Kannada NewsKarnataka NewsLatest

*ವಿತ್ತೀಯ ಶಿಸ್ತು ಉಲ್ಲಂಘಿಸಿದ್ದು ಬಿಜೆಪಿ ಸರಕಾರ, ನಾವಲ್ಲ: ಸಿದ್ದರಾಮಯ್ಯ*

ಬಜೆಟ್ ಮೇಲಿನ ಚರ್ಚೆಗಳಿಗೆ ಸದನದಲ್ಲಿ ಮುಖ್ಯಮಂತ್ರಿಗಳ ಉತ್ತರ

1.​ಬಜೆಟ್ ಮೇಲಿನ ವಿರೋಧ ಪಕ್ಷದವರ ಮಾತುಗಳನ್ನು ಕೇಳಿದ್ದೇನೆ ಮತ್ತು ಓದಿದ್ದೇನೆ. ಅನೇಕರು ಬಜೆಟ್ಟನ್ನು ಅಧ್ಯಯನ ಮಾಡಲು ಪ್ರಯತ್ನಿಸಿದ್ದಾರೆ. ಒಳ್ಳೆಯ ಪ್ರಯತ್ನ ಮಾಡಿದ್ದಾರೆ, ಅವರೆಲ್ಲರನ್ನೂ ಅಭಿನಂದಿಸುತ್ತೇನೆ.

2.​ಸದನದಲ್ಲಿ ನಾನು ಗಮನಿಸಿದ ಹಾಗೆ 4-5 ವಿಚಾರಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಚರ್ಚಿಸಲಾಗಿದೆ. ಮುಖ್ಯವಾಗಿ, 1) ರಾಜ್ಯದ ಸಾಲ ಹಾಗೂ ಆರ್ಥಿಕ ಪರಿಸ್ಥಿತಿ 2) ಗ್ಯಾರಂಟಿ ಯೋಜನೆಗಳು 3) ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ವಿಚಾರ 4) ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ 5) ಕ್ಷೇತ್ರಗಳಿಗೆ ಅಭಿವೃದ್ಧಿ ಅನುದಾನ ಹಾಗೂ ಪ್ರದೇಶವಾರು ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗಿದೆ. ನಾನು ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ಕೊಡುವಾಗ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನಗಳು, ಗ್ಯಾರಂಟಿ ಯೋಜನೆಗಳು ಮುಂತಾದ ವಿಚಾರಗಳ ಕುರಿತು ದೀರ್ಘವಾಗಿ ಉತ್ತರ ಕೊಟ್ಟಿದ್ದೇನೆ. ಹಾಗಾಗಿ ಅವುಗಳಿಗೆ ಕಡಿಮೆ ಸಮಯ ಮೀಸಲಿಟ್ಟು ಉಳಿದ ವಿಚಾರಗಳಿಗೆ ತುಸು ಹೆಚ್ಚು ಸಮಯ ಕೊಟ್ಟು ಇಂದು ಉತ್ತರ ನೀಡಲಿದ್ದೇನೆ.

3.​ನಮ್ಮ ಬಜೆಟ್ ಬಗ್ಗೆ ವಿರೋಧ ಪಕ್ಷದವರು ಏನಂದರು? ಆಡಳಿತ ಪಕ್ಷದವರು ಏನಂದರು ಹಾಗೂ ಉಳಿದೆಲ್ಲ ಜನಪ್ರತಿನಿಧಿಗಳ ಪ್ರತಿಕ್ರಿಯೆ ಹೇಗಿತ್ತು ಎನ್ನುವುದು ಒಂದು ಆಯಾಮ. ಅದಕ್ಕೆ ಈ ಸದನ ಸಾಕ್ಷಿಯಾಗಿದೆ. ಸದನದ ದಾಖಲೆಗಳಲ್ಲಿದೆ.

Home add -Advt

4.​ ಎರಡನೆಯದಾಗಿ ನಮ್ಮ ಬಜೆಟ್ಟನ್ನು ಈ ಬಾರಿ ಮಾಧ್ಯಮಗಳು ಅಭೂತಪೂರ್ವವಾಗಿ ಸ್ವಾಗತಿಸಿವೆ. ಶ್ಲಾಘನೆ ಮಾಡಿವೆ. ವಿಶ್ಲೇಷಣೆಗಳನ್ನು ಬರೆದಿವೆ. ನಮ್ಮ ಬಜೆಟ್ಟನ್ನು ಅರ್ಥ ಮಾಡಿಕೊಂಡು ಜನರಿಗೆ ತಲುಪಿಸಿದ್ದಕ್ಕಾಗಿ ಮಾಧ್ಯಮಗಳನ್ನು ಅಭಿನಂದಿಸುತ್ತೇನೆ.

5.​ನಮ್ಮಿಬ್ಬರನ್ನು ಹೊರತುಪಡಿಸಿ ನಾಡಿನ ವಿವಿಧ ವಲಯಗಳ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನೂ ಗಮನಿಸಬೇಕಾಗಿದೆ. ಕೆಲವು ಉದಾಹರಣೆಗಳನ್ನು ನೀಡಬಯಸುತ್ತೇನೆ. ಹಾಗೆ ಮಾಡಬೇಕಾದದ್ದು ನನ್ನ ಕರ್ತವ್ಯ.

1)​ಎಫ್‌ಕೆಸಿಸಿಐ- ಫಿಕ್ಕಿಯ [ಫೆಡರೇಷನ್ ಆಫ್ ಕರ್ನಾಟಕ ಛೇಂರ‍್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟಿç- ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ] ಇದನ್ನು ಫಿಕ್ಕಿ ಎಂದು ಕರೆಯುತ್ತೇವೆ. ಎಫ್.ಕೆ.ಸಿ.ಸಿ.ಐ.ನ ಅಧ್ಯಕ್ಷರಾದ ಎಂ.ಜಿ. ಬಾಲಕೃಷ್ಣ ಇವರು “ಪ್ರಗತಿಗೆ ಪ್ರಾಯೋಗಿಕ ನೀಲನಕ್ಷೆ, ಇದು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಬಜೆಟ್” ಎಂದಿದ್ದಾರೆ.

2)​ಸಿ.ಐ.ಐ. [ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟಿç] ಕರ್ನಾಟಕದ ಅಧ್ಯಕ್ಷರಾದ ಎನ್. ವೇಣು ಇವರು “ಇಂಧನ-ಸುರಕ್ಷಿತ ಭವಿಷ್ಯದತ್ತ ನಿರ್ಣಾಯಕ ಹೆಜ್ಜೆ ಇಡುವ ಜೊತೆಗೆ, ಆರ್ಥಿಕ ವಿಸ್ತರಣೆಯ ಸುಸ್ಥಿರತೆಗೆ ಆದ್ಯತೆ ನೀಡುತ್ತದೆ” ಎಂದಿದ್ದಾರೆ.
3)​ಚಿಕ್ಕಮಗಳೂರಿನ ಅಡಿಕೆ ಬೆಳೆಗಾರ ಶರಣು ಎಂಬುವವರು “ಮಲೆನಾಡು ಭಾಗದ ಅಡಿಕೆಗೆ ತಗುಲಿರುವ ರೋಗ ನಿಯಂತ್ರಿಸಲು 62 ಕೋಟಿ ರೂ. ಇಟ್ಟಿರುವುದು ಸಮಾಧಾನಕರ” ಎಂದಿದ್ದಾರೆ.

4)​ವನ್ಯಜೀವಿ ತಜ್ಞರಾದ ಸಂಜಯ್ ಗುಬ್ಬಿ ಇವರು “ಮಾನವ ವನ್ಯಜೀವಿ ಸಂಘರ್ಷಕ್ಕೆ ಹೆಚ್ಚು ಆರ್ಥಿಕ ಒತ್ತು ಕೊಟ್ಟಿರುವುದು ಉತ್ತಮ ವಿಚಾರ” ಎಂದಿದ್ದಾರೆ.

5)​ಅರ್ಚಕರ ಸಂಘದ ಕೆ.ಎಸ್.ಎನ್.ದೀಕ್ಷಿತ್ ಇವರು “ಅರ್ಚಕರಿಗೆ ಸಂತಸ ತಂದ ಬಜೆಟ್” ಎಂದಿದ್ದಾರೆ.

6)​ವ್ಯಾಪಾರಿ ಸಂಘದ ಮುಖಂಡ ಇ.ಸಿ.ರಂಗಸ್ವಾಮಿ ಇವರು “ಬೀದಿ ಬದಿ ವ್ಯಾಪಾರಿಗಳಿಗೆ ನೆಮ್ಮದಿಯ ಬಜೆಟ್” ಎಂದಿದ್ದಾರೆ.

7)​ಚಲನಚಿತ್ರ ನಟರಾದ ಶರಣ್ ಅವರು “ಈ ಬಾರಿಯ ಬಜೆಟ್ ಸಿನಿಮಾರಂಗಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಗಮನಿಸಿದರೆ ಬಹಳ ಖುಷಿ” ಎಂದಿದ್ದಾರೆ.

8)​ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಕಾರ್ಯದರ್ಶಿ ದೀಪ್ತಿ ಬಿ., ಅವರು “ಕ್ವಾಂಟಮ್ ಕಂಪ್ಯೂಟರ್, ಎ.ಐ. ನಂತಹ ಬೆಳವಣಿಗೆಯ ಕ್ಷೇತ್ರದ ಕುರಿತು ಬಜೆಟ್‌ನಲ್ಲಿ ಉಲ್ಲೇಖಿಸಿರುವುದು ಸ್ಥಳೀಯ ಆರ್ಥಿಕ ಆಕ್ಸಿಲರೇಟರ್(ಲೀಪ್) ಕುರಿತು ಘೋಷಣೆ ಮಾಡಿರುವುದು ಉತ್ತಮ ಹೆಜ್ಜೆ. ಇದರಿಂದ ಐ.ಟಿ. ಕ್ಷೇತ್ರ ಬೆಂಗಳೂರಿನ ಆಚೆ ಬೆಳೆಯಲು ಅನುಕೂಲವಾಗುತ್ತದೆ ಹಾಗೂ ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಆಗುತ್ತದೆ” ಎಂದಿದ್ದಾರೆ.

9)​ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಆರ್. ಕೇಶವ್ ಇವರು “ಇದು ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕದ ಎಲ್ಲ ವರ್ಗಗಳ ಅಭಿವೃದ್ಧಿಗೆ ಆದ್ಯತೆ ಸಿಕ್ಕಿದಂತಾಗಿದೆ”. ಎಂದಿದ್ದಾರೆ.

