Kannada NewsLatest

ಮರಾಠಾ ಸಮಾಜಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ 6 ಗುಂಟೆ ಭೂದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮರಾಠಾ ಸಮಾಜ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಶಾಸಕ ರಮೇಶ ಜಾರಕಿಹೊಳಿ ಅವರು 6 ಗುಂಟೆ ಭೂದಾನ ಮಾಡಿದ್ದಾರೆ.

ಗೋಕಾಕನಲ್ಲಿ ಭಾನುವಾರ ನಡೆದ ಕರ್ನಾಟಕ ಕ್ಷತ್ರಿಯ ಮರಾಠಾ ಸಮಾಜದ ಸಮಾವೇಶದಲ್ಲಿ ರಮೇಶ ಜಾರಕಿಹೊಳಿ ಭೂದಾನದ ಘೋಷಣಾ ಪತ್ರವನ್ನು ಮರಾಠಾ ಸಮಾಜದ ಮುಖಂಡರಿಗೆ ಹಸ್ತಾಂತರಿಸಿದರು.

ಭೂದಾನಕ್ಕಾಗಿ ಶಾಸಕ ರಮೇಶ ಜಾರಕಿಹೊಳಿಯವರನ್ನು ಶ್ರೀ ಮಂಜುನಾಥ ಸ್ವಾಮೀಜಿ ಹಾಗೂ ಮರಾಠಾ ಸಮಾಜದ ಸಂಯೋಜಕ ಕಿರಣ ಜಾಧವ ಅಭಿನಂದಿಸಿದರಲ್ಲದೆ, ಸಮಾಜದ ಅಭಿವೃದ್ಧಿಗೆ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಅರಬಾವಿ ಕ್ಷೇತ್ರದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ,   ವಕೀಲರ ಸಂಘದ ರಾಜ್ಯ ಉಪಾಧ್ಯಕ್ಷ ವಿನಯ ಮಾಂಗಳೇಕರ, ಗೋಕಾಕ ಮರಾಠಾ ಸಮಾಜದ ಮುಖಂಡ ಜಿತೇಂದ್ರ ಮಾಂಗಳೇಕರ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

Home add -Advt

ಆಡಳಿತ ಸೌಧದ ಆವರಣದಲ್ಲಿ ಆತ್ಮಹತ್ಯೆಗೆ ಶರಣಾದ ಮುಖ್ಯೋಪಾಧ್ಯಾಯ

https://pragati.taskdun.com/the-headmaster-committed-suicide-in-the-premises-of-the-administrative-building/

*ಬೆಳಗಾವಿ: ಪಬ್ ನಿಂದ ಜಿಗಿದು ಯುವಕ ದುರ್ಮರಣ*

https://pragati.taskdun.com/youngdeathjumpbuildingbelagavi/

ಹಡಪದ ಸಮಾಜದ ಸಮಸ್ಯೆಗಳಿಗೆ ಸೂಕ್ತ ಪರಿಹಾರ – ಬಾಲಚಂದ್ರ ಜಾರಕಿಹೊಳಿ

https://pragati.taskdun.com/a-suitable-solution-to-the-problems-of-hadapa-comunity-balachandra-jarakiholi/

Related Articles

Back to top button