Kannada NewsKarnataka News

ಶಿವರಾತ್ರಿ ನಿಮಿತ್ತ ವಿವಿಧೆಡೆ ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ

 

ಪ್ರಗತಿವಾಹಿನಿ ಸುದ್ದಿ,​ ಬೆಳಗಾವಿ: ಮಹಾ ಶಿವರಾತ್ರಿಯ ಪ್ರಯುಕ್ತ ​ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಕುಟುಂಬ ಸಮೇತ ವಿವಿಧ ಶಿವದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. 
 ಬೆಳಗಾವಿಯ ಶ್ರೀ ಕಪಿಲೇಶ್ವರ ದೇವಸ್ಥಾನ​ ಹಾಗೂ ರಾಜಹಂಸಗಡದ ಸಿದ್ದೇಶ್ವರ ಗುಡಿಗೆ ತೆರಳಿ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ​ಕಪಿಲೇಶ್ವರ ಮಂದಿರಕ್ಕೆ ಕುಟುಂಬ ಸಮೇತ ತೆರಳಿದ ಲಕ್ಷ್ಮೀ ಹೆಬ್ಬಾಳಕರ್, ​ ಕ್ಷೇತ್ರದ ಹಾಗೂ ನಾಡಿನ ಏಳಿಗೆಗಾಗಿ ಪ್ರಾರ್ಥಿಸಿ ಅನ್ನಪ್ರಸಾದಕ್ಕೆ ವಯಕ್ತಿಕ ದೇಣಿಗೆಯನ್ನು ನೀಡಿದರು.
​ನ್ನರಾಜ ಹಟ್ಟಿಹೊಳಿ ಹಾಗೂ ಮೃಣಾಲ ಹೆಬ್ಬಾಳಕರ್  ರಾಜಹಂಸಗಡ ಕೋಟೆಯಲ್ಲಿರುವ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ, ಪೂಜೆಯನ್ನು ಕೈಗೊಂಡ​ರು. ಕೋಟೆಯ ಅಭಿವೃದ್ಧಿಯ ಕಾರ್ಯಗಳ ಪ್ರಗತಿಯ​ನ್ನು ಸಹ​ ಪರಿಶೀಲನೆ ನಡೆಸಿ, ಅಲ್ಲಿನ ನಿವಾಸಿಗಳ ಹಾಗೂ ಕ್ಷೇತ್ರದ ಮುಖಂಡರೊಂದಿಗೆ, ಛತ್ರಪತಿ ಶಿವಾಜಿ ಮಹಾರಾಜರ ಬೃಹದಾಕಾರದ ‌ಮೂರ್ತಿಯ ಲೋಕಾರ್ಪಣೆಯ ಕಾರ್ಯಕ್ರಮದ ಬಗ್ಗೆ ಸುಧೀರ್ಘ ಕಾಲ ಚ​ರ್ಚೆ ನಡೆಸಿದರು.​
https://pragati.taskdun.com/who-is-ramesh-jarakiholi-you-are-flirting-with-fire-be-careful-channaraja-shouted/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button