10)​ಕಾವೇರಿ ಆಸ್ಪತ್ರೆ ಸಮೂಹದ ಕಾರ್ಯಕಾರಿ ನಿರ್ದೇಶಕರಾದ ಎಸ್. ವಿಜಯಭಾಸ್ಕರನ್ ಅವರು “ಆರೋಗ್ಯ ಕ್ಷೇತ್ರದ ಅಭಿವೃದ್ದಿಗೆ ಉತ್ತೇಜನ” ಎಂದಿದ್ದಾರೆ.

11)​ತುಮಕೂರು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಜ್ಯೋತಿ ಇವರು “ಮಹಿಳಾ ಆರ್ಥಿಕ ಸ್ವಾತಂತ್ರಕ್ಕೆ ಪೂರಕ ಬಜೆಟ್” ಎಂದಿದ್ದಾರೆ.

12)​ಗದಗ ಜಿಲ್ಲೆಯ ಸುಮಾ ಎಸ್. ಚೋಟಗಲ್ ಇವರು “ಈ ಬಜೆಟ್ ಮಹಿಳೆಯರಿಗೆ ಆದ್ಯತೆ ನೀಡಿದೆ” ಎಂದಿದ್ದಾರೆ.
13)​ಹಲವು ನಾಡಿನ ಪ್ರಮುಖ ದಿನಪತ್ರಿಕೆಗಳು ಸಂಪಾದಕೀಯಗಳನ್ನು ಬರೆದಿವೆ. ಪ್ರಜಾವಾಣಿ ಪತ್ರಿಕೆಯು “ಬಂಡವಾಳ ವೆಚ್ಚಕ್ಕೆ ಗಣನೀಯ ಮೊತ್ತ ; ಮೂಲಸೌಕರ್ಯಕ್ಕೆ ಸಿಕ್ಕಿದೆ ಆದ್ಯತೆ” ಎಂದಿದೆ. ವಿಜಯ ಕರ್ನಾಟಕ ಪತ್ರಿಕೆಯವರು “ಸಾಮಾಜಿಕ ನ್ಯಾಯಕ್ಕೆ ಮಣೆ” ಎಂದಿದ್ದಾರೆ.

6.​ನಾಡಿನ ವಿವಿಧ ವಲಯಗಳ ಜನರು ನಮ್ಮ ಬಜೆಟ್ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯಗಳು ನಮಗೆ ಇನ್ನಷ್ಟು ಶಕ್ತಿ ತುಂಬಲಿವೆ.

7.​ಈ ಸಂದರ್ಭದಲ್ಲಿ ನಮ್ಮ ಬಜೆಟ್ಟನ್ನು ಶ್ಲಾಘಿಸಿದ ಎಲ್ಲ ತಜ್ಞರು ಹಾಗೂ ಇತರ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೆಯೇ, ಇಷ್ಟೊಂದು ಪ್ರಮಾಣದ ತೆರಿಗೆಯನ್ನು ಪಾವತಿಸುತ್ತಿರುವ ನಾಡಿನ ಜನರಿಗೂ ಕೂಡ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

8.​ಇಂತಹ ಬಜೆಟ್ಟನ್ನು ರೂಪಿಸಲು ನಾಡಿನ ವಿವಿಧ ಸಂಘ ಸಂಸ್ಥೆಗಳ ಬಂದು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿಡುತ್ತಾರೆ. ಹಾಗಾಗಿ ಆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ.

9.​ನಾನು ಯಾಕೆ ವಿವಿಧ ಕ್ಷೇತ್ರಗಳ ತಜ್ಞರ ಮಾತುಗಳನ್ನು ಉಲ್ಲೇಖಿಸಿದೆ ಅಂದರೆ, ವಿರೋಧ ಪಕ್ಷಗಳ ಬಹುಪಾಲು ಟೀಕೆಗಳಿಗೆ ಈ ತಜ್ಞರ ಅಭಿಪ್ರಾಯಗಳೆ ಉತ್ತರ.

10.​ನಾನು ಪದೆ ಪದೇ ಹೇಳುವಂತೆ “ನಾವು ಜನರ ತೆರಿಗೆ ಹಣಕ್ಕೆ ಟ್ರಸ್ಟಿಗಳೆ ಹೊರತು, ಮಾಲೀಕರಲ್ಲ.” ನಾವು ಜನರ ತೆರಿಗೆ ಹಣವನ್ನು ನ್ಯಾಯಯುತ ರೀತಿಯಲ್ಲಿ ನಾಡಿನ ಅಭಿವೃದ್ಧಿಗೆ ವಿನಿಯೋಗಿಸಲು ಬದ್ಧವಾಗಿದ್ದೇವೆ.

11.​ಬಲಿಷ್ಠವಾದವು ಮಾತ್ರ ಬದುಕುತ್ತವೆ [Suಡಿvivಚಿಟ oಜಿ ಣhe ಜಿiಣಣesಣ] ಎನ್ನುವುದು ಡಾರ್ವಿನ್ ಸಿದ್ಧಾಂತ. ಅದಕ್ಕೆ ವಿರುದ್ಧವಾಗಿ ಸಂವಿಧಾನವು ಅಸಹಾಯಕರಿಗೆ, ದುರ್ಬಲ ವರ್ಗಗಳಿಗೆ ಶಕ್ತಿ ತುಂಬಿ, ಸಮಾಜವನ್ನು ಸಮಗ್ರ ರೀತಿಯಲ್ಲಿ ಹಾಗೂ ಮಾನವೀಯ ನೆಲೆಯಲ್ಲಿ ಮುನ್ನಡೆಸಬೇಕು ಎನ್ನುವ ಕಾಳಜಿಯಿಂದ ನಾವು ಈ ಬಜೆಟ್ಟನ್ನು ರೂಪಿಸಿದ್ದೇವೆ. ಹಾಗಾಗಿಯೇ, ನಾಡಿನÀ ವಿದ್ವಾಂಸರು, ಪರಿಣಿತರು, ಸಾಮಾನ್ಯ ಜನರು, ಮಾಧ್ಯಮಗಳು ನಮ್ಮ ಬಜೆಟ್ ಕುರಿತು ವ್ಯಾಪಕ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಆಯವ್ಯಯ ಗಾತ್ರದ ಹೆಚ್ಚಳ

12.​2025-26ನೇ ಸಾಲಿನಲ್ಲಿ 4,09,549 ಕೋಟಿ ರೂ. ಗಾತ್ರದ ಬಜೆಟ್ಟನ್ನು ನಾನು ಮಂಡಿಸಿದ್ದೇನೆ. 2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ನಮ್ಮ ರಾಜ್ಯದ ಬಜೆಟ್ ಗಾತ್ರ ಶೇ.10.3 ರಷ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ಜನಸಂಖ್ಯೆಯ ಗಾತ್ರದಲ್ಲಿ ಕರ್ನಾಟಕವು 8ನೇ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹಿಸಿಕೊಡುವ ವಿಚಾರದಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಜಿಎಸ್‌ಡಿಪಿಯಲ್ಲಿ ಕರ್ನಾಟಕವು ಮಹಾರಾಷ್ಟç, ತಮಿಳುನಾಡಿನ ನಂತರ 3ನೇ ಸ್ಥಾನದಲ್ಲಿದೆ. ಆದರೆ, 2025-26ನೇ ಸಾಲಿನ ನಮ್ಮ ಬಜೆಟ್ ಉತ್ತರ ಪ್ರದೇಶ, ಮಹಾರಾಷ್ಟç, ರಾಜಸ್ಥಾನ, ತಮಿಳುನಾಡಿನ ನಂತರ 5ನೇ ದೊಡ್ಡ ಬಜೆಟ್ ಆಗಿದೆ.

13.​ಇದೇ ಸಂದರ್ಭದಲ್ಲಿ, 2025-26ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರೂ. 2024-25 ರಲ್ಲಿ 48.21 ಲಕ್ಷ ಕೋಟಿ ರೂ.ಗಳಷ್ಟಿತ್ತು. ಕೇಂದ್ರದ ಬಜೆಟ್ ಬೆಳವಣಿಗೆ ಶೇ. 5.06 ರಷ್ಟು ಮಾತ್ರ. ಇದರಲ್ಲಿ ಹಣದುಬ್ಬರವನ್ನು ಕಳೆದರೆ, ಕೇಂದ್ರದ ಬಜೆಟ್ಟಿನ ಗಾತ್ರ ನಕಾರಾತ್ಮಕವಾಗುತ್ತದೆ.

14.​ಅರವಿಂದ್ ಬೆಲ್ಲದ್ ಅವರು ಸೇರಿದಂತೆ ವಿರೋಧ ಪಕ್ಷಗಳವರು ತೆರಿಗೆ ಸಂಗ್ರಹ ಕಡಿಮೆಯಾಗಿದೆ, ಆಯವ್ಯಯದಲ್ಲಿ ಅಂದಾಜು ಮಾಡಿದ ತೆರಿಗೆ ಸಂಗ್ರಹಣೆ ಗುರಿಯನ್ನು ತಲುಪಿಲ್ಲ ಎಂದು ಪ್ರಸ್ತಾಪಿಸಿದ್ದಾರೆ. 2024-25 ರಲ್ಲಿ 1,89,893 ಕೋಟಿ ರೂ.ಗಳಷ್ಟು ರಾಜ್ಯದ ಸ್ವಂತ ತೆರಿಗೆ ಸಂಗ್ರಹವಾಗಬಹುದೆಂದು ಅಂದಾಜು ಮಾಡಲಾಗಿತ್ತು. ಫೆಬ್ರವರಿ ಅಂತ್ಯದವರೆಗೆ 1,57,111 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದ್ದು, ಶೇ. 82.7 ರಷ್ಟಾಗಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ಸುಮಾರು 1,77,000 ಕೋಟಿ ರೂ.ಗಳಷ್ಟು ಸಂಗ್ರಹವಾಗಬಹುದು. ಇದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ತುಸು ಕಡಿಮೆ. ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲಿಯೂ ಸಂಭವಿಸುತ್ತಿದೆ. ಕರ್ನಾಟಕವು ದೇಶದ ಒಂದು ಭಾಗ. ದೇಶದಲ್ಲಿ ನಡೆಯುವ ಬೆಳವಣಿಗೆಗಳು ರಾಜ್ಯದ ಮೇಲೂ ಪರಿಣಾಮ ಬೀರುತ್ತವೆ. ಇದು ದೇಶದ ಆರ್ಥಿಕ ಬೆಳವಣಿಗೆಯು ಸಮರ್ಪಕವಾಗಿಲ್ಲ ಎಂಬುದನ್ನು ತೋರಿಸುತ್ತದೆ.

