
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಮಾರು 25 ವರ್ಷಗಳ ಬೇಡಿಕೆಯಾಗಿದ್ದ ಹಿರೇಬಾಗೇವಾಡಿಯ ಗುಳ್ಳವನ ಕೆರೆಯ ಅಭಿವೃದ್ಧಿಯ ಕಾಮಗಾರಿಗಳು ಅಂದಾಜು 2 ಕೋಟಿ ರೂ ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಪರಿಶೀಲನೆ ನಡೆಸಿದರು.

ಈ ಕೆರೆಯು ವಾಕಿಂಗ್ ಟ್ರ್ಯಾಕ್, ಸುತ್ತಮುತ್ತ ದೀಪಗಳ ಅಳವಡಿಕೆ, ಸಾರ್ವಜನಿಕ ಆಸನಗಳ ವ್ಯವಸ್ಥೆ, ಬಟ್ಟೆ ಹಾಗೂ ವಾಹನಗಳನ್ನು ತೊಳೆಯಲು ಮತ್ತು ಗಣೇಶ ವಿಸರ್ಜನೆಗೆ ಪ್ರತ್ಯೇಕ ಭಾಗಗಳಾಗಿ ವಿಂಗಡಿಸಲಾಗಿದೆ.
ಕೆರೆಯ ಅಭಿವೃದ್ಧಿಗೆ ಗ್ರಾಮಸ್ಥರು ಹರ್ಷವನ್ನು ವ್ಯಕ್ತಪಡಿಸಿದ್ದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.