
ಬೆಳಗಾವಿ ತಾಲೂಕಾ ಗಾಣಿಗ ಅಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ
ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ – ಗಾಣಿಗ ಸಮುದಾಯದವವರಿಗೆ ಅವಶ್ಯಕವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಹಾಯ ಮಾಡುತ್ತೇನೆ. ಸರಕಾರದಿಂದ ದೊರೆಯುವ ಎಲ್ಲ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಹೇಳಿದರು.



ಕಾರ್ಯಕ್ರಮದ ಸಂದರ್ಭದಲ್ಲಿ ಸಿದ್ದಾನಂದ ಗುರೂಜಿ ಜ್ಞಾನ ಮಂದಿರ, ಗಿರೀಶ್ ಆನಂದ ಗುರೂಜಿ, ಸದ್ಗುರು ನಾಗೇಂದ್ರ ಮಹಾಸ್ವಾಮಿಗಳು, ಶಿವಮೂರ್ತಿ ದೇವರು, ಭೀಮ ಅಜ್ಜನವರು, ಉಳವಪ್ಪ ಅಜ್ಜನವರು, ಸಿ ಸಿ ಪಾಟೀಲ, ನಾಜರೀನ್ ಕರಿದಾವಲ್, ಶ್ರೀಕಾಂತ್ ಮದುಭರಮಣ್ಣವರ, ಫಕೀರಪ್ಪ ಶಿವರುದ್ರಪ್ಪ ಗಾಣಗಿ, ರಾಜು ಟೋಪನ್ನವರ, ಶೋಭಾ ಗಾಣಗಿ, ಗೂಳಪ್ಪ ಹೊಸಮನಿ, ಅಡಿವೇಶ ಇಟಗಿ, ಸ್ವಾತಿ ಇಟಗಿ, ಈಶ್ವರ ಜಮಖಂಡಿ, ಫಕೀರಪ್ಪ ಗಾಣಗಿ, ತಮ್ಮಣ್ಣ ಗಾಣಗಿ, ಗಂಗಾಧರ್ ಅಗಸಿಮನಿ, ಮಹೇಶ ಗಾಣಗಿ, ಸುರೇಶ ಇಟಗಿ, ಈರಪ್ಪ ಈಟಿ, ರವಿ ಗಾಣಗಿ ಮುಂತಾದವರು ಉಪಸ್ಥಿತರಿದ್ದರು.