15.​ ತಮಗೆಲ್ಲರಿಗೂ ತಿಳಿದಿರಲಿ, ನಾನು ಮೊದಲೆ ಹೇಳಿದ ಹಾಗೆ 2024-25 ರಲ್ಲಿ ಮೋದಿ ಸರ್ಕಾರವು 48.21 ಲಕ್ಷ ಕೋಟಿ ರೂ. ಗಳ ಬಜೆಟ್ ಮಂಡಿಸಿತ್ತು. ಆದರೆ, ಪರಿಷ್ಕೃತ ಅಂದಾಜುಗಳ ಪ್ರಕಾರ, 1.05 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹಣೆ ಕಡಿಮೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ. ಹಾಗಾಗಿ 2024-25 ರ ಬಜೆಟ್ಟನ್ನು 47.16 ಲಕ್ಷ ಕೋಟಿ ರೂ.ಗೆ ಪರಿಷ್ಕರಣೆ ಮಾಡಿದೆ.

16.​ರಾಜ್ಯವು ಅಭಿವೃದ್ಧಿ ಹೊಂದುತ್ತಿದೆ. 2022-23 ರಲ್ಲಿ 2,65,720 ಕೋಟಿ ರೂ.ಗಳಷ್ಟಿದ್ದ ಆಯವ್ಯಯ ಗಾತ್ರ 2025-26ನೇ ಸಾಲಿಗೆ 4,09,549 ಕೋಟಿ ರೂ. ಗಳಿಗೆ ಏರಿಕೆ ಆಗುತ್ತದೆ. ವ್ಯತ್ಯಾಸ 2022-23ಕ್ಕೆ ಹೋಲಿಸಿದರೆ 1,43,829 ಕೋಟಿ ರೂ.ಗಳಷ್ಟಾಗುತ್ತದೆ. ನಮ್ಮ ಆಯವ್ಯಯ ಗಾತ್ರ ಶೇ.54.12 ರಷ್ಟು ಹೆಚ್ಚಾಗಿದೆ.

17.​ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯಪಾಲರ ಭಾಷಣದ ಮೇಲೆ ನಾನು ವಿವರವಾಗಿ ಮಾತನಾಡಿದ್ದೇನೆ. ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂ.ಗಳನ್ನು ನಾನು ಒದಗಿಸಿದ್ದೇನೆ. ನಾನು ಮೊದಲೆ ಹೇಳಿದ ಹಾಗೆ ನಮ್ಮ ಸರ್ಕಾರ ಜನರ ಕಲ್ಯಾಣವನ್ನು ಹಾಗೂ ರಾಜ್ಯದ ಅಭಿವೃದ್ಧಿಯನ್ನು ಏಕಕಾಲದಲ್ಲಿ ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಕುರಿತ ಜಗತ್ತಿನ ವ್ಯಾಖ್ಯಾನಗಳು ಬದಲಾಗುತ್ತಿವೆ. ಜನರ ಕೊಳ್ಳುವ ಶಕ್ತಿ ಹೆಚ್ಚಾದರೆ, ಆರ್ಥಿಕತೆಯ ಪ್ರಗತಿ ವೇಗವಾಗುತ್ತದೆ. ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲದಿದ್ದರೆÁ ಆರ್ಥಿಕತೆ ಅಂಗವಿಕಲವಾಗುತ್ತದೆ. ಇದೇ ಗುಜರಾತಿನ ಮಾದರಿಗೂ ಕರ್ನಾಟಕದ ಮಾದರಿಗೂ ಇರುವ ವ್ಯತ್ಯಾಸ.
ವಿತ್ತೀಯ ಶಿಸ್ತು
18.​ ವಿತ್ತೀಯ ಕೊರತೆಯು ಜಿ.ಎಸ್.ಡಿ.ಪಿ.ಯ ಶೇ.3 ರಷ್ಟನ್ನು ಮೀರಬಾರದು ಎಂದಿದೆ. ಅದರಂತೆ ನಮ್ಮ ವಿತ್ತೀಯ ಕೊರತೆಯು ಶೇ.2.95 ರಷ್ಟಿದೆ. ಹಾಗೆಯೇ ಜಿ.ಎಸ್.ಡಿ.ಪಿ ಗೆ ಎದುರಾಗಿ ನಮ್ಮ ಹೊಣೆಗಾರಿಕೆಗಳು ಶೇ.25 ರಷ್ಟನ್ನು ಮೀರಬÁರದು ಎಂದಿದೆ. 2025-26ರ ಹೊಣೆಗಾರಿಕೆ ಶೇ.24.91 ರಷ್ಟಾಗುತ್ತದೆ.

19.​ಕರ್ನಾಟಕವು 2021-22 ರಲ್ಲಿ ಶೇ.26.71 ರಷ್ಟು ಹೊಣೆಗಾರಿಕೆಯನ್ನು ಹೊಂದಿತ್ತು. 2021-22 ರಲ್ಲಿ ವಿತ್ತೀಯ ಕೊರತೆ ಶೇ. 3.03 ರಷ್ಟಿತ್ತು.

20.​ನಮ್ಮ ಸರ್ಕಾರ ಗ್ಯಾರಂಟಿ ಯೋಜನೆÀಗಳಿಗೆ 51 ಸಾವಿರ ಕೋಟಿ ಸೇರಿದಂತೆ ಇತರೆ ಎಲ್ಲಾ ಕಲ್ಯಾಣ ಯೋಜನೆಗಳಿಗೆ ಹಾಗೂ ಸಹಾಯಧನಗಳಿಗೆ ಸರಿ ಸುಮಾರು 1 ಲಕ್ಷ ಕೋಟಿವರೆಗೆ ವಿನಿಯೋಗಿಸುತ್ತಿದೆ. ಇವೆಲ್ಲವೂ ಮಧ್ಯವರ್ತಿಗಳಿಲ್ಲದೆ ಜನರಿಗೆ ನೇರವಾಗಿ ತಲುಪುವ ಕಾರ್ಯಕ್ರಮಗಳಾಗಿವೆ. (ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು 18,000 ಕೋಟಿ, ವಿವಿಧ ಸಾಮಾಜಿಕ ಪಿಂಚಣಿ ಯೋಜನೆಗಳಿಗೆ 10,835 ಕೋಟಿ ಹಾಗೂ ಮನೆ ನಿರ್ಮಾಣದ ಸಬ್ಸಿಡಿ, ವಿದ್ಯಾರ್ಥಿ ವೇತನ ಸೇರಿದಂತೆ ಇತರೆ ಎಲ್ಲಾ ಇಲಾಖೆಗಳ ಸಹಾಯಧನಗಳು, ಹಾಲಿನ ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ, ಇತ್ಯಾದಿ ಎಲ್ಲವೂ ಸೇರಿ ಸುಮಾರು 20,000 ಕೋಟಿ ರೂ). ಇವೆಲ್ಲ ಸೇರಿ ಒಟ್ಟಾರೆ 1 ಲಕ್ಷ ಕೋಟಿ ರೂಗಳಾಗುತ್ತದೆ.

21.​2024-25 ರಲ್ಲಿ ಸರ್ಕಾರಿ ನೌಕರರ ಸಂಬಳಕ್ಕಾಗಿ 71,862 ಕೋಟಿ ರೂ. ಮತ್ತು ಪಿಂಚಣಿಗೆ 30,907 ಕೋಟಿ ರೂ. ಸೇರಿ ಒಟ್ಟು 1,02,769 ಕೋಟಿ ರೂ. ವೆಚ್ಚವಾಗಬಹುದೆಂದು ಪರಿಷ್ಕೃತ ಅಂದಾಜಿನಲ್ಲಿ ಅಂದಾಜು ಮಾಡಲಾಗಿದೆ. 7ನೇ ವೇತನ ಆಯೋಗ ಜಾರಿ ಆಗಿರುವುದರಿಂದ 2025-26 ನೆ ಸಾಲಿಗೆ ಸರ್ಕಾರಿ ನೌಕರರ ಸಂಬಳಕ್ಕಾಗಿ 85,860 ಕೋಟಿ ರೂ. ಮತ್ತು ಪಿಂಚಣಿಗಾಗಿ 38,580 ಕೋಟಿ ರೂ. ಸೇರಿ ಒಟ್ಟು ವೇತನಗಳಿಗಾಗಿ 1,24,440 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿದೆ. ಬಡ್ಡಿ ಪಾವತಿಗಾಗಿ 45,600 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ವೇತನ, ಪಿಂಚಣಿ ಮತ್ತು ಬಡ್ಡಿ ಪಾವತಿಗಳಿಗಾಗಿ ಒಟ್ಟು 1,70,040 ಕೋಟಿ ರೂ.ಗಳು ಬೇಕು.

22.​2025-26 ರಲ್ಲಿ ನಾನು ಮಂಡಿಸಿದ್ದು 16ನೇ ಬಜೆಟ್. ನನಗೆ ದಾಖಲೆಗಳನ್ನು ಮಾಡುವುದರಲ್ಲಿ ನಂಬಿಕೆಯಿಲ್ಲ. ನಾನು ಮಂಡಿಸಿದ ಬಜೆಟ್ ಬಡವರ, ಮಹಿಳೆಯರ, ಮಕ್ಕಳ, ಶೋಷಿತರ, ದುರ್ಬಲ ವರ್ಗದವರ, ಯುವಜನರ, ಕಾರ್ಮಿಕರ, ರೈತರ, ಹಿಂದುಳಿದವರ, ಅಲ್ಪಸಂಖ್ಯಾತರ ಏಳಿಗೆಯನ್ನು ಹಾಗೂ ಸಂಪತ್ತನ್ನು ಉತ್ಪಾದನೆ ಮಾಡುವವರ ಹಿತರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಂಡು ನಾಡಿನ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುವ ಮೂಲಕ ಕರ್ನಾಟಕವನ್ನು ಸಮಗ್ರ ಹಾಗೂ ಸುಸ್ಥಿರ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಶ್ರಮಿಸುವ ನಿಟ್ಟಿನಲ್ಲಿ ನಾನು ಬಜೆಟ್‌ಗಳನ್ನು ರೂಪಿಸಿದ್ದೇನೆ. ಈ ಬಾರಿಯೂ ಅದೇ ಕೆಲಸವನ್ನು ಮಾಡಿದ್ದೇನೆ ಎಂಬುದು ನನ್ನ ಧೃಢವಾದ ನಂಬಿಕೆ.

