Belagavi NewsBelgaum NewsKannada NewsKarnataka NewsNationalPolitics

*ಜಾತಿಗಣತಿ ಅಧಿವೇಶನದಲ್ಲಿ ಚರ್ಚೆ ಆಗಲಿ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಾತಿಗಣತಿಯ ಅಂಕಿ ಅಂಶಗಳ ಆಧಾರದ ಮೇಲೆ ಸದನದಲ್ಲಿ ಚರ್ಚೆ ಆಗಬೇಕು. ಆ ನಿಟ್ಟಿನಲ್ಲಿ ಮೂರು ದಿನ ವಿಶೇಷ ಅಧಿವೇಶನ ಕರೆಯಬೇಕು. ಜಾತಿಗಣತಿಯಲ್ಲಿ ಏನು ಇದೆ ಎಂಬುವುದು ರಾಜ್ಯಕ್ಕೆ ಸಹ ಗೊತ್ತಾಗಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು. 

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಾತಿಗಣತಿಯ ಅಧ್ಯಯನ ಮಾಡಲು ನಮಗೂ ಹೇಳಿದ್ದಾರೆ. ಎಪ್ರಿಲ್ ‌ 17ಕ್ಕೆ ಅಂತಿಮವಾಗಿ ತೀರ್ಮಾನ ಆಗಲಿದೆ. ಅದರಲ್ಲಿ ಏನಿದೆ ಅಂತಾ ನಮಗೂ ಗೊತ್ತಿಲ್ಲ ಎಂದರು.

ಜಾತಿಗಣತಿ ಜನರ ಪ್ರಗತಿಗಾಗಿ ಜಾರಿ ಮಾಡುತ್ತಿದ್ದೇವೆ. ಜಾತಿ ಗಣತಿಯನ್ನ ಈ ವರ್ಷ ಕೇಂದ್ರ ಸರ್ಕಾರ ಮಾಡುತ್ತಿದೆ. ಜನರ ಸ್ಥಿತಿಗತಿ ಅಧ್ಯಯನ ವರದಿ ಮಾಡಿದ್ದೇವೆ‌. ಇದಕ್ಕೆ ಯಾರು ವಿರೋಧ ಮಾಡೋ ಅವಶ್ಯಕತೆ ಇಲ್ಲ. ವರದಿಯನ್ನು ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ. ಮೂರು ದಿನ ವಿಶೇಷ ಅಧಿವೇಶನ ಕರೆದು ಸದನದಲ್ಲಿ ಚರ್ಚೆ ಮಾಡಬೇಕು ಎಂದರು.

ಅಂಕಿ ಅಂಶಗಳ ಆಧಾರದ ಮೇಲೆ ಸದನದಲ್ಲಿ ಚರ್ಚೆ ಆಗಬೇಕು. ಜಾತಿಗಣತಿ ಹಿಂದಿನ ಸರ್ಕಾರ ಮಾಡಬೇಕಿತ್ತು ಮಾಡಲಿಲ್ಲ, ಮಧ್ಯ ಐದು ವರ್ಷ ನಮ್ಮ ಇರಲಿಲ್ಲ ಬೇರೆ ಬೇರೆ ಕಾರಣಗಳಿಂದ ವರದಿ ಮಂಡನೆ ಆಗಲಿಲ್ಲ. ನಮ್ಮ ಸರ್ಕಾರದ ಪ್ರಣಾಳಿಕೆಯಂತೆ ನಾವು ವರದಿ ಮಂಡನೆ ಮಾಡುತ್ತೇವೆ. ಬಿಡಗಡೆಯಾದ ಅಂಕಿ ಅಂಶಗಳು ಕರೆಕ್ಟ ಇವೆ, ಸೋರಿಕೆ ಅನೋ ಪ್ರಶ್ನೆ. ಎಂದಿಲ್ಲ ಒಂದು ದಿನ ಸತ್ಯ ಹೊರಗೆ ಬರುತ್ತೆ. ವರದಿ ರಾಜಕೀಯ ಉಪಯೋಗ ಆಗಲಿದೆ ಎಂದು ನಾವು ಭಾವಿಸಿಲ್ಲ. ಚುನಾವಣೆ ಗೆಲ್ಲುವ ವ್ಯವಸ್ಥೆಯೇ ಬೇರೆ, ಇದೇ ಬೇರೆ ಇದೆ ಎಂದರು.

Home add -Advt

ಜನಾಕ್ರೋಶ ಯಾತ್ರೆ ಡೈವರ್ಟ್ ಮಾಡೋಕೆ ಜಾತಿ ಗಣತಿ ವರದಿ ಬಿಡುಗಡೆ  ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಇದು ಶಾಶ್ವತವಾದ ಸರ್ವೇ, ಬಿಜೆಪಿ ಒಂದೆರೆಡು ದಿನದ ಹೋರಾಟ ಟೆಂಪರವರಿ ಇರುತ್ತೆ. ಜಾತಿ ಗಣತಿ ವೈಜ್ಞಾನಿಕವಾಗಿ ಆಗಿಲ್ಲ ಅನೋದನ್ನ ಸದನದಲ್ಲಿ ಚರ್ಚೆ ಮಾಡಲಿ.‌ ರಾಜ್ಯದ ಜನತೆಗೆ ಎಲ್ಲವೂ ಗೊತ್ತಾಗಲಿ. ಸರ್ವೇಯನ್ನು ಪಕ್ಷದ ಕಾರ್ಯಕರ್ತರು ಮಾಡಿಲ್ಲ, ಬೇರೆ ಬೇರೆ ಸಮಾಜದ ಟೀಚರ್ ಗಳು ಸರ್ವೇಯಲ್ಲಿ ಭಾಗಿಯಾಗಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Related Articles

Back to top button