Kannada NewsKarnataka NewsUncategorized

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದಗಡು ಚೆಂಡಕೆ ಸಹಿತ ನೂರಾರು ಜನರು ಬಿಜೆಪಿ ಸೇರ್ಪಡೆ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ತಾಲೂಕಿನ ನಾಗನೂರ ಗ್ರಾಮದಲ್ಲಿ ಮಾಜಿ ತಾಲೂಕಾ ಪಂಚಾಯಿತಿ ಸದಸ್ಯ ದಗಡು ಚೆಂಡಕೆ, ದಯಾನಂದ ದಾದಾ ಯುವಾ ಮಂಚ ಅಧ್ಯಕ್ಷ ದಯಾನಂದ ಕೋಗಲೆ, ವಿನೋದ ಚೌಗುಲೆ, ಮೊದಲಾದವರು ಸಹಿತ ಇತರ ಪಕ್ಷದ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಅವರನ್ನು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಮಾತನಾಡಿ ’ಕ್ಷೇತ್ರದಲ್ಲಿ ರೈತರ ಹಾಗೂ ಸರ್ವಸಾಮಾನ್ಯ ಕಳಕಳಿವುಳ್ಳ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಬಂದ್ ಆಗುವ ಸ್ಥಿತಿಯಲ್ಲಿದ್ದ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಿ ಕಾರ್ಮಿಕರ ಬಾಳಲ್ಲಿ ನಗೆ ಬೀರಿಸಿದ್ದಾರೆ. ಪರಿಣಾಮವಾಗಿ ಎಲ್ಲರೂ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ’ ಎಂದರು.
ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ’ಸರ್ವಸಾಮಾನ್ಯರಿಗೆ ಸನ್ಮಾನಿಸುವ ಬಿಜೆಪಿ ಏಕಮೇವ ಪಕ್ಷವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು, ಕ್ಷೇತ್ರದಲ್ಲಿ ಅವುಗಳ ಅನುಷ್ಠಾನ, ಇವೆಲ್ಲವುಗಳನ್ನು ಮನಗಂಡು ಇತರ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಹ್ಯಾಟ್ರಿಕ್ ಸಹಿತ ಮತ್ತೊಮ್ಮೆ ಗೆಲುವು ಸಾಧಿಸಿ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿ’ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾರ್ಖಾನೆಯ ವೈಸ್-ಚೇರ್ಮನ್ ಮಲಗೊಂಡಾ ಪಾಟೀಲ, ಸಂಚಾಲಕ ಪಪ್ಪು ಪಾಟೀಲ, ಅವಿನಾಶ ಪಾಟೀಲ, ಪ್ರೊ. ಸ್ಮೀತಾ ಪಾಟೀಲ, ಕೀರ್ತಿ ಪಾಟೀಲ, ಅಮೋಲ ಚೆಂಡಕೆ, ಪ್ರಕಾಶ ಶಿಂಧೆ, ಸಾಗರ ತೋಡಕರ, ರಾಜಶ್ರೀ ಪವಾರ, ಸುನೀತಾ ಪಾಟೀಲ, ಸವಿತಾ ಪವಾರ, ಮೊದಲಾದವರು ಉಪಸ್ಥಿತರಿದ್ದರು.

https://pragati.taskdun.com/i-have-brought-more-than-2-thousand-crores-of-grant-sasikala-jolle/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button