23.​ಈ ಬಾರಿ ನಮ್ಮ ಸರ್ಕಾರ ಮಂಡಿಸಿರುವ ಆಯವ್ಯಯವು ಗ್ಯಾರಂಟಿ ಯೋಜನೆಗಳ ಆಯವ್ಯಯ ಅಷ್ಟೇ ಅಲ್ಲ, ಇದು Weಟಜಿಚಿಡಿe ಃeಥಿoಟಿಜ ಉuಚಿಡಿಚಿಟಿಣees ಎಂದು ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರಿಗೆ ತಲಾ 1000 ರೂ ಹೆಚ್ಚು ಮಾಡಿದ್ದೇವೆ. ಅತಿಥಿ ಉಪನ್ಯಾಸಕರು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ತಲಾ 2000 ರೂ ಹೆಚ್ಚು ಮಾಡಿದ್ದೇವೆ. ಪತ್ರಕರ್ತರಿಗೆ ತಲಾ 3000 ರೂ, ಕಲಾವಿದರಿಗೆ ತಲಾ 500 ರೂ, ಕುಸ್ತಿ ಪಟುಗಳಿಗೆ ತಲಾ 1000 ರೂ ಹೆಚ್ಚು ಮಾಡಿದ್ದೇವೆ.

24.​ಎಲ್ಲಾ ಧರ್ಮದ ಪುರೋಹಿತರಿಗೆ ಸಮಾನವಾಗಿ ಮಾಸಿಕ 6000 ರೂ ಗೌರವಧನ ನೀಡಲು ಉದ್ದೇಶಿಸಲಾಗಿದೆ.

25.​ಇಷ್ಟರ ನಡುವೆ, ಬಂಡವಾಳ ವೆಚ್ಚಗಳಿಗೆ ಈ ವರ್ಷ 83,200 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಇಷ್ಟಾದರೂ ಸಹ, ನಮ್ಮ ವಿತ್ತೀಯ ಶಿಸ್ತು ನಿಯಮಗಳಿಗೆ ಅನುಗುಣವಾಗಿಯೇ ಇದೆ.

26.​2025-26ನೇ ಸಾಲಿಗೆ ಸಂಬಂಧಪಟ್ಟಂತೆ ಒಟ್ಟಾರೆ ರಾಜ್ಯದ ರಾಜಸ್ವ ಸ್ವೀಕೃತಿ 2,92,470 ಕೋಟಿ ರೂ. ಗಳಷ್ಟಾದರೆ ರಾಜಸ್ವ ವೆಚ್ಚ 3,11,739 ಕೋಟಿ ರೂ. ಆಗಬಹುದು. ಇದರಿಂದ 19,262 ಕೋಟಿ ರೂ.ಗಳಷ್ಟು ರಾಜಸ್ವ ಕೊರತೆ ಆಗಲಿದೆ ಎಂಬುದು ಅಂದಾಜು. ಇದು ಕಡಿಮೆ ಆಗಲೂಬಹುದು. 2024-25ರ ಬಜೆಟ್ ಮಂಡಿಸಿದಾಗ 27,354 ಕೋಟಿ ರೂ.ಗಳಷ್ಟು ರೆವೆನ್ಯೂ ಡಿಫಿಸಿಟ್ ಆಗಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಪರಿಷ್ಕೃತ ಅಂದಾಜಿನಂತೆ 26,127 ಕೋಟಿ ರೂ.ಗಳಷ್ಟಾಗಬಹುದೆಂದು ಅಂದಾಜು ಮಾಡಲಾಗಿದೆ. ಒಟ್ಟಾರೆ 2024-25 ಕ್ಕೆ ಹೋಲಿಸಿದರೆ 2025-26 ರಲ್ಲಿ ಸುಮಾರು 8,000 ಕೋಟಿ ರೂ.ಗಳಷ್ಟು ರಾಜಸ್ವ ಕೊರತೆ ಕಡಿಮೆ ಆಗುತ್ತದೆ. 2024-25ರ ಆಯವ್ಯಯದ ಅಂದಾಜಿನಲ್ಲಿ ರಾಜಸ್ವ ಕೊರತೆಯು ಜಿ.ಎಸ್.ಡಿ.ಪಿ.ಯ ಶೇ.0.96 ರಿಂದ 2025-26ರ ಆಯವ್ಯಯದಲ್ಲಿ ಶೇ.0.63 ಕ್ಕೆ ಇಳಿಕೆಯಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ನೀಡುವಾಗ ನಾನು ಹೇಳಿದಂತೆ 2026-27ನೇ ಸಾಲಿಗೆ ರಾಜ್ಯದ ಬಜೆಟ್ ರಾಜಸ್ವ ಕೊರತೆಯಿಂದ ಹೊರಬರುತ್ತದೆ, ನಾವು ಉಳಿತಾಯ ಬಜೆಟ್ಟನ್ನು ಮಂಡಿಸುತ್ತೇನೆ ಎಂಬ ವಿಶ್ವಾಸ ನನಗೆ ಇದೆ.
ಸಾಲ

27.​ಮಾನ್ಯ ಅಧ್ಯಕ್ಷರೆ, ಮಾನ್ಯ ಸದಸ್ಯರ ಗಮನಕ್ಕೆ ತರಬಯಸುವುದೇನೆಂದರೆ, ಕೇಂದ್ರದಲ್ಲಿ ಮೋದಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ರಾಜ್ಯಗಳ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. 2013 ರಿಂದ 2017 ರವರೆಗೆ ಕೇವಲ 04 ರಾಜ್ಯಗಳ ವಿತ್ತೀಯ ಕೊರತೆ ಶೇ.3 ಕ್ಕಿಂತ ಹೆಚ್ಚಿತ್ತು ಹಾಗೆಯೇ 5 ರಾಜ್ಯಗಳ ಒಟ್ಟು ಹೊಣೆಗಾರಿಕೆಗಳು ಶೇ.25 ಕ್ಕಿಂತ ಹೆಚ್ಚು ಇದ್ದವು. ಆದರೆ 2024-25 ರಲ್ಲಿ ದೇಶದ ಪ್ರಮುಖ 14 ರಾಜ್ಯಗಳ ಪೈಕಿ 10 ರಾಜ್ಯಗಳ ಒಟ್ಟು ಹೊಣೆಗಾರಿಕೆಗಳು ಶೇ.25 ಕ್ಕಿಂತ ಹೆಚ್ಚಿಗೆ ಇವೆ. ಅದೇ ರೀತಿ, 6 ಕ್ಕಿಂತ ಹೆಚ್ಚು ರಾಜ್ಯಗಳ ವಿತ್ತೀಯ ಕೊರತೆ ಶೇ.3 ಕ್ಕಿಂತ ಹೆಚ್ಚಾಗಿದೆ.

28.​ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿಗೆ ಬಿಡುಗಡೆ ಮಾಡಿರುವ ದಾಖಲೆಗಳಂತೆ 2014 ರಲ್ಲಿ ಮನಮೋಹನ್ ಸಿಂಗ್ ಅವರು ಅಧಿಕಾರದಿಂದ ಇಳಿಯುವ ಸಂದರ್ಭದಲ್ಲಿ ದೇಶದ ಎಲ್ಲಾ ರಾಜ್ಯಗಳ ಒಟ್ಟು ಸಾಲ 25.1 ಲಕ್ಷ ಕೋಟಿ ರೂ.ಗಳಷ್ಟಿತ್ತು. (ಮಾರ್ಚ್ 31-2014) 2024 ರ ಮಾರ್ಚ್-31 ರ ವೇಳೆಗೆ 83.32 ಲಕ್ಷ ಕೋಟಿ ರೂ.ಗಳಷ್ಟು ಎಂದು ಆರ್.ಬಿ.ಐ ದಾಖಲೆ ಬಿಡುಗಡೆ ಮಾಡಿದೆ. ಈ ವರ್ಷದ ಕಡೆಗೆ ಎಲ್ಲಾ ರಾಜ್ಯಗಳ ಸಾಲದ ಪ್ರಮಾಣ 95-100 ಲಕ್ಷ ಕೋಟಿ ರೂ.ಗಳಷ್ಟಾಗಬಹುದು.
:

22.​2025-26 ರಲ್ಲಿ ನಾನು ಮಂಡಿಸಿದ್ದು 16ನೇ ಬಜೆಟ್. ನನಗೆ ದಾಖಲೆಗಳನ್ನು ಮಾಡುವುದರಲ್ಲಿ ನಂಬಿಕೆಯಿಲ್ಲ. ನಾನು ಮಂಡಿಸಿದ ಬಜೆಟ್ ಬಡವರ, ಮಹಿಳೆಯರ, ಮಕ್ಕಳ, ಶೋಷಿತರ, ದುರ್ಬಲ ವರ್ಗದವರ, ಯುವಜನರ, ಕಾರ್ಮಿಕರ, ರೈತರ, ಹಿಂದುಳಿದವರ, ಅಲ್ಪಸಂಖ್ಯಾತರ ಏಳಿಗೆಯನ್ನು ಹಾಗೂ ಸಂಪತ್ತನ್ನು ಉತ್ಪಾದನೆ ಮಾಡುವವರ ಹಿತರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಂಡು ನಾಡಿನ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುವ ಮೂಲಕ ಕರ್ನಾಟಕವನ್ನು ಸಮಗ್ರ ಹಾಗೂ ಸುಸ್ಥಿರ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಶ್ರಮಿಸುವ ನಿಟ್ಟಿನಲ್ಲಿ ನಾನು ಬಜೆಟ್‌ಗಳನ್ನು ರೂಪಿಸಿದ್ದೇನೆ. ಈ ಬಾರಿಯೂ ಅದೇ ಕೆಲಸವನ್ನು ಮಾಡಿದ್ದೇನೆ ಎಂಬುದು ನನ್ನ ಧೃಢವಾದ ನಂಬಿಕೆ.

23.​ಈ ಬಾರಿ ನಮ್ಮ ಸರ್ಕಾರ ಮಂಡಿಸಿರುವ ಆಯವ್ಯಯವು ಗ್ಯಾರಂಟಿ ಯೋಜನೆಗಳ ಆಯವ್ಯಯ ಅಷ್ಟೇ ಅಲ್ಲ, ಇದು Weಟಜಿಚಿಡಿe ಃeಥಿoಟಿಜ ಉuಚಿಡಿಚಿಟಿಣees ಎಂದು ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರಿಗೆ ತಲಾ 1000 ರೂ ಹೆಚ್ಚು ಮಾಡಿದ್ದೇವೆ. ಅತಿಥಿ ಉಪನ್ಯಾಸಕರು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ತಲಾ 2000 ರೂ ಹೆಚ್ಚು ಮಾಡಿದ್ದೇವೆ. ಪತ್ರಕರ್ತರಿಗೆ ತಲಾ 3000 ರೂ, ಕಲಾವಿದರಿಗೆ ತಲಾ 500 ರೂ, ಕುಸ್ತಿ ಪಟುಗಳಿಗೆ ತಲಾ 1000 ರೂ ಹೆಚ್ಚು ಮಾಡಿದ್ದೇವೆ.

