Karnataka News

*ಬೀದರ್ ಬಳಿಕ ಮಂಗಳೂರಿನಲ್ಲಿಯೂ ಹಾಡ ಹಗಲೇ ಬ್ಯಾಂಕ್ ದರೋಡೆ; ಬಂದೂಕು ಹಿಡಿದು ಸಿಬ್ಬಂದಿ ಬೆದರಿಸಿ ಚಿನ್ನಾಭರಣ ಲೂಟಿ*

ಪ್ರಗತಿವಾಹಿನಿ ಸುದ್ದಿ; ಬೀದರ್ ಬಳಿಕ ಇದೀಗ ಮಂಗಳೂರಿನಲ್ಲಿಯೂ ಬ್ಯಾಂಕ್ ದರೋಡೆ ಮಾಡಿರುವ ಘಟನೆ ನಡೆದಿದೆ. ಹಾಡ ಹಗಲೇ ದರೋಡೆಗೋರರ ಗ್ಯಾಂಗ್ ಬ್ಯಾಂಕ್ ಗೆ ನುಗ್ಗಿ ಬಂದೂಕು ಹಿಡಿದು ಸಿಬ್ಬಂದಿಗಳನು ಬೆದರಿಸಿ ಹಣ ಚಿನ್ನಾಭರಣ ಲೂಟಿಡಿರುವ ಘಟನೆ ಮಂಗಳೂರಿನ ಉಳ್ಳಾಲ ಬಳಿಯ ಕೋಟೆಕಾರು ಬ್ಯಾಂಕ್ ನಲ್ಲಿ ನಡೆದಿದೆ.

ಮುಸುಕುಧಾರಿಗಳು ಬ್ಯಾಂಕ್ ಗೆ ನುಗ್ಗಿ 10-12 ಕೋಟಿ ಚಿನ್ನಾಭರನ, ಹಣ ದೋಚಿ ಪರಾರಿಯಾಗಿದ್ದಾರೆ. ಹಣವನ್ನು ಚೀಲದಲ್ಲಿ ತುಂಬಿಕೊಂಡು ಕಾರಿನಲ್ಲಿ ಐವರು ದರೋಡೆಕೋರರು ತೆರಳಿದ್ದು, ಹಾಡ ಹಗಲೇ ನಡೆದಿರುವ ಈ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ.

ಇಂದು ಮಂಗಳೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಪೊಲೀಸರು ಸಿಎಂ ಭದ್ರತೆಗೆ ತೆರಳಿದ್ದ ವೇಳೆಯೇ ಇತ್ತ ಬ್ಯಾಂಕ್ ದರೋಡೆ ನಡೆದಿದೆ.

Home add -Advt

Related Articles

Back to top button