Latest

ಮಹಾ ಸರಕಾರಿ, ಅನುದಾನಿತ ಕಚೇರಿಗಳ ಫೋನ್ ಕರೆಯಲ್ಲಿ ಇನ್ನುಮುಂದೆ ‘ಹಲೋ’ಗೆ ವಿದಾಯ; ಬದಲಾಗಿ ‘ವಂದೇ ಮಾತರಂ’ ಕಡ್ಡಾಯ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಸರಕಾರಿ ಕಚೇರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು ಸಾರ್ವಜನಿಕರ ಕರೆ ಸ್ವೀಕರಿಸುವಾಗ ಅಥವಾ ಕರೆ ಮಾಡುವಾಗ ಇನ್ನು ಮುಂದೆ ‘ಹಲೋ’ ಎನ್ನುವ ಬದಲು ಕಡ್ಡಾಯವಾಗಿ ‘ವಂದೇ ಮಾತರಂ’ ಎನ್ನಲು ಮಹಾರಾಷ್ಟ್ರ ಸರಕಾರ ಸೂಚಿಸಿದೆ.

ಈ ಕುರಿತು ಮಹಾರಾಷ್ಟ್ರ ಸರಕಾರ ಶನಿವಾರ ತನ್ನ ನಿರ್ಣಯ ಪ್ರಕಟಿಸಿದೆ. ಮಹಾರಾಷ್ಟ್ರ ರಾಜ್ಯಾದ್ಯಂತ ಈ ಅಭಿಯಾನಕ್ಕೆ ಭಾನುವಾರವೇ ಚಾಲನೆ ದೊರೆತಿದೆ.

‘ವಂದೇ ಮಾತರಂ’ ಬಳಸುವಂತೆ ಜಾಗೃತಿ ಮೂಡಿಸುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಸರಕಾರ ಅಧಿಕಾರಿಗಳಿಗೆ ಸೂಚಿಸಿದೆ.

ಸಿಎಂ ಅರವಿಂದ್ ಕೇಜ್ರಿವಾಲ್ ಮೇಲೆ ಖಾಲಿ ನೀರಿನ ಬಾಟಲ್ ಎಸೆದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button