಾಲಯ ಮರಾಠಿ ಪ್ರೌಢ ಶಾಲೆ, ಕಾಲೇಜು ರಸ್ತೆ, ಬೆಳಗಾವಿ.ಸೇಂಟ್ ಆಂಥೋನಿ ಪ್ರೌಢ ಶಾಲೆ ಫಿಶ್ ಮಾರ್ಕೆಟ್ ಎದುರು ಕ್ಯಾಂಪ್ ಸಾಲೆಗಳ ಸುತ್ತಲು ನೀಷೇದಾಜ್ಞೆ ಹೊರಡಿಸಲಾಗಿದೆ.

Home add -Advt

Related Articles

Back to top button