Latest

*ಕಲ್ಯಾಣ ಮಂಟಪದಲ್ಲಿ ದುರಂತ: ಕರೆಂಟ್ ಶಾಕ್ ಹೊಡೆದು ನಾಲ್ಕುವರ್ಷದ ಮಗು ಸಾವು*

ಪ್ರಗತಿವಾಹಿನಿ ಸುದ್ದಿ: ಏರ್ ಕೂಲರ್ ನಿಂದ ವಿದ್ಯುತ್ ಪ್ರವಹಿಸಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಲ್ಯಾಣಮಂಟಪದಲ್ಲಿ ನಡೆದಿದೆ.

ಬಸವೇಶ್ವರ ನಗರದ ಕಲ್ಯಾಣ ಮಂಟಪವೊಂದರಲ್ಲಿ ಈ ದುರಂತ ಸಂಭವಿಸಿದೆ. ನಾಲ್ಕು ವರ್ಷದ ಶಿವಂ ಮೃತ ಬಾಲಕ. ಅಭಿಮಾನಿ ಕನ್ವೆನ್ ಶನ್ ಹಾಲ್ ನಲ್ಲಿ ಈ ಘಟನೆ ನಡೆದಿದೆ.

ಶಿವಂ ಕೆಂಪೇಗೌಡ ನಗರದ ನಿವಾಸಿ ಪ್ರದೀಪ್ ಹಾಗೂ ದೀಪಾ ದಂಪತಿ ಪುತ್ರ. ಸಂಬಂಧಿಕರ ಮದುವೆಗೆಂದು ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ತಾಯಿ ದೀಪಾಗೂ ಕರೆಂಟ್ ಶಾಕ್ ಹೊಡೆದು ಗಾಯಗೊಂಡಿದ್ದಾರೆ.

Home add -Advt

ಘಟನೆ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪ ಮಾಲೀಕ ದಿವಾಕರ್, ಮ್ಯಾನೇಜರ್ ಸಂತೋಷ, ಎಲೆಕ್ಟ್ರಿಷಿಯನ್ ಸತೀಶ್ ವಿರುದ್ಧ ದೂರು ದಾಖಲಾಗಿದೆ.

Related Articles

Back to top button