Kannada NewsKarnataka News

ಮಟಕಾ ದಾಳಿ; ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಮಟಕಾ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಇಬ್ಬರನ್ನು ಬಂಧಿಸಿ, ಒಂದು ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.

ಕ್ಯಾಂಪ್ ಪೊಲೀಸ್ ಠಾಣೆಯ ವ್ಯಾಪ್ತಿಯ ವಿನಾಯಕ ನಗರದಲ್ಲಿ ಓಸಿ/ಮಟಕಾ ಆಡುತ್ತಿದ್ದಾರೆ ಎಂದು ಖಚಿತವಾದ ಮಾಹಿತಿ ಬಂದಂತೆ ಸಿಪಿಐ ಸಂಜೀವ ಕಾಂಬ್ಳೆ ಮತ್ತು ಸಿಬ್ಬಂದಿಗಳಾದ ಎ ಕೆ ಕಾಂಬಳೆ, ಬಿ ಎನ್ ಬಳಬನ್ನವರ, ಎಸ್ ಸಿ ಕೊರೆ, ಎಸ್ ಎಸ್ ಪಾಟೀಲ, ಸಿ ಜೆ ಚಿನ್ನಪ್ಪಗೋಳ ರವರು ದಾಳಿ ಮಾಡಿದರು.

ವೈಭವ ನಾವಿ(೩೪) (ಸಾ|| ವಿನಾಯಕ ನಗರ) ಮತ್ತು ಬಾಬಾಜಿ ಪಾವಸೆ (೩೪) (ಸಾ|| ಉಚಗಾಂವ) ಇವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ರೂ. ೧,೧೧,೩೬೦/- ಹಣ, ಓಸಿ ಚೀಟಿ, ಪೆನ್ನು, ಎರಡು ಮೋಬೈಲ್‌ಗಳನ್ನು ಜಪ್ತಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button