Kannada NewsKarnataka NewsUncategorized

ಪಟ್ಟಣ ಪಂಚಾಯಿತಿ ಸದಸ್ಯರು ಸೇರಿ ಹಲವರು ಬಿಜೆಪಿಗೆ

ಬೋರಗಾವ ಪಟ್ಟಣ ಪಂಚಾಯಿತಿಯ ಸದಸ್ಯರು ಬಿಜೆಪಿಗೆ ಸೇರ್ಪಡೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ನಿಪ್ಪಾಣಿ: ತಾಲೂಕಿನ ಬೋರಗಾವ ಪಟ್ಟಣ ಪಂಚಾಯತನ ಸದಸ್ಯರಾದ ಶರದ ಜಂಗಟೆ, ದಿಗಂಬರ ಕಾಂಬಳೆ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಎಲ್ಲ ಕಾರ್ಯಕರ್ತರನ್ನು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಬರಮಾಡಿಕೊಂಡರು.
ಶರದ ಜಂಗಟೆ ಮುಂದಾಳತ್ವದಲ್ಲಿ ಭರಮಾ ಕುಡಚೆ, ಭರತ ಜಂಗಟೆ, ರಾಜು ಲಟಲಟೆ, ಭೂಪಾಲ ಮಹಾಜನ, ಮಹಾವೀರ ಚೋಕಾವೆ, ಪಾಂಡುರಂಗ ಮುಸಳೆ, ಅಜಿತ ಕಡೋಲೆ, ನಿತೀನ ಮಡಿವಾಳ, ಭರತ ಚೋಕಾವೆ, ತುಷಾರ್ ಕಾಂಬಳೆ, ಪ್ರವೀನ ಸಂಗುಡಗೆ, ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ’ಕಾರ್ಯಕರ್ತರೇ ಬಿಜೆಪಿಗೆ ಬಲಿಷ್ಠ ಶಕ್ತಿ. ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಯೋಜನೆಗಳನ್ನು ಮೆಚ್ಚಿ ಇತರ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ. ಕಾರ್ಯಕರ್ತರ ಪ್ರೋತ್ಸಾಹನ, ಸಲಹೆ, ಮಾರ್ಗದರ್ಶನ ಹಾಗೂ ಜನತೆಯ ಆಶಿರ್ವಾದದಿಂದ ನಮಗೆ ೨ ಸಾವಿರ ಕೋಟಿ ರೂ. ಗೂ ಅಧಿಕ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ’ ಎಂದರು.

https://pragati.taskdun.com/vidhanasabha-electioncongresscandidates6th-list/

Home add -Advt

Related Articles

Back to top button