Kannada NewsKarnataka News
ಪ್ರತಿಭೆ, ಸಾಧನೆಗೆ ಬಡತನ ಅಡ್ಡಿಯಾಗಬಾರದು ಎಂದು ಹಲವು ಯೋಜನೆ ರೂಪಿಸಿದ್ದೇನೆ – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಕ್ಕಳ ಪ್ರತಿಭೆಗೆ, ಜೀವನದಲ್ಲಿ ಅತ್ಯುನ್ನತ ಸಾಧನೆ ಮಾಡಲು ಬಡತನ ಅಡ್ಡಿಯಾಗಬಾರದೆನ್ನುವ ಕಾರಣದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ ಎಂದು ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಜಿಮ್ ಹಾಗೂ ಕ್ರೀಡಾ ಉಪಕರಣಗಳನ್ನು ವಿತರಿಸಲಾಗುತ್ತಿದೆ. ವಯಕ್ತಿಕಾಗಿ ಹಲವಾರು ಪ್ರತಿಭೆಗಳಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಯಾರೊಬ್ಬರೂ ತಮ್ಮ ಸಾಧನೆಯಲ್ಲಿ ಹಿಂದುಳಿಯಲು ಅವಕಾಶ ಕೊಡುವುದಿಲ್ಲ. ನಿಮ್ಮ ಜೊತೆಗೆ ಸದಾ ನಾನಿದ್ದೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಪಾಲಕರು ಎಷ್ಟು ಕಷ್ಟಪಟ್ಟು ಮಕ್ಕಳನ್ನು ಬೆಳೆಸುತ್ತಾರೆ, ಓದಿಸುತ್ತಾರೆ ಎನ್ನುವುದು ನನಗೆ ಗೊತ್ತಿದೆ. ನಿಮ್ಮ ಕಷ್ಟದಲ್ಲಿ ನಾನಿಲ್ಲದಿದ್ದರೆ ನಾನು ಶಾಸಕಿಯಾಗಿ ಏನು ಪ್ರಯೋಜನ? ನಿಮ್ಮ ಮಕ್ಕಳು ಬೇರೆ ಅಲ್ಲ, ನನ್ನ ಮಕ್ಕಳು ಬೇರೆ ಅಲ್ಲ. ಹಾಗಾಗಿ ಎಂತಹ ಸಂದರ್ಭ ಬಂದರೂ ಮಕ್ಕಳ ಓದನ್ನು ನಿಲ್ಲಿಸುವುದು ಬೇಡ. ಮಕ್ಕಳ ಓದಿಗೆ ನೆರವು ಕೇಳಲು ಮುಜುಗರ ಬೇಡ. ಅಂತಹ ಪರಿಸ್ಥಿತಿ ಬಂದರೆ ಎಲ್ಲರೂ ಸೇರಿ ಅದಕ್ಕೊಂದು ಪರಿಹಾರ ಕಂಡುಕೊಳ್ಳೋಣ. ದೇವರು ಯಾವುದಾದರೊಂದು ದಾರಿಯನ್ನು ತೋರಿಸುತ್ತಾನೆ ಎಂದ ಹೆಬ್ಬಾಳಕರ್, ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಈ ನಿಮ್ಮ ಮನೆಯ ಮಗಳ ಮೇಲಿರಲಿ ಎಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮೃಣಾಲ ಹೆಬ್ಬಾಳಕರ್, ಅರ್ಚನಾ ಚಿಗರೆ, ಸಾತೇರಿ ಕಮತಿ, ಶಿಲ್ಪಾ ಕಮತಿ, ಮಾರುತಿ ಹುರಕಡ್ಲಿ, ಪ್ರಶಾಂತ ಶಹಾಪೂರಕರ್, ಶ್ಯಾಮ್ ಪಾಟೀಲ, ಸುರೇಶ ಹುಂಬರವಾಡಿ, ಧಾನಾಜಿ ಗೊಲ್ಯಾಳ್ಕರ್ ಹನಮಂತ ಹಕಲ್ದಾರ್, ಸುಜಾತಾ, ಸುರೇಶ ಹುಂಬರವಾಡಿ, ರಾಜಾರಾಮ್ ಗೊಲ್ಯಾಳ್ಕರ್, ಭರ್ಮಾ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.
https://pragati.taskdun.com/here-is-the-complete-details-of-prime-minister-narendra-modis-belgaum-program/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