Film & Entertainment

*ನಿರ್ದೇಶಕನ ಹತ್ಯೆಗೆ ಯತ್ನ: ನಟ ತಾಂಡವ ರಾಮ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮುಗಿಲ್ ಪೇಟೆ ಸಿನಿಮಾ ನಿರ್ದೇಶಕ ಭರತ್ ಹತ್ಯೆಗೆ ಯತ್ನ ನಡೆಸಿದ್ದ ಹಿನ್ನೆಲೆಯಲ್ಲಿ ನಟ ತಾಂಡವ ರಾಮ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮುಗಿಲ್ ಪೇಟೆ ಸಿನಿಮಾ ಅರ್ಧಕ್ಕೆ ನಿಲ್ಲಿಸಿದ್ದಕ್ಕೆ ನಿರ್ದೇಶಕ ಭರತ್ ಹಾಗೂ ನಟ ತಾಂಡವ ರಾಮ್ ನಡುವೆ ಗಲಾಟೆ ಆರಂಭವಾಗಿ ವೇಳೆ ಗುಂಡು ಹೊಡೆದು ನಿರ್ದೇಶಕನ ಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಲೈಸನ್ಸ್ ಹೊಂದಿದ್ದ ಗನ್ ನಿಂದ ತಾಂಡವ ರಾಮ್ ಒಂದು ಸುತ್ತು ಗುಂಡು ಹಾರಿಸಿದ್ದು, ನಿರ್ದೇಶಕನನ್ನೇ ಹತ್ಯೆಗೈಯ್ಯಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಚಂದ್ರಾಲೇಔಟ್ ಠಾಣೆ ಪೊಲೀಸರು ನಟ ತಾಂಡವ ರಾಮ್ ನನ್ನು ಬಂಧಿಸಿದ್ದಾರೆ.

Home add -Advt

ನಟ ತಾಂಡವ ರಾಮ್ ಜೋಡಿಹಕ್ಕಿ ಧಾರವಾಹಿ, ಒಂದು ಕಥೆ ಹೇಳ್ಲಾ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದರು.

Related Articles

Back to top button