GIT add 2024-1
Laxmi Tai add
Beereshwara 33

2 ಗಂಟೆ ಕೌನ್ಸಿಲಿಂಗ್ ಮಾಡಿದರೆ ಪತ್ನಿ ಸರಿ ಹೋಗ್ತಾಳೆ, ಅವಳು ಕೆಟ್ಟವಳಲ್ಲ – ಕೆ.ಕಲ್ಯಾಣ್

ಕೆಲವೇ ಸಮಯದಲ್ಲಿ ಪತ್ರಿಕಾಗೋಷ್ಠಿ ನಡೆಸಲಿರುವ ಕಲ್ಯಾಣ್

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನನ್ನ ಪತ್ನಿ ಬುದ್ದಿವಂತಳಿದ್ದಾಳೆ. ಅವಳು ಕೆಟ್ಟವಳಲ್ಲ. ಆದರೆ ಯಾರದ್ದೋ ಪಿತೂರಿಯಿಂದ ಸಮಸ್ಯೆಯಾಗಿದೆ. 2 ಗಂಟೆಗಳ ಕಾಲ ಮನಶ್ಯಾಸ್ತ್ರಜ್ಞರು ಕೌನ್ಸಲಿಂಗ್ ಮಾಡಿದರೆ ಅವಳು ಸರಿಯಾಗುತ್ತಾಳೆ ಎಂದು ಖ್ಯಾತ ಗೀತ ಸಾಹಿತಿ ಕೆ.ಕಲ್ಯಾಣ ಹೇಳಿದ್ದಾರೆ.

 ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ 10.30ಕ್ಕೆ ಪತ್ರಿಕಾಗೊಷ್ಠಿ ನಡೆಸಲಿರುವ ಕಲ್ಯಾಣ್, ಎಲ್ಲ ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದಾರೆ. 14 ವರ್ಷ ದಾಂಪತ್ಯ ಜೀವನ ನಡೆಸಿದ್ದೇವೆ. ಎಲ್ಲರ ದಾಂಪತ್ಯದಂತೆ ಸಣ್ಣ ಪುಟ್ಟ ಮನಸ್ತಾಪಗಳಿದ್ದವು. ಆದರೆ ಕೆಲವರು ಆಕೆಯ ಮನಸ್ಸನ್ನು ಕೆಡಿಸಿದ್ದಾರೆ. ಅವಳನ್ನು, ಅವಳ ತಂದೆ -ತಾಯಿಯರನ್ನು ನನ್ನ ಹಾಗೂ ನಮ್ಮೆಲ್ಲ ಸಂಬಂಧಿಕರಿಂದ ದೂರ ಮಾಡಿದ್ದಾರೆ ಎಂದು ಅವರು ಹೇಳಿದರು.

ದೇವರು, ನ್ಯಾಯಾಲಯ, ಪೊಲೀಸರು ಎಲ್ಲರೂ ಇದ್ದಾರೆ. ಹಾಗಾಗಿ ಸಮಸ್ಯೆ ಬಗೆಹರಿಯುತ್ತದೆ ಎನ್ನುವ ವಿಶ್ವಾಸವಿದೆ. ಇದೇನು ದೊಡ್ಡ ಸಮಸ್ಯೆ ಎಂದು ನನಗೆ ಅನಿಸುವುದಿಲ್ಲ. ಸ್ವಲ್ಪ ಕೌನ್ಸಿಲಿಂಗ್ ಮಾಡಿದರೆ ಅವಳ ಮನಸ್ಸನ್ನು ಪರಿವರ್ತಿಸಬಹುದು ಎಂದು ಕಲ್ಯಾಣ ಹೇಳಿದರು.

Emergency Service

ಈಗಾಗಲೆ ವರದಿಯಾಗಿರುವಂತೆ ತಮ್ಮ ಪತ್ನಿ ಹಾಗೂ ಅವಳ ತಂದೆ- ತಾಯಿಯನ್ನು ಕೆಲವರು ಅಪಹರಿಸಿದ್ದಾರೆ ಎಂದು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕಲ್ಯಾಣ ಸೆ.30ರಂದು ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಕಲ್ಯಾಣ ಪತ್ನಿ ಅಶ್ವಿನಿಯನ್ನು ಕರೆಸಿ ನಿನ್ನೆ 4 ಗಂಟೆ ಕಾಲ ಮಾತನಾಡಿದ್ದಾರೆ. ಇಂದೂ ವಿಚಾರಣೆ ಮುಂದುವರಿಯಲಿದೆ.

ಈ ಮಧ್ಯೆ ಕಲ್ಯಾಣ ಅವರ ಅಣ್ಣ ಮತ್ತು ಅತ್ತಿಗೆ ಕೂಡ ರಾಜಿ ಮಾಡಿಸಲು ಬೆಂಗಳೂರಿನಿಂದ ಧಾವಿಸಿದ್ದಾರೆ.

ತುರ್ತು ಪತ್ರಿಕಾಗೋಷ್ಠಿ ಕರೆದ ಕೆ.ಕಲ್ಯಾಣ್

ನನ್ನ ಹೆಂಡತಿ ಕಿಡ್ನ್ಯಾಪ್ ಆಗಿದ್ದಾಳೆ ಎಂದ ಪ್ರೇಮಕವಿ; ಉಲ್ಟಾ ಹೊಡೆದ ಪತ್ನಿ

Bottom Add3
Bottom Ad 2