Belagavi NewsBelgaum NewsKannada NewsKarnataka News

*ಶಾಸಕ ಯತ್ನಾಳ್ ರನ್ನು ಹಾಡಿ ಹೊಗಳಿದ ಜಯಮೃತ್ಯುಂಜಯ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯತ್ನಾಳರಂತೆ ಮಾತನಾಡುವ ಗಟ್ಟಿ ಧ್ವನಿ ಕಾಂಗ್ರೆಸ್ ನಾಯಕರಲ್ಲಿಲ್ಲ. ಯತ್ನಾಳರಂತೆ ಮಾತನಾಡುವ ಧೈರ್ಯ ಶಕ್ತಿ ಎಲ್ಲರಿಗೂ ಬರಲಿ ಎಂದು ಬಸವ ಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದ್ದಾರೆ. 

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬರಲು ನಮ್ಮ‌ ಲಿಂಗಾಯತರ ಕೊಡುಗೆ ಬಹಳ ಇದೆ. ಲಿಂಗಾಯತರು ನಮಗೆ ಮತ ಹಾಕಿಲ್ಲ ಅಂತ ನೀವು ತಿಳಿದುಕೊಂಡಿದ್ದೀರಿ. ಆದರೆ ನಿಮ್ಮ‌ ಸರ್ಕಾರ ಬರಲು ನಮ್ಮ‌ ಸಮುದಾಯದ ಕೊಡುಗೆ ‌ಬಹಳ ಇದೆ. 2ಎ‌‌ ಮೀಸಲಾತಿ ಕೊಡಲು ಆಗದಿದ್ದರೆ ಲಿಂಗಾಯತರಿಗೆ ಒಬಿಸಿ ಮೀಸಲಾತಿಯನ್ನಾದರೂ ನೀಡಿ. ಇಷ್ಟೊಂದು ಕಾಡಿಸುವ ಸತಾಯಿಸುವ ಕೆಲಸ ಮಾಡಬೇಡಿ. ಕಡೆಯ ಪಕ್ಷ‌ ನಮಗೆ ಸ್ಪಂದಿಸುವ‌ ಕೆಲಸವನ್ನಾದರೂ ಮಾಡಿ. ನಮಗೆ ಕಾನೂನು ಅಡೆತಡೆಗಳ‌ ಸಬೂಬು ಹೇಳಬೇಡಿ ಸರ್ಕಾರ ಕರ್ತವ್ಯ ಪಾಲನೆ ಮಾಡಲಿ. ಕಳೆದ ಕೆಲ ವರ್ಷಗಳಿಂದ ಸರ್ಕಾರ ನಮ್ಮ ಕೂಗು ಕೇಳುತ್ತಿಲ್ಲ. ರಾಜ್ಯದ ಸಿಎಂ ಸಹ ಓರ್ವ ವಕೀಲರೇ ಆಗಿದ್ದಾರೆ ಹೀಗಾಗಿ ವಕೀಲರ ಮೂಲಕವೇ ಅವರ ಮನವೊಲಿಸಲು ಸೇರಿದ್ದೇವೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ‌ ಹೇಳಿದ್ದಾರೆ.‌

ಬೆಳಗಾವಿಯಲ್ಲಿದ್ದಾಗಲೇ ಸಿಎಂ ಅವರು ಸಭೆ ಕರೆಯುತ್ತೆನೆ ಎಂದು ಹೇಳಿದ್ದರು. ಆದರೆ ಈವರಗೆ ಸಿಎಂ ಸಭೆ ಕರೆದಿಲ್ಲ.‌ ನಮ್ಮ ಈ ಸಮಾವೇಶ ಮುಗಿಯುವುದರೊಳಗೆ ಸರ್ಕಾರ ದಿನಾಂಕ ಘೋಷಣೆ‌ ಮಾಡಬೇಕು. ಸಿಎಂ ಜೊತೆಗೆ ಭೇಟಿಗೆ ದಿನಾಂಕ‌ ನಿಗದಿ ಮಾಡಬೇಕು. ಸರ್ಕಾರಕ್ಕೆ‌ ನಾವು ಯಾವುದೇ ಗಡುವು ಕೊಡುವುದಿಲ್ಲ.‌ ಸರ್ಕಾರವೇ ನಮಗೆ ಮಾತು ಕೊಟ್ಟಿದೆ. ಇಂದು ಸರ್ಕಾರದ ವಿರುದ್ಧ ಹೇಗೆ ಪ್ರತಿಭಟಿಸಬೇಕು ಎಂದು ಚರ್ಚೆ ಮಾಡುತ್ತೇವೆ ಎಂದರು.‌

Home add -Advt

Related Articles

Back to top button