Kannada NewsKarnataka NewsLatestPolitics

*ಪ್ರಧಾನಿ ಮೋದಿ ಫೋಟೋ ಬಳಸದೆ ಅವರು ಪ್ರಚಾರ ಮಾಡಲಿ; ಕೆ.ಎಸ್.ಈಶ್ವರಪ್ಪ ಸವಾಲು*

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಡುವೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಜಟಾಪಟಿ ಶುರುವಾಗಿದೆ. ಈಶ್ವರಪ್ಪ ಮೋದಿ ಪೋಟೋ ಬಳಸಿ ಪ್ರಚಾರ ನಡೆಸುತ್ತಿರುವುದಕ್ಕೆ ಬಿ.ವೈ.ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಕೂಡ ಈಶ್ವರಪ್ಪ ವಿರುದ್ಧ ಸಿಡಿದೆದ್ದಿದ್ದಾರೆ.

ಇದೀಗ ಇದೇ ವಿಚಾರವಾಗಿ ಬಿಜೆಪಿ ಹಾಗೂ ಬಿ.ವೈ ರಾಘವೇಂದ್ರ ವಿರುದ್ಧ ಗುಡುಗಿರುವ ಈಶ್ವರಪ್ಪ, ನನಗೆ ಮೋದಿ ಫೋಟೋ ಬಳಸಬೇಡ ಎನ್ನಲು ಅವರು ಯಾರು/ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ವಿಶ್ವನಾಯಕ. ಅವರನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ. ನನ್ನನ್ನು ಯಾರೂ ತಡೆಯಲಾರರು. ಚುನಾವಣಾ ಆಯೋಗವಾಗಲಿ, ಕೋರ್ಟ್ ಆಗಲಿ ಈ ಬಗ್ಗೆ ಹೇಳಿದರೆ ಅದಕ್ಕೆ ನಾನು ಬದ್ಧ. ಆದರೆ ಬಿಜೆಪಿ ನಯಕರಾಗಲಿ, ಬಿ.ವೈ.ರಾಘವೇಂದ್ರ ಆಗಲಿ ಹೇಳಲು ಅವರು ಯಾರು? ಎಂದು ಕೇಳಿದರು.

ನನಗೆ ಮೋದಿ ಫೋಟೋ ಇಟ್ಟುಕೊಂಡು ಪ್ರಚಾರ ಮಾಡಬೇಡ ಎನ್ನುವುದಾದರೆ ಅವರು ಮೋದಿ ಫೋಟೋ ಇಲ್ಲದೇ ಪ್ರಚಾರ ನಡೆಸಲಿ. ಯಡಿಯೂರಪ್ಪನವರು ಶಿವಮೊಗ್ಗದಲ್ಲಿ ಮೋದಿ ಫೋಟೋ ಬಳಸದೇ ತಮ್ಮ ಮಗನನ್ನು ಗೆಲ್ಲಿಸುತ್ತಾರಾ? ಎಡಭಾಗದಲ್ಲಿ ವಿಜಯೇಂದ್ರ, ಬಲಭಾಗದಲ್ಲಿ ಬಿ.ವೈ.ರಾಘವೇಂದ್ರ ನಡುವೆ ತಾವಿರುವ ಫೋಟೋವನ್ನು ಹಾಕಿ ಚುನಾವಣಾ ಪ್ರಚಾರ ನಡೆಸಿಸಲಿ ಎಂದು ಸವಾಲು ಹಾಕಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button