*ಮಚ್ಚೆ ಗ್ರಾಮದ ರಾಯಣ್ಣ ಮೂರ್ತಿಗೆ ಅಪಮಾನ..? ಕಮಿಷನರ್ ಪ್ರತಿಕ್ರಿಯೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ರಾಯಣ್ಣ ಮೂರ್ತಿ ಮೇಲೆ ಮಸಿ ಹಚ್ಚಲಾಗಿದೆಯಾ ಅಥವಾ ಮರದ ದ್ರವ ಬಿದ್ದಿದ್ದೆಯಾ ಎಂದು ತಿಳಿಯಲು ತನಿಖೆ ಕೈಕೊಳ್ಳಾಗಿದೆ ಎಂದು ಪೊಲೀಸ್ ಕಮಿಷರನ್ ಭೂಷಣ್ ಬೋರಸೆ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ರಾತ್ರಿ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಬಂದಿತ್ತು. ಮಚ್ಚೆ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಮೇಲೆ ಏನು ಹಾಕಿದ್ದಾರೆ ಅಂತಾ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇವೆ. ಎರಡು ದಿನಗಳ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ಮಾಡುತ್ತಿದ್ದೇವೆ. ಘಟನೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದೇವೆ. ಅದು ಮಸಿ ಅಲ್ಲ ಅಂಟಿನಂತಹ ದ್ರಾವಣವಿದೆ ಎಂದು ಗೊತ್ತಾಗುತ್ತಿದೆ. ಆದರು ಮರದ ಎಲೆಗಳನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ರಿಪೋರ್ಟ್ ಬಂದ ಮೇಲೆ ಸತ್ಯ ಗೊತ್ತಾಗಲಿದೆ.
ಸದ್ಯ ಮಚ್ಚೆ ಗ್ರಾಮ ಹಾಗೂ ಸಂಗೊಳ್ಳಿ ರಾಣ್ಣ ಮೂರ್ತಿ ಇರುವ ಸ್ಥಳದಲ್ಲಿ ಅಗತ್ಯ ಪೊಲೀಸ್ ಬಂದೋಸ್ತ ಮಾಡಿದ್ದೇವೆ ಎಂದು ತಿಳಿಸಿದರು.