24.​ಎಲ್ಲಾ ಧರ್ಮದ ಪುರೋಹಿತರಿಗೆ ಸಮಾನವಾಗಿ ಮಾಸಿಕ 6000 ರೂ ಗೌರವಧನ ನೀಡಲು ಉದ್ದೇಶಿಸಲಾಗಿದೆ.

25.​ಇಷ್ಟರ ನಡುವೆ, ಬಂಡವಾಳ ವೆಚ್ಚಗಳಿಗೆ ಈ ವರ್ಷ 83,200 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಇಷ್ಟಾದರೂ ಸಹ, ನಮ್ಮ ವಿತ್ತೀಯ ಶಿಸ್ತು ನಿಯಮಗಳಿಗೆ ಅನುಗುಣವಾಗಿಯೇ ಇದೆ.

26.​2025-26ನೇ ಸಾಲಿಗೆ ಸಂಬಂಧಪಟ್ಟಂತೆ ಒಟ್ಟಾರೆ ರಾಜ್ಯದ ರಾಜಸ್ವ ಸ್ವೀಕೃತಿ 2,92,470 ಕೋಟಿ ರೂ. ಗಳಷ್ಟಾದರೆ ರಾಜಸ್ವ ವೆಚ್ಚ 3,11,739 ಕೋಟಿ ರೂ. ಆಗಬಹುದು. ಇದರಿಂದ 19,262 ಕೋಟಿ ರೂ.ಗಳಷ್ಟು ರಾಜಸ್ವ ಕೊರತೆ ಆಗಲಿದೆ ಎಂಬುದು ಅಂದಾಜು. ಇದು ಕಡಿಮೆ ಆಗಲೂಬಹುದು. 2024-25ರ ಬಜೆಟ್ ಮಂಡಿಸಿದಾಗ 27,354 ಕೋಟಿ ರೂ.ಗಳಷ್ಟು ರೆವೆನ್ಯೂ ಡಿಫಿಸಿಟ್ ಆಗಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಪರಿಷ್ಕೃತ ಅಂದಾಜಿನಂತೆ 26,127 ಕೋಟಿ ರೂ.ಗಳಷ್ಟಾಗಬಹುದೆಂದು ಅಂದಾಜು ಮಾಡಲಾಗಿದೆ. ಒಟ್ಟಾರೆ 2024-25 ಕ್ಕೆ ಹೋಲಿಸಿದರೆ 2025-26 ರಲ್ಲಿ ಸುಮಾರು 8,000 ಕೋಟಿ ರೂ.ಗಳಷ್ಟು ರಾಜಸ್ವ ಕೊರತೆ ಕಡಿಮೆ ಆಗುತ್ತದೆ. 2024-25ರ ಆಯವ್ಯಯದ ಅಂದಾಜಿನಲ್ಲಿ ರಾಜಸ್ವ ಕೊರತೆಯು ಜಿ.ಎಸ್.ಡಿ.ಪಿ.ಯ ಶೇ.0.96 ರಿಂದ 2025-26ರ ಆಯವ್ಯಯದಲ್ಲಿ ಶೇ.0.63 ಕ್ಕೆ ಇಳಿಕೆಯಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ನೀಡುವಾಗ ನಾನು ಹೇಳಿದಂತೆ 2026-27ನೇ ಸಾಲಿಗೆ ರಾಜ್ಯದ ಬಜೆಟ್ ರಾಜಸ್ವ ಕೊರತೆಯಿಂದ ಹೊರಬರುತ್ತದೆ, ನಾವು ಉಳಿತಾಯ ಬಜೆಟ್ಟನ್ನು ಮಂಡಿಸುತ್ತೇನೆ ಎಂಬ ವಿಶ್ವಾಸ ನನಗೆ ಇದೆ.
ಸಾಲ

27.​ಮಾನ್ಯ ಅಧ್ಯಕ್ಷರೆ, ಮಾನ್ಯ ಸದಸ್ಯರ ಗಮನಕ್ಕೆ ತರಬಯಸುವುದೇನೆಂದರೆ, ಕೇಂದ್ರದಲ್ಲಿ ಮೋದಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ರಾಜ್ಯಗಳ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. 2013 ರಿಂದ 2017 ರವರೆಗೆ ಕೇವಲ 04 ರಾಜ್ಯಗಳ ವಿತ್ತೀಯ ಕೊರತೆ ಶೇ.3 ಕ್ಕಿಂತ ಹೆಚ್ಚಿತ್ತು ಹಾಗೆಯೇ 5 ರಾಜ್ಯಗಳ ಒಟ್ಟು ಹೊಣೆಗಾರಿಕೆಗಳು ಶೇ.25 ಕ್ಕಿಂತ ಹೆಚ್ಚು ಇದ್ದವು. ಆದರೆ 2024-25 ರಲ್ಲಿ ದೇಶದ ಪ್ರಮುಖ 14 ರಾಜ್ಯಗಳ ಪೈಕಿ 10 ರಾಜ್ಯಗಳ ಒಟ್ಟು ಹೊಣೆಗಾರಿಕೆಗಳು ಶೇ.25 ಕ್ಕಿಂತ ಹೆಚ್ಚಿಗೆ ಇವೆ. ಅದೇ ರೀತಿ, 6 ಕ್ಕಿಂತ ಹೆಚ್ಚು ರಾಜ್ಯಗಳ ವಿತ್ತೀಯ ಕೊರತೆ ಶೇ.3 ಕ್ಕಿಂತ ಹೆಚ್ಚಾಗಿದೆ.

28.​ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿಗೆ ಬಿಡುಗಡೆ ಮಾಡಿರುವ ದಾಖಲೆಗಳಂತೆ 2014 ರಲ್ಲಿ ಮನಮೋಹನ್ ಸಿಂಗ್ ಅವರು ಅಧಿಕಾರದಿಂದ ಇಳಿಯುವ ಸಂದರ್ಭದಲ್ಲಿ ದೇಶದ ಎಲ್ಲಾ ರಾಜ್ಯಗಳ ಒಟ್ಟು ಸಾಲ 25.1 ಲಕ್ಷ ಕೋಟಿ ರೂ.ಗಳಷ್ಟಿತ್ತು. (ಮಾರ್ಚ್ 31-2014) 2024 ರ ಮಾರ್ಚ್-31 ರ ವೇಳೆಗೆ 83.32 ಲಕ್ಷ ಕೋಟಿ ರೂ.ಗಳಷ್ಟು ಎಂದು ಆರ್.ಬಿ.ಐ ದಾಖಲೆ ಬಿಡುಗಡೆ ಮಾಡಿದೆ. ಈ ವರ್ಷದ ಕಡೆಗೆ ಎಲ್ಲಾ ರಾಜ್ಯಗಳ ಸಾಲದ ಪ್ರಮಾಣ 95-100 ಲಕ್ಷ ಕೋಟಿ ರೂ.ಗಳಷ್ಟಾಗಬಹುದು.

29.​ಇತ್ತ ರಾಜ್ಯಗಳ ಪರಿಸ್ಥಿತಿ ಈ ರೀತಿಯಾದರೆ ಕೇಂದ್ರ ಸರ್ಕಾರವು ಕೂಡ ಸಾಲದಲ್ಲಿ ಮುಳುಗಿದೆ. 2014 ರಲ್ಲಿ ದೇಶದ ಸಾಲ ಸುಮಾರು 53.11 ಲಕ್ಷ ಕೋಟಿ ರೂ.ಗಳಷ್ಟಿತ್ತು. ಆದರೆ 2025-26 ನೇ ಸಾಲಿನ ಬಜೆಟ್ ಮಂಡಿಸುವಾಗ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರ ಮಾಡಿರುವ ಸಾಲದ ಪ್ರಮಾಣ 200.16 ಲಕ್ಷ ಕೋಟಿ ರೂ.ಗಳಷ್ಟಾಗಬಹುದೆಂದು ಪ್ರಸ್ತಾಪ ಮಾಡಿದ್ದಾರೆ.

30.​ರಾಜ್ಯಗಳೂ ಹೆಚ್ಚು ಸಾಲ ಮಾಡುವಂತಾಗಿದೆ. ಕೇಂದ್ರವೂ ಹೆಚ್ಚು ಸಾಲ ಮಾಡುತ್ತಿದೆ. ಒಟ್ಟಾರೆ ವೆಚ್ಚದಲ್ಲಿ ರಾಜ್ಯಗಳ ಪಾಲು ಶೇ.60-65 ರಷ್ಟು ಇರಬೇಕು ಎಂಬುದು ಮೊದಲಿನಿಂದ ನಡೆದುಕೊಂಡು ಬಂದ ನಿಯಮ. ಆದರೆ ಈಗ ಅದು ವ್ಯತ್ಯಾಸವಾಗುತ್ತಿದೆ. ಕೇಂದ್ರವು ಸೆಸ್‌ಗಳ ನೆಪದಲ್ಲಿ ಸುಲಿಗೆ ಮಾಡುತ್ತಿದೆ. ಸೆಸ್‌ಗಳನ್ನು ತೆರಿಗೆ ಪಾಲಿನ ವ್ಯಾಪ್ತಿಗೆ ಒಳಪಡಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. 16ನೇ ಹಣಕಾಸು ಆಯೋಗದ ಮುಂದೆ ಇದೇ ಬೇಡಿಕೆಯನ್ನಿಟ್ಟಿದ್ದೇವೆ. ಇದರ ಜೊತೆಗೆ ತೆರಿಗೆ ಪಾಲಿನಲ್ಲೂ ನಮಗೆ ಶೇ. 50 ರಷ್ಟು ಕೊಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದೇವೆ.

31.​ರಾಜ್ಯ ಸರ್ಕಾರವು ಈವರೆಗೆ ಪಡೆದಿರುವ ಒಟ್ಟು ಸಾಲದಲ್ಲಿ ಮಾನ್ಯ ಸಿದ್ದರಾಮಯ್ಯನವರ ಪಾಲು ಶೆ.63 ರಷ್ಟಿದ್ದು, ಇವರ ಅಧಿಕಾರಾವಧಿಯಲ್ಲಿ ರಾಜ್ಯವು ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ಆರೋಪಿಸಿದ್ದಾರೆ.

