Latest

ಕಚೇರಿಗಳ ಸಮಯ ಬದಲಾವಣೆಗೆ ನಿರಾಕರಿಸಿದ ರಾಜ್ಯ ಸರ್ಕಾರ

 ಪ್ರಗತಿ ವಾಹಿನಿ ಸುದ್ದಿ; ಬೆಂಗಳೂರು: ತಾಪಮಾನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ನೀಡಲಾಗಿದ್ದ ಮನವಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ.

ಬೇಸಿಗೆಯ ಝಳ ಹೆಚ್ಚುತ್ತಿದ್ದು ತಾಪಮಾನ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳ ಕಾರ್ಯ ನಿರ್ವಹಣೆಯ ಅವಧಿಯನ್ನು ಬದಲಾಯಿಸಿ ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಕೆಲಸದ ಅವಧಿಯನ್ನು ನಿಗದಿ ಮಾಡುವಂತೆ ಸಂಘದಿಂದ ಮನವಿ ಮಾಡಲಾಗಿತ್ತು.

Home add -Advt

ವಿಶೇಷವಾಗಿ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಮೊದಲಾಗಿ ಬಿಸಿಲು ಹೆಚ್ಚಿರುವ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಸಮಯ ಬದಲಾವಣೆಗೆ ಕೋರಲಾಗಿತ್ತು.

ಆದರೆ ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರಸ್ಕರಿಸಿದ್ದು ದೆಹಲಿಯಲ್ಲಿ ಇಲ್ಲಿಗಿಂತ ಹೆಚ್ಚು ಉಷ್ಣತೆ ಇದೆ. ಆದರೆ ಅಲ್ಲಿ ಮೊದಲಿನ ವೇಳೆಯನ್ನೇ ಸರಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲಿಗಿಂತ ಕಡಿಮೆ ತಾಪಮಾನ ಇರುವ ಕರ್ನಾಟಕದ ಜಿಲ್ಲೆಗಳಿಗೆ ಯಾಕೆ ಸಮಯ ಬದಲಾವಣೆ ಮಾಡಬೇಕು ಎಂದು ಮರು ಪ್ರಶ್ನಿಸಿದೆ. ಸಮಯ ಬದಲಾವಣೆಯ ಮನವಿಯನ್ನು ತಳ್ಳಿಹಾಕಿದೆ.

ರೋಗಿಗೆ ಕಚ್ಚಿದ ಇಲಿ; ಇಬ್ಬರು ವೈದ್ಯರು ಸಸ್ಪೆಂಡ್

Related Articles

Back to top button