Kannada NewsLatest

ಕಾಶಿ ಕ್ಷೇತ್ರದಲ್ಲಿ ಹಾರನಹಳ್ಳಿ ಕೋಡಿಮಠದ ಶ್ರೀಗಳಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ; ವಾರಣಸಿ: ಕಾಶಿ ಕ್ಷೇತ್ರದಲ್ಲಿ ಜರುಗಿದ ಮಹಾಶಿವರಾತ್ರಿಯಲ್ಲಿ ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಶಿ ಜಗದ್ಗುರುಗಳು ಹಾರನಹಳ್ಳಿ ಕೋಡಿಮಠದ ಶ್ರೀಗಳು ಭವಿಷ್ಯದ ಮುಖಾಂತರ ಇಡೀ ದೇಶದಲ್ಲಿಯೇ ಹೆಸರುವಾಸಿಯಾಗಿದ್ದಾರೆ ಎಲ್ಲರಿಗಿಂತ ಹೆಚ್ಚಾಗಿ ಎಲ್ಲರನ್ನೂ ಪ್ರೀತಿಸುವ ಅವರಿಗೆ ಔದಾರ್ಯತೆ ಇವರಲ್ಲಿ ನಾವು ನೋಡಬಹುದಾಗಿದೆ. ಇವರ ಸಾಧನೆ ಇನ್ನೂ ಮುಂದುವರಿಯಲಿ ಎಂದರು.

ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೇಶ್ವರ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಿ, ಕಾಶಿ ಪೀಠ ಇವತ್ತು ಇಡೀ ವಿಶ್ವದಲ್ಲಿ ಹೆಸರಾಗಿದೆ. ಇದಕ್ಕೆ ಕಾರಣ ಸಿದ್ಧಾಂತ ಶಿಖಾಮಣಿಯನ್ನು ಹದಿನೆಂಟು ಭಾಷೆಗೆ ಮಾಡಿರುವ ಪ್ರಭಾವ ಎಂದರು.

ಹಾರನಹಳ್ಳಿ ಕೋಡಿಮಠದ ಶ್ರೀಗಳು ಮಾತನಾಡಿ ಕಾಶಿ ಪೀಠದ ಚಿತ್ರಣವನ್ನೇ ಸದ್ಯದ ಜಗದ್ಗುರುಗಳು ಬದಲಾಯಿಸಿದ್ದಾರೆ. ಇವತ್ತು ಎಲ್ಲರೂ ಸಮಾಜವನ್ನು ಕಟ್ಟುವಲ್ಲಿ ವಿಶೇಷ ಪಾತ್ರವನ್ನು ವಹಿಸಬೇಕು ಎಂದರು.

ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಖ್ಯಾತ ವಾಸ್ತುತಜ್ಞ ಶ್ರೀಧರ ಪರಿಮಳಾಚಾರ್ಯ ಅವರು ತಮ್ಮ 60ನೇ ವರ್ಷದ ಪ್ರಯುಕ್ತ ಶ್ರೀಗಳಿಂದ ಆಶೀರ್ವಾದವನ್ನು ಪಡೆದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button