Kannada NewsKarnataka News

ಈ ದೇಶದಲ್ಲಿ ಕಾಂಗ್ರೇಸ್ ಪಕ್ಷವೇ ಇಲ್ಲದಂತೆ ಮಾಡುವ ಶಕ್ತಿ ಮೋದಿಗಿದೆ – ಕೇಂದ್ರ ಸಚಿವ ಅಠವಳೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ದೇಶದಲ್ಲಿ ಸಂವಿಧಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಪ್ರಧಾನ ಮಂತ್ರಿ ಮೋದಿ ಅವರಿಗೆ ಮಾತ್ರ ಈ ದೇಶದಲ್ಲಿ ಕಾಂಗ್ರೇಸ್ ಪಕ್ಷವೇ ಇಲ್ಲದಂತೆ ಮಾಡುವ ಶಕ್ತಿ ಇದೆ ಎಂದು ಮಹಾರಾಷ್ಟ್ರದ ದಲಿತ ಮುಖಂಡ ಆರ್‌ಪಿಐ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠವಳೆ ಹೇಳಿದರು. 

ಮಂಗಳವಾರ ಸಂಜೆ ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ಗಳತಗಾ ಗ್ರಾಮದಲ್ಲಿ  ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆಯವರ ಪ್ರಚಾg ಸಭೆಯನ್ನುದ್ದೇಶಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನಕ್ಕೆ ಅಪಾರವಾದ ಶಕ್ತಿ ಇದೆ. ಹಾಗೇನೇ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಭಾರತ ಯೋಗ್ಯ ರೀತಿಯಲ್ಲಿ ವಿಶ್ವದಲ್ಲಿ ಮುನ್ನಡೆಯುತ್ತಿದೆ” ಎಂದು ತಿಳಿಸಿದರು.

ಸಚಿವೆ, ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸದೇ ಹೋಗಿದ್ದರೆ ತಾನೊಬ್ಬ ಸಚಿವಳಾಗಿ ನಾನು ತಮ್ಮ ಮುಂದೆ ನಿಲ್ಲಲು ಆಗುತ್ತಿರಲಿಲ್ಲ. ಹಾಗಾಗಿ ತನಗೆ ಡಾ. ಬಿ ಆರ್ ಅಂಬೇಡ್ಕರ, ಛತ್ರಪತಿ ಶಿವಾಜಿ ಮಹಾರಾಜರು, ಜಗಜ್ಯೋತಿ ಬಸವೇಶ್ವರ ಅವರು ಆದರ್ಶರು. ಅವರ ದಾರಿಯಲ್ಲಿಯೇ ತಾನು ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿ. ನಿಪ್ಪಾಣಿಯ ಸರ್ವಾಂಗೀಣ ಅಭಿವೃದ್ಧಿಯ ಮುಂದುವರಿಕೆಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು. 

ಅಂಬೇಡ್ಕರ ಅವರಿಗೂ ನಿಪ್ಪಾಣಿ ವರಾಳೆ ಕುಟುಂಬಕ್ಕು ಅವಿನಾಭಾವ ಸಂಬಧವಿತ್ತು ಹೀಗಾಗಿ ಅವರು ನಿಪ್ಪಾಣಿಗೆ ಬಂದಾಗಲೆಲ್ಲಾ ಗವಾನ ಬಳಿ ಗುಡ್ಡದ ಪ್ರದೇಶಕ್ಕೆ ವಾಯುವಿಹಾರಕ್ಕೆ ತೆರಳುತ್ತಿದ್ದರು. ಅಲ್ಲಿ ಅವರ ಸ್ಮಾರಕ ನಿರ್ಮಿಸಲು ೧೦ ಎಕರೆ ಜಾಗೆಯನ್ನು ಪಡೆದಿದ್ದು,ಎಸ್.ಸಿ.ಎಸ್.ಟಿ ವಿದ್ಯಾರ್ಥಿಗಳು ಸಹ ವಿದ್ಯಾವಂತರಾಗಿ ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗೆ ಸೇರಬೇಕೆಂಬುದು ನಮ್ಮ ಬಯಕೆಯಾಗಿದೆ. ಹೀಗಾಗಿ ಅಲ್ಲಿ ಒಂದು ವಿಜ್ಞಾನ ಕೇಂದ್ರ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. 

ರಾಜ್ಯಸಭಾ ಸದಸ್ಯ ಧನಂಜಯ ಮಾಡಿಕ ಮಾತನಾಡಿ”ನಿಪ್ಪಾಣಿ ವಿಧಾನಸಭೆ ಕ್ಷೇತ್ರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಸವಾರ್‌ಂಗೀಣ ಅಭಿವೃದ್ಧಿಯನ್ನು ಮಾಡಿದ್ದು, ಇನ್ಣೂ ಹಲವು ಸಮಸ್ಯೆಗಳಿಗೆ ಪರಿಹಾರಕ್ಕೆ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ವಿನಂತಿಸಿಕೊAಡರು. 

ನಿಪ್ಪಾಣಿ ಚುನಾವಣೆ ಉಸ್ತುವಾರಿ  ನಾಂದೇಡದ ಡಾ. ಅಜೀತ ಗೋಪಚಾಡೆ, ಕೊಲ್ಲಾಪುರದ ಬಿಜೆಪಿ ರಾಜ್ಯಸಭಾ ಸದಸ್ಯರಾದ ಧನಂಜಯ ಮಹಾಡಿಕ ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಣವ ಮಾನವಿ, ದುಂಡಪ್ಪ ಬೆಂಡವಾಡೆ, ಚಂದ್ರಕಾಂತ ಕೋಟಿವಾಲೆ, ಮಲಗೌಡ ಪಾಟೀಲ, ಮುಖಂಡರಾದ ಸುಭಾಷ ಯರನಾಳೆ, ರೂಪಾಲಿ ವಾಯ್ದಂಡೆ,  ಉತ್ತಮ ಕಾಂಬಳೆ, ಶಹಾಜಿ ಕಾಂಬಳೆ ಹಾಗೂ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. 

https://pragati.taskdun.com/bjp-candidate-minister-sasikala-jolle-is-campaigning-fiercely-in-tavandi-village/
https://pragati.taskdun.com/shashikala-jollenippanicampaign/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button