32.​ವಾಸ್ತವ ಸಂಗತಿ ಏನೆಂದರೆ, 2013-14 ರಿಂದ 2017-18 ಹಾಗೂ 2023-24 ರಿಂದ 2024-25 (ಃಇ) ರ ನನ್ನ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರ ಪಡೆದಿರುವ ಒಟ್ಟು ಸಾಲವು 3,21,037 ಕೋಟಿ ರೂ.ಗಳು. ಈ ಅವಧಿಯಲ್ಲಿ ನಾನು ಹಿಂದಿನ ಸರ್ಕಾರಗಳು ಮಾಡಿದ ಸುಮಾರು 75,856 ಕೋಟಿ ರೂ.ಗಳನ್ನು ತೀರಿಸಿರುತ್ತೇನೆ. ಅಲ್ಲದೆ, ಈ ಅವಧಿಯಲ್ಲಿ ನಾನು 2,37,524 ಕೋಟಿ ರೂ. ಗಳಷ್ಟು ಅನುದಾನವನ್ನು ಬಂಡವಾಳ ಕಾಮಗಾರಿಗಳಿಗೆ ನೀಡಿರುತ್ತೇನೆ.
33.​ಅಲ್ಲದೆ, ಬಂಡವಾಳ ಯೋಜನೆಗಳಿಗೆ ಅನುದಾನ ಒದಗಿಸುವ ಮೂಲಕ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯಾಗಿರುತ್ತದೆ. ಮಾಹಿತಿ ತಂತ್ರಜ್ಞಾನ, ಕೈಗಾರಿಕೆ, ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಯಾಗಿರುತ್ತದೆ. ಇದರಿಂದ ರಾಜ್ಯದಲ್ಲಿ ಹೂಡಿಕೆಗಳು ಹೆಚ್ಚಳವಾಗಿದ್ದು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿರುತ್ತವೆ. ಇದರ ಪರಿಣಾಮವಾಗಿ ದೇಶದಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕವು ಪ್ರಮುಖ ರಾಜ್ಯವಾಗಿದೆ. 2012-13 ರಲ್ಲಿ 57,720 ಕೋಟಿ ರೂ.ಗಳಿದ್ದ ರಾಜ್ಯದ ಸ್ವಂತ ರಾಜಸ್ವವು 2025-26 ರಲ್ಲಿ 2,24,600 ಕೋಟಿ ರೂ.ಗಳಿಗೆ ಹೆಚ್ಚಾಗಿರುತ್ತದೆ. ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ. ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2ನೇ ಸ್ಥಾನದಲ್ಲಿದೆ.

34.​ನನ್ನ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರವು 3.12 ಲಕ್ಷ ಕೋಟಿ ಸಾಲ ಪಡೆದಿರುವುದು ನಿಜ. ಆದರೆ ಈ ಸಾಲವನ್ನು ಬಂಡವಾಳ ಯೋಜನೆಗಳಿಗೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ರಾಜ್ಯದ ಆರ್ಥಿಕ ಪ್ರಗತಿಗೆ ವಿನಿಯೋಗಿಸಲಾಗಿರುತ್ತದೆ. ಅಲ್ಲದೆ, ನನ್ನ ಸರ್ಕಾರದ ಅವಧಿಯಲ್ಲಿ ಈವರೆಗೂ ಮಾಡಿರುವ ಸಾಲವು ಕೇಂದ್ರ ಸರ್ಕಾರ ವಿಧಿಸಿರುವ ಮಿತಿಯೊಳಗೆ ನಿರ್ವಹಿಸಲಾಗಿರುತ್ತದೆ ಹಾಗೂ ನಮ್ಮ ಅಧಿಕಾರಾವಧಿಯಲ್ಲಿ ವಿತ್ತೀಯ ಶಿಸ್ತನ್ನು ಕಡ್ಡಾಯವಾಗಿ ಪಾಲನೆ ಮಾಡಿರುತ್ತೇನೆ ಎಂದು ಸ್ಪಷ್ಟವಾಗಿ ಹೇಳಬಯಸುತ್ತೇನೆ.

35.​ನನ್ನ ಸರ್ಕಾರದ ಅವಧಿಯಲ್ಲಿ ಬಂಡವಾಳ ಯೋಜನೆಗಳಿಗೆ ಸಮರ್ಪಕ ಅನುದಾನ ನೀಡಿದ್ದ ಕಾರಣ ರಾಜ್ಯದ ಜಿ.ಎಸ್.ಡಿ.ಪಿ.ಯು 2012-13 ರಲ್ಲಿ 6.95 ಲಕ್ಷ ಕೋಟಿ ರೂ.ಗಳಿಂದ 2025-26 ರಲ್ಲಿ 30.70 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ರಾಜ್ಯದ ಜಿ.ಎಸ್.ಡಿ.ಪಿ.ಯು ಈ ಅವಧಿಯಲ್ಲಿ 23.75 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ.

36.​ಇದಿಷ್ಟೆ ಅಲ್ಲ, ಈ ಸದನಕ್ಕೆ ಇನ್ನೊಂದು ಮಾಹಿತಿ ತಿಳಿಸಬಯಸುತ್ತೇನೆ. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಒಂದು ಆಟ ಆಡಿತು. ಏನಪ್ಪಾ ಅಂದರೆ, ನಾವು 2026 ರವರೆಗೆ ಜಿ.ಎಸ್.ಟಿ. ಪರಿಹಾರದ ಸೆಸ್ ಅನ್ನು ಸಂಗ್ರಹಿಸುತ್ತೇವೆ. ಅದರ ಬದಲಾಗಿ ನಾವೇ ಸಾಲ ತೆಗೆದು ನಿಮಗೆ ಕೊಡುತ್ತೇವೆ. ಆದ್ದರಿಂದ, ನೀವು ವಿದ್ಯುತ್ ಸುಧಾರಣೆ, ತೆರಿಗೆ ಸಂಗ್ರಹ ಇವುಗಳನ್ನು ಬಿಗಿಗೊಳಿಸಬೇಕು ಎಂದರು. ನಮ್ಮ ಆರ್ಥಿಕ ಇಲಾಖೆಯವರು ಅದನ್ನು ರಾಜ್ಯದ ಸಾಲದ ವ್ಯಾಪ್ತಿಯಿಂದ ಹೊರಗಿಟ್ಟರು. ವಾಸ್ತವವಾಗಿ ಅಕೌಂಟೆಂಟ್ ಜನರಲ್ ಅವರ ಲೆಕ್ಕದ ಪ್ರಕಾರ ಅದು ರಾಜ್ಯದ ವ್ಯಾಪ್ತಿಗೆ ಬರುತ್ತದೆ. ಆದರೆ ಕೇಂದ್ರ ಸರ್ಕಾರವು ಅದನ್ನು ಹೊರಗಿಡಬೇಕು ಎಂದು ವಿನಂತಿ ಮಾಡಿದ್ದರಿಂದ ಅಕೌಂಟೆಂಟೆ ಜನರಲ್ ರವರು ಮೌನವಾಗಿದ್ದಾರೆ.

37.​2020-21 ರಲ್ಲಿ ಆರ್ಥಿಕ ಇಲಾಖೆಯ ಪ್ರಕಾರ 72,121 ಕೋಟಿ ರೂ., ಆದರೆ ಕೇಂದ್ರ ಸರ್ಕಾರದ ಜಿ.ಎಸ್.ಟಿ. ಪರಿಹಾರದ ಬದಲಾಗಿ ಪಡೆದುಕೊಟ್ಟ ಸಾಲ 12,407 ಕೋಟಿ., ವಾಸ್ತವ ವಿತ್ತೀಯ ಕೊರತೆ ಸ್ಥಿತಿ ಶೇ.4.69 ಆಗುತ್ತದೆ. 2021-22 ರಲ್ಲಿ ಆರ್ಥಿಕ ಇಲಾಖೆಯ ಪ್ರಕಾರ 65,532 ಕೋಟಿ ರೂ., ಆದರೆ ಕೇಂದ್ರ ಸರ್ಕಾರದ ಜಿ.ಎಸ್.ಟಿ. ಪರಿಹಾರದ ಬದಲಾಗಿ ಪಡೆದುಕೊಟ್ಟ ಸಾಲ 18,109 ಕೋಟಿ., ವಾಸ್ತವ ವಿತ್ತೀಯ ಕೊರತೆ ಸ್ಥಿತಿ ಶೇ. 4.86 ಆಗುತ್ತದೆ.
38.​ಇದನ್ನು ನಮ್ಮ ಲೆಕ್ಕದಲ್ಲಿ ಸೇರಿಸಬೇಕು. ಯಾಕೆಂದರೆ, ನಮ್ಮ ಜನರಿಂದ 2026 ರವರೆಗೆ ಜಿ.ಎಸ್.ಟಿ. ಸೆಸ್ ಅನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ಅದರಲ್ಲಿ ನಮಗೆ ಪಾಲು ಕೊಡಿ ಎಂದರೆ ನಿಮಗೆ ಸಾಲ ಕೊಟ್ಟಿದೇವೆ ಅದನ್ನು ತೀರಿಸುತ್ತಿದ್ದೇವೆ ಎನ್ನುತ್ತಾರೆ. ನಮಗಿರುವ ಮಾಹಿತಿಯ ಪ್ರಕಾರ ಅವರು ಕೊಟ್ಟ ಸಾಲ 30,516 ಕೋಟಿ ರೂ.ಗಳು 2024 ಕ್ಕೆ ಮುಗಿದು ಹೋಗಿದೆ.

39.​ಇನ್ನೂ ಆಶ್ಚರ್ಯಕರ ವಿಚಾರವೆಂದರೆ ವಿರೋಧ ಪಕ್ಷದವರು 2022-23 ರಲ್ಲಿ 44,549 ಕೋಟಿ ಸಾಲ ತೆಗೆದುಕೊಳ್ಳಲಾಗಿತ್ತು ಎನ್ನುತ್ತಾರೆ. ವಾಸ್ತವ ಸ್ಥಿತಿ ಏನೆಂದರೆ, ಕೇಂದ್ರ ಸರ್ಕಾರ ಇಲ್ಲಿ ಚುನಾವಣಾ ರಾಜಕೀಯ ಮಾಡಿತು. 2023 ರಲ್ಲಿ ಚುನಾವಣೆ ಬರುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಮಹಾಲೇಖಪಾಲರ ಆಡಿಟ್ ಆಗುವುದಕ್ಕೆ ಮೊದಲೆ ಅದುವರೆಗೂ ಬಾಕಿ ಇದ್ದ ಜಿ.ಎಸ್.ಟಿ. ಪರಿಹಾರವಾದ 20,288 ಕೋಟಿ ರೂ.ಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಿತು. ಅದರಿಂದಾಗಿ ಆ ವರ್ಷ ಸಾಲದ ಪ್ರಮಾಣ ಸ್ವಲ್ಪ ಕಡಿಮೆ ಆಯಿತು. ಅದರ ಹೊರತಾಗಿ ಬೇರೆ ಇನ್ಯಾವ ಕಾರಣಗಳು ಇಲ್ಲ.

*ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರ-3*

ರಾಜ್ಯವು ಹಣಕಾಸಿನ ಕೊರತೆ ಎದುರಿಸಲು ಮುಖ್ಯ ಕಾರಣ

40.​ವಿರೋಧ ಪಕ್ಷದವರು ರಾಜ್ಯದ ಹಣಕಾಸಿನ ಸ್ಥಿತಿಯ ಬಗ್ಗೆ ಮಾತನಾಡುವಾಗ ಎರಡು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಒಂದು, ತೆರಿಗೆ ಸಂಗ್ರಹಣೆ ಸಮರ್ಪಕವಾಗಿಲ್ಲ ಎಂದಾದರೆ ಇನ್ನೊಂದು ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಹಣಕಾಸಿನ ಪರಿಸ್ಥಿತಿ ಕ್ಲಿಷ್ಟಕರವಾಗಿದೆ ಎಂದು ವ್ಯಾಖ್ಯಾನಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.

41.​ಆದರೆ ವಾಸ್ತವ ಸಂಗತಿಗಳು ಬೇರೆಯದೆ ಆಗಿವೆ. ಒಂದು, ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆ ಹಾಗೂ ಸಂಪನ್ಮೂಲ ಹಂಚಿಕೆೆಯಲ್ಲಿ ಮಾಡಿದ ದ್ರೋಹ ಮೊದಲ ಕಾರಣವಾದರೆ, ಎರಡನೆಯದಾಗಿ ಹಿಂದೆ ಆಡಳಿತ ನಡೆಸಿದ್ದ ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಆರ್ಥಿಕ ಅಶಿಸ್ತು ಹಾಗೂ ಅರಾಜಕ ಆಡಳಿತದಿಂದಾಗಿ ಸಮಸ್ಯೆಗಳು ಉದ್ಭವಿಸಿವೆ. ಈ ಎರಡನ್ನೂ ಬಚ್ಚಿಡಲು ವಿರೋಧ ಪಕ್ಷದವರು ಜನರಿಗೆ ನೀಡುತ್ತಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಹಾಗೂ ಅದನ್ನು ಅನುಷ್ಠಾನ ಮಾಡುತ್ತಿರುವ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ರಾಜ್ಯದ ಆರ್ಥಿಕತೆಯ ಬಗ್ಗೆ ಕಿಂಚಿತ್ತಾದರೂ ತಿಳುವಳಿಕೆ ಇರುವವರು ವರ್ತಿಸುವ ರೀತಿ ಇದಲ್ಲ.

42.​2018-19ರಲ್ಲಿ ಕೇಂದ್ರದ ಬಜೆಟ್ ಗಾತ್ರ 24.42 ಲಕ್ಷ ಕೋಟಿ ರೂ.ಇದ್ದಾಗ ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ 46,288 ಕೋಟಿ ರೂ. ಬಂದಿತ್ತು. ಈಗ ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿ ಮೀರಿದೆ. 2018-19 ಕ್ಕೆ ಹೋಲಿಸಿದರೆ ಶೇ.100 ರಷ್ಟು ಹೆಚ್ಚಾಗಿದೆ. ಆ ಲೆಕ್ಕಕ್ಕೆ ಹೋಲಿಸಿದರೆ 2025-26ನೆ ಸಾಲಿಗೆ ನಮಗೆ ಕನಿಷ್ಠ 1 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ ಅನುದಾನ ಬರಬೇಕಾಗಿತ್ತು. ಆ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ. ಒಂದು ನಮಗೆ ಸಮರ್ಪಕವಾಗಿ ತೆರಿಗೆ ಪಾಲೂ ಸಿಗುತ್ತಿಲ್ಲ. ಯೋಜನೆಗಳನ್ನೂ ತೆಗೆದುಕೊಳ್ಳುತ್ತಿಲ್ಲ.

43.​ಕರ್ನಾಟಕಕ್ಕೆ 14 ನೇ ಹಣಕಾಸು ಆಯೋಗವು ಶೇ. 4.71 ರಷ್ಟು ತೆರಿಗೆ ಪಾಲು ನೀಡಿತ್ತು. ಆದರೆ 15 ನೇ ಹಣಕಾಸು ಆಯೋಗವು ಶೇ.3.64 ಕ್ಕೆ ಇಳಿಸಿದರು. ಶೇ.23 ರಷ್ಟು ಕುಸಿತವಾಯಿತು. ಇದರಿಂದ ಪ್ರತಿ ವರ್ಷ 12 ಸಾವಿರ ಕೋಟಿ ರೂ. ರಾಜ್ಯಕ್ಕೆ ನಷ್ಟವಾಗುತ್ತಿದೆ. ಇದಷ್ಟೆ ಅಲ್ಲದೆ 15 ನೇ ಹಣಕಾಸು ಆಯೋಗವು 5,495 ಕೋಟಿ ರೂ.ವಿಶೇಷ ಅನುದಾನ ಕೊಡಲು ಶಿಫಾರಸ್ಸು ಮಾಡಿತ್ತು. ಕೆರೆಗಳ ಅಭಿವೃದ್ಧಿಗೆ 3000 ಕೋಟಿ ಹಾಗೂ ಫೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ 3000 ಕೋಟಿ ರೂ ಶಿಫಾರಸ್ಸು ಮಾಡಿತ್ತು. ಅದನ್ನೂ ಕೊಡಲಿಲ್ಲ. ಹಾಗೆಯೇ, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿಗಳನ್ನು ಕೊಡುತ್ತೇನೆ ಎಂದು ಹೇಳಿ, ಕೊಡದೆ ದ್ರೋಹ ಮಾಡಿದೆ. ಈ ಕುರಿತು ವಿರೋಧ ಪಕ್ಷದವರು ತುಟಿಪಿಟಕ್ಕೆನ್ನುವುದಿಲ್ಲ. ಬದಲಾಗಿ ಮೋದಿ ಸರ್ಕಾರದ ದ್ರೋಹವನ್ನು ಸಮರ್ಥಿಸುತ್ತಾರೆ.

ದೇಶದ ಪ್ರಮುಖ ರಾಜ್ಯಗಳ ರಾಷ್ಟ್ರೀಯ ಹೆದ್ದಾರಿ  ಯೋಜನೆಗಳ ವಿವರ

44.​ವಿರೋಧ ಪಕ್ಷದವರು ಕೇಂದ್ರದಿಂದ ವ್ಯಾಪಕ ಪ್ರಮಾಣದಲ್ಲಿ ಅನುದಾನಗÀಳನ್ನು ರಾಜ್ಯಕ್ಕೆ ತಂದು ರಾಜ್ಯದ ಹೆದ್ದಾರಿ ಹಾಗೂ ರೈಲ್ವೆ ಯೋಜನೆಗಳಿಗೆ ನೀಡಲಾಗಿದೆ ಎಂದು ಮೋದಿ ಸರ್ಕಾರವನ್ನು ಸಮರ್ಥಿಸುತ್ತಾರೆ. ಡಿಸೆಂಬರ್-9, 2024 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ದಾಖಲೆಗಳ ಪ್ರಕಾರ ಸತ್ಯಾಂಶ ಈ ರೀತಿ ಇದೆ. 2004-05ರಲ್ಲಿ ನಿರ್ಮಿಸಿದ ರಸ್ತೆಯ ಕುರಿತು ಮಾಹಿತಿ ಆರ್.ಬಿ.ಐ., ದಾಖಲೆಗಳಲ್ಲಿಲ್ಲ.          9 ವರ್ಷಗಳಲ್ಲಿ ಕರ್ನಾಟಕದಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ  ಸರ್ಕಾರ 2329 ಕಿ.ಮೀ. ರಸ್ತೆ ನಿರ್ಮಾಣ ಮಾಡಿತ್ತು. 2014 ರಿಂದ 2024 ರವರೆಗೆ 2014 ಕಿಮೀ ರಸ್ತೆಯನ್ನು ನಿರ್ಮಿಸಲಾಗಿದೆ.         2005 ರಿಂದ 2014 ರವರೆಗಿನ 9 ವರ್ಷಗಳಲ್ಲಿ ಸುಮಾರು 7 ವರ್ಷಗಳ ಕಾಲ ಕಾಂಗ್ರೆಸ್ಸೇತರ ಸರ್ಕಾರಗಳೆ ರಾಜ್ಯದಲ್ಲಿ ಆಡಳಿತ ನಡೆಸಿದ್ದವು. ಆದರೂ ಕೂಡ ಮನಮೋಹನ್ ಸಿಂಗ್ ಅವರ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಅನುದಾನಗಳನ್ನು ಯಥೇಚ್ಛವಾಗಿ ಕೊಟ್ಟಿತ್ತು ಹಾಗೂ ಮೂಲಸೌಕರ್ಯ ನಿರ್ಮಾಣ ಮಾಡಲು ಶ್ರಮಿಸಿತ್ತು.

45.​ಇರಲಿ, ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ 10 ವರ್ಷಗಳಲ್ಲಿ ಹಿಂದೆ ನಿರ್ಮಿಸಿದ್ದಕ್ಕಿಂತ ಕಡಿಮೆ ಉದ್ದದ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಆದರೆ, ಮಹಾರಾಷ್ಟçದಲ್ಲಿ 12,210 ಕಿ.ಮೀ., ಉತ್ತರ ಪ್ರದೇಶದಲ್ಲಿ 4306 ಕಿ.ಮೀ., ಗುಜರಾತ್ ನಲ್ಲಿ 3405 ಕಿ.ಮೀ., ರಾಜಸ್ಥಾನದಲ್ಲಿ 3060 ಕಿ.ಮೀ. ಉದ್ದದ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದೆ.

46.​ಈ ವರ್ಷ ಇನ್ನೂ ಎಲ್ಲಾ ರಾಜ್ಯಗಳ ಬಜೆಟ್ ಆಗದಿರುವ ಕಾರಣಕ್ಕೆ ನಾನು 2024-25ರ ಬಜೆಟ್‌ಗಳಲ್ಲಿ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಎಷ್ಟೆಷ್ಟು ಅನುದಾನ ರಾಜ್ಯಗಳು ಪಡೆದಿವೆ ಎಂಬುದನ್ನು ಹೇಳುತ್ತೇನೆ.

