
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ನೂತನ ಉದ್ಯಾನವನಗಳ (ಗಾರ್ಡನ್ಸ್) ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಚಾಲನೆಯನ್ನು ನೀಡಿದರು.

ಇಂದು ಸಮರ್ಥ ಕಾಲೋನಿ, ಸಾಯಿನಂದನ್ ರೆಸಿಡೆನ್ಸಿ, ಡ್ರೈವರ್ಸ್ ಕಾಲೋನಿ, ಲಿಂಗರಾಜ ಕಾಲೋನಿ ಪ್ರದೇಶಗಳಲ್ಲಿ ನೂತನವಾಗಿ ಉದ್ಯಾನವನ (ಗಾರ್ಡನ್) ಹಾಗೂ ಕಾಂಪೌಂಡ್ ವಾಲ್ ಗಳ ನಿರ್ಮಾಣ ಮತ್ತು ಸಹ್ಯಾದ್ರಿ ನಗರ ಉದ್ಯಾನವನದಲ್ಲಿ ಸುಮಾರು ಇಪ್ಪತೈದು ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಅಂಬೇಡ್ಕರ್ ಭವನ ನಿರ್ಮಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಕಾಮಗಾರಿಗಳ ಚಾಲನೆಯ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.