Kannada NewsKarnataka NewsLatest

KAT ಪೀಠ ನಿರ್ಮಾಣಕ್ಕೆ ಬೆಳಗಾವಿಯಲ್ಲಿ ನಿವೇಶನ ಮಂಜೂರು

ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಪೀಠ ನಿರ್ಮಾಣಕ್ಕೆ ನಿವೇಶನ ಮಂಜೂರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಪೀಠಕ್ಕೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮದ ರಿ.ಸ.ನಂ.189/ಅ2 ದಲ್ಲಿರುವ 01 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ.
 ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ  ನ್ಯಾಯಾಂಗ ಸದಸ್ಯರಾದ ಟಿ.ನಾರಾಯಣಸ್ವಾಮಿ ಮತ್ತು ವಿಲೇಖನಾಧಿಕಾರಿಗಳಾದ ಕೆ.ಎಸ್.ನಾಗರತ್ನರವರಿಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಉಚಗಾಂವ ಕಂದಾಯ ನಿರೀಕ್ಷಕರಾದ ಉದಯ ಖಾತೆದಾರ ಅವರು ಮಾರ್ಚ್ 07 ರಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಭೂ ಸ್ವಾದೀನ ಪತ್ರ(ಕಬ್ಜ ಪಾವತಿ) ಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸಂಪತ್ ನೇಮಗೌಡ, ಸಂತೋಷ ಶಹಪುರ, ಎಸ್.ಎನ್.ಗೌಡರ್ ರವರುಗಳು ಹಾಗೂ ಬೆಳಗಾವಿ ವಕೀಲರ ಸಂಘದ ಉಪಾಧ್ಯಕ್ಷರಾದ ಸುದೀರ ಚವ್ಹಾಣ, ಜಂಟಿ ಕಾರ್ಯದರ್ಶಿಗಳಾದ ಬಂಟಿ ಕಪಾಹಿ, ಮ್ಯಾನೆಜಿಂಗ್ ಕಮೀಟಿ ಸದಸ್ಯರಾದ ಇರ್ಫಾನ್ ಬಯಾಲ್, ಎನ್.ಆರ್.ಪಾಟೀಲ್, ಗ್ರಾಮ ಲೆಕ್ಕಾಧಿಕಾರಿಗಳು ಹಿಂಡಲಗಾ, ಭೂಮಾಪಕರು ಅನಂತ ಶಿಂಧೆ ಉಪಸ್ಥಿತರಿದ್ದರು.

ಕಿತ್ತೂರಿನ ಚೆನ್ನಮ್ಮನ ಕೋಟೆಗೆ ರಾಜ್ಯಪಾಲರ ಭೇಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button