ವಿವಿಧ ರಾಜ್ಯಗಳಿಗೆ ಕೇಂದ್ರದಿಂದ ದೊರಕುತ್ತಿರುವ ತೆರಿಗೆ ಪಾಲು ಹಾಗೂ ಸಹಾಯಾನುದಾನಗಳ ವಿವರ

47.​ಈ ಮಾಹಿತಿಯನ್ನು ನೋಡಿದರೆ ಕರ್ನಾಟಕದ ಸ್ಥಿತಿ ಏನೆಂದು ಅರ್ಥವಾಗುತ್ತದೆ. ಈ ಮಾಹಿತಿ ಸದನಕ್ಕೆ ಇರಲಿ ಎಂಬ ಉದ್ದೇಶದಿಂದಲೆ ನಾನು ಬಿಜೆಪಿ ಆಡಳಿತದ ಪ್ರಮುಖ ರಾಜ್ಯಗಳು ಹಾಗೂ ಕರ್ನಾಟಕವನ್ನು ಹೋಲಿಕೆ ಮಾಡಿ ಈ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

48.​ಬಜೆಟ್ ಗಾತ್ರದ ವಿಚಾರದಲ್ಲಿ ನಾವು ಉತ್ತರ ಪ್ರದೇಶ, ಮುಂತಾದ ರಾಜ್ಯಗಳ ಜೊತೆಗೆ ಹೋಲಿಸಿಕೊಳ್ಳುವುದಿಲ್ಲ.

49.​2024-25ರ ಬಜೆಟ್‌ನ ಅಂಕಿ ಅಂಶಗಳಿವು. ಪರಿಷ್ಕೃತ ಅಂದಾಜಿಗೆ ಹೋಗುವುದಿಲ್ಲ. ಉತ್ತರ ಪ್ರದೇಶದ ಒಟ್ಟು ಬಜೆಟ್ಟಿನಲ್ಲಿ ಶೇ.45 ರವರೆಗೆ ಕೇಂದ್ರ ಸರ್ಕಾರದ ತೆರಿಗೆ ಪಾಲು ಮತ್ತು ಸಹಾಯಾನುದಾನಗಳು ಲಭಿಸುತ್ತವೆ. ಮಧ್ಯಪ್ರದೇಶಕ್ಕೆ ಶೇ.40 ರವರೆಗೆ, ರಾಜಸ್ಥಾನಕ್ಕೆ ಶೇ.24 ರಷ್ಟು ಕೇಂದ್ರ ಸರ್ಕಾರದ ತೆರಿಗೆ ಪಾಲು ಮತ್ತು ಸಹಾಯಾನುದಾನಗಳು ಲಭಿಸುತ್ತವೆ. ಆದರೆ ಅಭಿವೃದ್ಧಿಯಲ್ಲಿ ಪ್ರತಿಸ್ಪರ್ಧಿಗಳಾಗಿರುವ ಕರ್ನಾಟಕ, ಮಹಾರಾಷ್ಟç, ಗುಜರಾತ್ ಮೂರು ರಾಜ್ಯಗಳ ಸ್ಥಿತಿ ಹೋಲಿಕೆ ಮಾಡಿದರೆ,  ಮಹಾರಾಷ್ಟç ಶೇ.19.38, ಗುಜರಾತ್ ಶೇ.18.58 ರಷ್ಟಿದೆ,. ಆದರೆ ಕರ್ನಾಟಕ ಮಾತ್ರ ಕೇವಲ ಶೇ.16 ರಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಸಹಾಯಾನುದಾನಗಳನ್ನು ಪಡೆಯುತ್ತಿದೆ. ನಮಗೆ ಮಹಾರಾಷ್ಟçಕ್ಕೆ ಕೊಟ್ಟಿರುವ ಶೇ.19.38 ರಷ್ಟು ಪಾಲು ಕೊಟ್ಟಿದ್ದರೂ ಕೂಡ ಸುಮಾರು 72,000 ಕೋಟಿ ಸಿಗುತ್ತಿತ್ತು. ನಮಗೆ ಹೆಚ್ಚುವರಿಯಾಗಿ ಸುಮಾರು 12,000 ಕೋಟಿ ರೂ.ಗಳಷ್ಟು ಅನುದಾನಗಳು ಲಭ್ಯವಾಗುತ್ತಿದ್ದವು. ಆದರೆ, ದುರುದ್ದೇಶ ಪೂರ್ವಕವಾಗಿರುವುದರಿಂದ ಕರ್ನಾಟಕಕ್ಕೆ ಅನ್ಯಾಯ ಮಾಡಬೇಕಂತಲೇ ತೀರ್ಮಾನ ಮಾಡಿರುವುದರಿಂದ ಈ ರೀತಿ ಆಗುತ್ತಿದೆ.

1.​ರಾಜ್ಯಕ್ಕೆ ರಸ್ತೆಗಳಲ್ಲಿ, ರೈಲ್ವೆ ಯೋಜನೆಗಳಲ್ಲಿ, ಬಂದರು ಮುಂತಾದ ಮೂಲಭೂತ ಸೌಕರ್ಯ ಯೋಜನೆಗಳಲ್ಲಿ ಮಹಾರಾಷ್ಟç, ಗುಜರಾತ್ ಮುಂತಾದ ರಾಜ್ಯಗಳಿಗೆ ಕೊಟ್ಟಷ್ಟು ಅನುದಾನಗಳನ್ನು ಕೊಡಲಿಲ್ಲ.

2.​ನೇರವಾಗಿ ನ್ಯಾಯುತವಾಗಿ ಬರಬೇಕಾದ  ತೆರಿಗೆ ಪಾಲು, ಕೇಂದ್ರ ಸಹಾಯಾನುದಾನಗಳನ್ನು ಕಡಿಮೆ ಮಾಡಲಾಗುತ್ತಿದೆ.

50.​ಹಾಗಾಗಿ, ಕರ್ನಾಟಕಕ್ಕೆ ಕೇಂದ್ರದಿಂದ ಅನುದಾನಗಳು ಬರದೆ ರಾಜ್ಯದ ಆರ್ಥಿಕ ಸ್ಥಿತಿ ಕ್ಲಿಷ್ಟಕರವಾಗಿರುವುದು ಒಂದು ರೀತಿಯದಾದರೆ, ಎರಡನೆಯದಾಗಿ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ ನಡೆಸಿದ ಅರಾಜಕ ಸ್ಥಿತಿಗಳಿಂದಾಗಿ ಇನ್ನೊಂದು ರೀತಿಯ ಸಮಸ್ಯೆಗಳು ಉದ್ಭವಿಸಿವೆ.

51.​ಉದಾಹರಣೆಗೆ ಹೇಳುವುದಾದರೆ, ಪ್ರಮುಖ ಬಂಡವಾಳ ವೆಚ್ಚ ಮಾಡುವ ಇಲಾಖೆಗಳಲ್ಲಿ 2,70,695 ಕೋಟಿ ರೂಪಾಯಿಗಳಷ್ಟು ಕಾಮಗಾರಿಗಳನ್ನು ತೆಗೆದುಕೊಂಡು ಅನುದಾನ ಒದಗಿಸದೆ ಹೋಗಿದ್ದರು. ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಕೆಳಗೆ 1,66,426 ಕೋಟಿ ರೂಪಾಯಿಗಳಷ್ಟು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಇಷ್ಟು ಬೃಹತ್ ಮೊತ್ತದ ಕಾಮಗಾರಿಗಳಿಗೆ ಹಣ ಒದಗಿಸದೆ ಕಾಮಗಾರಿಗಳನ್ನು ತೆಗೆದುಕೊಂಡರೆ ಅವುಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ಲುಗಳನ್ನು ಪಾವತಿಸುವುದು ಹೇಗೆ? ಎಂಬ ಸಾಮಾನ್ಯ ತಿಳುವಳಿಕೆಯಾದರೂ ಇರಬೇಕಲ್ಲವೆ?

52.​ವಿದ್ಯುತ್ ಕಂಪನಿಗಳಿಗೆ ಬಾಕಿಯನ್ನು ಪಾವತಿಸುತ್ತಿಲ್ಲ ಎಂದು ಆರಗ ಜ್ಞಾನೇಂದ್ರ  ಹೇಳಿದ್ದಾರೆ. ವಾಸ್ತವ ಏನೆಂದರೆ, ಹಿಂದಿನ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯುತ್ ಕಂಪನಿಗಳ ಬಲವರ್ಧನೆ ಮಾಡುವಲ್ಲಿ ವಿಫಲವಾಗಿತ್ತು. 5,258 ಕೋಟಿ ರೂ. ಗಳಷ್ಟು ಗ್ರಾಮ ಪಂಚಾಯತಿಗಳ ಬಾಕಿ ವಿದ್ಯುತ್ ಬಿಲ್ಲುಗಳನ್ನು ರಾಜ್ಯ ಸರ್ಕಾರವೇ ಪಿ.ಸಿ.ಕೆ.ಎಲ್. ಮುಖಾಂತರ ಸಾಲ ಪಡೆದು ಪಾವತಿಸುತ್ತಿದೆ. ಇದರ ಜೊತೆ ಹಿಂದಿನ ಸರ್ಕಾರದ ವಿದ್ಯುತ್ ಕಂಪನಿಗಳಿಗೆ ನೀರಾವರಿ ಪಂಪ್‌ಸೆಟ್‌ಗಳಿಗೆ ಕೊಡಬೇಕಾದ ಸಹಾಯಧನವನ್ನು ಪಾವತಿಸದ ಕಾರಣ, ರಾಜ್ಯ ಸರ್ಕಾರವೇ 2024-25ನೇ ಸಾಲಿನಲ್ಲಿ 12,785 ಕೋಟಿ ರೂ. ಗಳ ಹಿಂದಿನ ವರ್ಷದ ಬಾಕಿಯನ್ನು ಪಾವತಿಸಲು ಪೂರಕ ಅಂದಾಜಿನಲ್ಲಿ 7,800 ಕೋಟಿ ಸೇರಿದಂತೆ ಒಟ್ಟಾರೆ 20,586 ಕೋಟಿ ರೂ. ಗಳ ಆರ್ಥಿಕ ನೆರವನ್ನು 2024-25 ನೇ ಸಾಲಿನಲ್ಲಿ ನಮ್ಮ ಸರ್ಕಾರ ನೀಡುತ್ತಿದೆ.

Related Articles

Back to top button