Kannada NewsKarnataka NewsLatest

ಕುಡಚಿ ಮತಕ್ಷೇತ್ರದ ವಿವಿಧ ಗ್ರಾಮಗಳ ಅಹವಾಲು ಸ್ವೀಕರಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ

 ಪ್ರಗತಿವಾಹಿನಿ ಸುದ್ದಿ, ಕುಡಚಿ – ಕುಡಚಿ ಮತಕ್ಷೇತ್ರದ ಗ್ರಾಮಗಳಾದ ಕಟಕಬಾವಿ, ದೇವಪ್ಪರಟ್ಟಿ, ಸವಸುದ್ದಿ,ಇಟ್ಟನಾಳ, ಬಸ್ತವಾಡ, ಅಳಗವಾಡಿ, ಮೊರಬ ಹಾಗೂ ಬೆಕ್ಕೇರಿ ಗ್ರಾಮಗಳ ಸಾರ್ವಜನಿಕರಿಂದ  ಚಿಕ್ಕೋಡಿಯ ಲೋಕಸಭಾ ಸದಸ್ಯ  ಅಣ್ಣಾಸಾಹೇಬ ಜೋಲ್ಲೆ ಅಹವಾಲುಗಳನ್ನು ಸ್ವೀಕರಿಸಿದರು.
ನಂತರ ಅಳಗವಾಡಿ ಗ್ರಾಮದ ಬೇಡಿಕೆಗಳಾದ ಬಸ್ಸು ತಂಗುದಾಣ, ಸರಕಾರಿ ಆಸ್ಪತ್ರೆ, ಸರಕಾರಿ ಪಿ.ಯು.ಸಿ ಕಾಲೇಜು, ಸೇತುವೆ, ವಿದ್ಯುತ್ ಸಮಸ್ಯೆಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು. ಅವುಗಳನ್ನು ಸಂಸದರು ಆದಷ್ಟು ಬೇಗ ಈಡೇರಿಸುವುದಾಗಿ ಜನರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕುಡಚಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಖಾಣಗೌಡರ, ಮಹಾದೇವ ಶಿರಗುರ, ವೆಂಕಟೇಶ ದೇಶಪಾಂಡೆ, ಶ್ಯಾಮರಾವ ಬನಶಂಕರಿ, ಯಲ್ಲಪ್ಪ ಶಿರಗೂರೆ, ಗ್ರಾ.ಪಂ.ಅಧ್ಯಕ್ಷ ಆಶಾ ಕಲಾಲ, ಕುಮಾರ ಬನಶಂಕರಿ, ಶಿವಪುತ್ರ ಹಾಡಕಾರ, ಮಾರುತಿ ಕಲಾಲ ಹಾಗೂ ಆಶಾ , ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button