Latest

ದೋಣಿ ದುರಂತ ಪ್ರಕರಣ; ಮೃತದೇಹಗಳು ಪತ್ತೆ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿ ನಾಪತ್ತೆಯಾಗಿದ್ದ 6 ಮೀನುಗಾರರ ಮೃತದೇಹ ಪತ್ತೆಯಾಗಿದೆ.

ಕೋಸ್ಟ್ ಗಾರ್ಡ್ ಹಾಗೂ ಸ್ಥಳೀಯ ಮೀನುಗಾರರ ಕಾರಾಚರಣೆಯಿಂದ ನಿನ್ನೆ ಇಬ್ಬರ ಶವ ಹೊರತೆಗೆಯಲಾಗಿತ್ತು. ಇದೀಗ ಇನ್ನುಳಿದ ನಾಲ್ವರ ಶವ ಕೂಡ ಪತ್ತೆಯಾಗಿದೆ.

ಬೋಳಾರದ ಶ್ರೀರಕ್ಷಾ ಮೀನುಗಾರಿಕಾ ಬೋಟ್ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಬೋಟ್ ನಲ್ಲಿದ್ದ 22 ಜನರಲ್ಲಿ 6 ಜನರು ನಾಪತ್ತೆಯಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button