Latest

*ಹರಿಯಾಣ ನಕ್ಸಲ್ ಬೆಂಗಳೂರಿನಲ್ಲಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಹರಿಯಾಣ ಮೂಲದ ನಕ್ಸಲ್ ನಾಯಕ ಬೆಂಗಳೂರಿನಲ್ಲಿ ಗೆಳತಿ ಭೇಟಿಯಾಗಲು ಬಂದು ಬಂಧಿಯಾಗಿರುವ ಘಟನೆ ನಡೆದಿದೆ.

ಅನಿರುದ್ಧ ರಾಜನ್ ಬಂಧಿತ ನಕ್ಸಲ್. ಈತ ನಿಷೇಧಿತ ಸಿಪಿಐ(ಎಂ)ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ನಿಷೇಧಿತ ಬರಹಗಳನ್ನು ಬರೆದು ಪೋಸ್ಟ್ ಮಾಡುತ್ತಿದ್ದ. ಈತನಿಗಾಗಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು.

ಬೆಂಗಳೂರಿಗೆ ಗೆಳತಿ ನೋದಲೆಂದು ಬಂದು 3-4 ದಿನಗಳಿಂದ ಇಲ್ಲಿಯೇ ಇದ್ದ. ಇಂದು ಬೆಳಿಗ್ಗೆ ಬೆಂಗಳೂರಿನಿಂದ ಚೆನ್ನೈಗೆ ಹೋಗಲೆಂಡು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ತೆರಳಿದ್ದ ವೇಳೆ ಎಟಿಎಸ್ ಅಧಿಕಾರಿಗಳು ಅನಿರುದ್ಧ್ ನನ್ನು ಬಂಧಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button