Kannada NewsKarnataka News

 ಸಮುದಾಯ ಭವನ ಜೀರ್ಣೋದ್ಧಾರಕ್ಕೆ ಸಹಾಯಧನ ವಿತರಿಸಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದಲ್ಲಿ ಬೀರದೇವರ ಸಮುದಾಯ ಭವನ ಜೀರ್ಣೋದ್ಧಾರದ ಸಲುವಾಗಿ ಶಾಸಕರ ಅನುದಾನದಲ್ಲಿ  3 ಲಕ್ಷ ರೂ, ಒದಗಿಸಲಾಗುತ್ತಿದ್ದು, ಅದರ ಮೊದಲ ಕಂತಿನ ಚೆಕ್ ನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ಹಸ್ತಾಂತರಿಸಿದರು.
 
 ಮೊದಲನೆ ಕಂತಿನಲ್ಲಿ 1.65 ಲಕ್ಷ ರೂ. ನೀಡಲಾಗಿದ್ದು, ಚೆಕ್ ನ್ನು ದೇವಸ್ಥಾನದ ಕಮೀಟಿಯವರಿಗೆ ಶಾಸಕರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮೃಣಾಲ ಹೆಬ್ಬಾಳಕರ್, ಶ್ರೀ ಬೀರೇಶ್ವರ ದೇವಸ್ಥಾನದ ಕಮೀಟಿಯ ಅಧ್ಯಕ್ಷ ಲಕ್ಷ್ಮಣ ಮಲ್ಲವಗೋಳ, ಸದಸ್ಯರಾದ ಮಾರುತಿ, ರಾಯಣ್ಣ, ಭಾಗಣ್ಣ, ಭರಮಾ, ರಾಜು, ವಿಠ್ಠಲ, ಪ್ರಕಾಶ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button